ಕನಕಪುರ: ಬದಲಾದ ಸಮಾಜದ ಪರಿಸ್ಥಿತಿಯಲ್ಲಿ ಎಲ್ಲಾ ಸಮುದಾಯಗಳು ಒಗ್ಗೂಡುತ್ತಿದ್ದು, ಒಕ್ಕಲಿಗ ಸಮುದಾಯವೂ ಒಗ್ಗೂಡಬೇಕಿದೆ ಎಂದು ಆದಿಚುಂಚನಗಿರಿ ರಾಮನಗರ ಶಾಖಾ ಮಠದ ಅನ್ನದಾನೇಶ್ವರನಾಥ ಸ್ವಾಮೀಜಿ ಕರೆ ನೀಡಿದರು.
ರೂರಲ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಎಚ್.ಕೆ.ಶ್ರೀಕಂಠು ಮಾತನಾಡಿ, ಸಮಾಜದಲ್ಲಿ ಆಗುತ್ತಿರುವ ಅನ್ಯಾಯವನ್ನು ತಡೆಗಟ್ಟಲು ಹಾಗೂ ಸಮುದಾಯದ ಜನರನ್ನು ಸಂಘಟಿಸಲು ಸಂಘ ಸಂಸ್ಥೆಗಳ ಅನಿವಾರ್ಯತೆ ಇದೆ. ಒಕ್ಕಲಿಗ ಸಮುದಾಯ ನೇಗಿಲ ಯೋಗಿ ಸಮಾಜ ಸೇವಾ ಟ್ರಸ್ಟ್ ಅಡಿಯಲ್ಲಿ ಸಂಘಟನೆಗೆ ಮುಂದಾಗಿರುವುದು ಉತ್ತಮ ಬೆಳವಣಿಗೆ ಎಂದು ಹೇಳಿದರು.
ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್ ಅಧ್ಯಕ್ಷ ಗಬ್ಬಾಡಿ ಕಾಡೆಗೌಡ, ಗೌರವಾಧ್ಯಕ್ಷ ಚಿಕ್ಕೆಂಪೇಗೌಡ, ಪದಾಧಿಕಾರಿಗಳಾದ ಹುಚ್ಚಪ್ಪ, ಕುಮಾರಸ್ವಾಮಿ, ಕೂಗಿ ಗಿರಿಯಪ್ಪ, ಎಲ್ಲೆಗೌಡ ಬೆಸಗರಹಳ್ಳಿ, ಯು ವಿ ಸ್ವಾಮಿಗೌಡ, ಚಿಕ್ಕ ರಂಗಯ್ಯ, ಟಿ.ಎಂ.ರಾಮಯ್ಯ, ಕಬ್ಬಾಳೇಗೌಡ, ಸಿದ್ದರಾಜು, ಬೊಮ್ಮನಹಳ್ಳಿ ಕುಮಾರ, ದೇವರಾಜು, ಅಂದಾನಿಗೌಡ, ಚೀಲೂರು ಮುನಿರಾಜು, ಅಂಗಡಿ ರಮೇಶ್, ಸತೀಶ್, ದೊಡ್ಡಿ ಬೀದಿ ನಾಗೇಶ್, ಬಸವರಾಜು, ಶಿವರಾಮೇಗೌಡ, ಬೈರೇಗೌಡ, ಓಂಕಾರೇಶ್ವರ, ಪ್ರಕಾಶ್ ಬನ್ನಿಕುಪ್ಪೆ, ಸಿ.ರಾಜು ಉಪಸ್ಥಿತರಿದ್ದರು.ಕೆ ಕೆ ಪಿ ಸುದ್ದಿ 01:
ಕನಕಪುರದ ರೂರಲ್ ಎಜುಕೇಶನ್ ಸೊಸೈಟಿ ಕಚೇರಿಯಲ್ಲಿ ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್ ಕ್ಯಾಲೆಂಡರ್ ಅನ್ನು ದಿಚುಂಚನಗಿರಿ ರಾಮನಗರ ಶಾಖಾ ಮಠದ ಅನ್ನದಾನೇಶ್ವರನಾಥ ಸ್ವಾಮೀಜಿ ಬಿಡುಗಡೆ ಮಾಡಿದರು.