ಕೊಪ್ಪಳ: ಮಕ್ಕಳಲ್ಲಿ ಮೌಲ್ಯಯುತ ಶಿಕ್ಷಣ ಬೆಳೆಸುವ ಅವಶ್ಯಕತೆ ಇದೆ ಎಂದು ಡಯಟ್ ಹಿರಿಯ ಉಪನ್ಯಾಸಕ, ಕಾರ್ಯಕ್ರಮದ ನೋಡಲ್ ಅಧಿಕಾರಿ ಗವಿಸಿದ್ದೇಶ್ವರಸ್ವಾಮಿ ಬೆನಕಲ್ಮಠ ಹೇಳಿದರು.
ಜಿಲ್ಲಾ ಸ.ಪ್ರಾ.ಶಾ.ಶಿ. ಸಂಘ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಮಂಜುನಾಥ ಬೂಮಕ್ಕನವರು ಹಾಗೂ ಜಿಪಿಟಿ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಮಾರುತಿ ಮ್ಯಾಗಳಮನಿ ಮಾತನಾಡಿ, ಮಕ್ಕಳ ಶೈಕ್ಷಣಿಕ ಅಭಿವೃದ್ಧಿ ದೃಷ್ಠೀಕೋನ ಪ್ರತಿಯೊಬ್ಬರ ಚಿಂತನೆ ಆಗಬೇಕು ಎಂದರು.
ಬಿಆರ್ ಪಿ ಜ್ಞಾನಸೇತು ತಾಲೂಕು ನೋಡಲ್ ಅಧಿಕಾರಿ ಮಂಜುನಾಥ ಕೊಪ್ಪಳ, ಎಪಿಎಫ್ ಶೋಭನಾ, ಸುಮಂಗಲಾ, ಬಿಆರ್ ಪಿ ಹನುಮರೆಡ್ಡಿ, ಸಂಪನ್ಮೂಲ ವ್ಯಕ್ತಿ ವೀರೇಶ ಮೇಟಿ, ಜಿಪಿಟಿ ಸಂಘದ ತಾಲೂಕು ಸಂಘಟನಾ ಕಾರ್ಯದರ್ಶಿ ನೇತ್ರಾವತಿ ಹಳ್ಳಿ, ತಾಲೂಕು ಪದಾಧಿಕಾರಿ ಗವಿಸಿದ್ದಪ್ಪ, ಸಂಪನ್ಮೂಲ ವ್ಯಕ್ತಿ ಮರ್ದಾನಪ್ಪ ಇತರರಿದ್ದರು.