ಇಸ್ರೇಲ್ ಮೇಲೆ ಹಮಾಸ್ ಉಗ್ರರ ದಾಳಿ ಹಿನ್ನೆಲೆಯಲ್ಲಿ 29ರಂದು ರಾಜ್ಯದ 30 ಜನರ ರೈತರ ತಂಡ 7 ದಿವಸಗಳ ಕಾಲ ಕೈಗೊಂಡಿದ್ದ ಇಸ್ರೇಲ್ ಅಧ್ಯಯನ ಪ್ರವಾಸ ರದ್ದುಪಡಿಸಲಾಗಿದೆ.
ಕನ್ನಡಪ್ರಭ ವಾರ್ತೆ, ತುಮಕೂರು ಇಸ್ರೇಲ್ ಮೇಲೆ ಹಮಾಸ್ ಉಗ್ರರ ದಾಳಿ ಹಿನ್ನೆಲೆಯಲ್ಲಿ 29ರಂದು ರಾಜ್ಯದ 30 ಜನರ ರೈತರ ತಂಡ 7 ದಿವಸಗಳ ಕಾಲ ಕೈಗೊಂಡಿದ್ದ ಇಸ್ರೇಲ್ ಅಧ್ಯಯನ ಪ್ರವಾಸ ರದ್ದುಪಡಿಸಲಾಗಿದೆ. ತುಮಕೂರಿನ ಪ್ರಗತಿಪರ ರೈತ ಅಶೋಕ ನೇತೃತ್ವದಲ್ಲಿ 30 ಮಂದಿ ರೈತರ ತಂಡ ಇದೇ ತಿಂಗಳ 29ರಂದು 7 ದಿವಸಗಳ ಇಸ್ರೇಲ್ ಅಧ್ಯಯನ ಪ್ರವಾಸ ಹೊರಟಿತ್ತು. ಇಸ್ರೇಲ್ ನ ಕೃಷಿ ತಂತ್ರಜ್ಞಾನ, ಹೈನುಗಾರಿಕೆ ಅಧ್ಯಯನಕ್ಕೆ ಪ್ರವಾಸ ತೆರಳಲು ರೈತರು ಸಜ್ಜಾಗಿದ್ದರು. ಇಸ್ರೇಲ್ ಮಾದರಿ ಕೃಷಿಯನ್ನು ಕರ್ನಾಟಕ ರೈತರಿಗೆ ಪರಿಚಯಿಸಲು ಅಶೋಕ್ ಮುಂದಾಗಿದ್ದರು. ಅಲ್ಲದೇ ಇಸ್ರೇಲ್ ನಿಂದ 100 ಹಸುಗಳನ್ನು ಕರ್ನಾಟಕಕ್ಕೆ ತರಲು ಸಿದ್ಧತೆ ನಡೆಸಿದ್ದರು. ಇಸ್ರೇಲ್ ನ ಹಲವು ಭಾಗಗಳಿಗೆ ತೆರಳಬೇಕಾಗಿತ್ತು. ಆದರೆ, ಉಗ್ರರ ದಾಳಿ ಹಿನ್ನೆಲೆಯಲ್ಲಿ ಪ್ರವಾಸ ರದ್ದಾಗಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.