ಹಿಂದೂ ಧಾರ್ಮಿಕ ನಂಬಿಕೆ ಹಾಳುಗೆಡವೋದು ಸರಿಯಲ್ಲ: ಯತ್ನಾಳ್

KannadaprabhaNewsNetwork |  
Published : Sep 18, 2025, 02:00 AM IST
ತಾಲೂಕಿನ ಮರಡಿ ಗ್ರಾಮದಲ್ಲಿ ನಡೆದ ಗಣೇಶೋತ್ಸವ ಸಮಾರಂಭದ ಉದ್ಘಾಟನೆಯನ್ನು ನೆರವೇರಿಸಿದ ವಿಜಯಪುರ ಕ್ಷೇತ್ರದ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ | Kannada Prabha

ಸಾರಾಂಶ

ಚನ್ನಗಿರಿಗೆ ಬಂದರೆ ಪೊರಕೆ ಸೇವೆ ಮಾಡುತ್ತೇನೆ ಎಂದು ಕೆಲವರು ಹೇಳುತ್ತಿದ್ದರು. ಅಂತಹ ಮಾತುಗಳಿಗೆ ಯಾವುದಕ್ಕೂ ನಾನು ಜಗ್ಗುವಂಥವನಲ್ಲ. ನನ್ನದೇ ಆದ ಸಿದ್ಧಾಂತದ ಮೇಲೆ ರಾಜಕಾರಣ ಮಾಡುತ್ತಿರುವ ರಾಜಕಾರಣಿ ನಾನು ಎಂದು ವಿಜಯಪುರ ಕ್ಷೇತ್ರದ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.

- ಚನ್ನಗಿರಿ ತಾಲೂಕಿನ ಮರಡಿ ಗ್ರಾಮದಲ್ಲಿ ಗಣಪತಿ ಮಂಟಪಕ್ಕೆ ಭೇಟಿ, ಸಭೆ

- - -

ಕನ್ನಡಪ್ರಭ ವಾರ್ತೆ ಚನ್ನಗಿರಿ

ಚನ್ನಗಿರಿಗೆ ಬಂದರೆ ಪೊರಕೆ ಸೇವೆ ಮಾಡುತ್ತೇನೆ ಎಂದು ಕೆಲವರು ಹೇಳುತ್ತಿದ್ದರು. ಅಂತಹ ಮಾತುಗಳಿಗೆ ಯಾವುದಕ್ಕೂ ನಾನು ಜಗ್ಗುವಂಥವನಲ್ಲ. ನನ್ನದೇ ಆದ ಸಿದ್ಧಾಂತದ ಮೇಲೆ ರಾಜಕಾರಣ ಮಾಡುತ್ತಿರುವ ರಾಜಕಾರಣಿ ನಾನು ಎಂದು ವಿಜಯಪುರ ಕ್ಷೇತ್ರದ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಹೇಳಿದರು.

ತಾಲೂಕಿನ ಮರಡಿ ಗ್ರಾಮದಲ್ಲಿ ಬಸವೇಶ್ವರ ವಿನಾಯಕ ಗೆಳೆಯರ ಬಳಗದಿಂದ ಪ್ರತಿಷ್ಠಾಪಿಸಿದ್ದ ಗಣಪತಿ ಮಂಟಪಕ್ಕೆ ಭೇಟಿ ನೀಡಿ, ಪೂಜೆ ಸಲ್ಲಿಸಿ ಅನಂತರ ನಡೆದ ಸಾರ್ವಜನಿಕ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು.

ಗಣಪತಿಯ ಉತ್ಸವ ಮಾಡಲು ರಾಜ್ಯ ಸರ್ಕಾರ ಅನೇಕ ಕಠಿಣ ಕಾನೂನುಗಳನ್ನು ಜಾರಿಗೆ ತರುತ್ತಾರೆ. ಹಿಂದೂ ಧರ್ಮದಲ್ಲಿರುವ ಧಾರ್ಮಿಕ ನಂಬಿಕೆ ಹಾಳು ಮಾಡುವುದು ಸರಿಯಲ್ಲ. ನಮ್ಮ ಯುವಕರು ಡಿ.ಜೆ. ಹಾಕಿಕೊಂಡು ವರ್ಷಕ್ಕೆ ಒಂದು ಬಾರಿ ಕುಣಿಯುತ್ತಾರೆ. ಆದರೆ ಮುಸ್ಲಿಂಮರು ಪ್ರತಿದಿನ ಐದು ಬಾರಿ ಅಜಾನ್ ಕೂಗುತ್ತಾರೆ. ಇದರಿಂದ ನಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಮತ್ತು ಮನೆಗಳಲ್ಲಿರುವ ವಯೋವೃದ್ಧರಿಗೆ ಎಷ್ಟು ತೊಂದರೆಗಳಾಗುತ್ತವೆ ಎಂಬುದನ್ನು ಸಿದ್ದರಾಮಯ್ಯ ತಿಳಿದು ಮಾತನಾಡಲಿ ಎಂದರು.

ಆರ್.ಸಿ.ಬಿ.ಯ ಕ್ರಿಕೆಟ್ ತಂಡ ಗೆಲುವು ಸಾಧಿಸಿದಾಗ ವಿಜಯೋತ್ಸವ ಮಾಡುವುದು ಬೇಡ ಎಂದು ಪೊಲೀಸ್ ಆಧಿಕಾರಿಗಳು ಪರಿಪರಿಯಾಗಿ ಮನವಿ ಮಾಡಿದ್ದರು. ಆದರೂ, ಉಪ ಮುಖ್ಯಮಂತ್ರಿ ಮತ್ತು ಮುಖ್ಯಮಂತ್ರಿಗಳು ಹಠಮಾಡಿ ವಿಜಯೋತ್ಸವ ನಡೆಸಿ ಸೂಕ್ತ ಬಂದೋಬಸ್ತ್ ಮಾಡಿಕೊಳ್ಳದೇ, 11 ಜನ ಅಮಾಯಕ ಯುವಕರು ಬಲಿ ಪಡೆದರು. ಇದಕ್ಕೆ ನಿಷ್ಠಾವಂತ ಪೊಲೀಸ್ ಆಧಿಕಾರಿಗಳ ತಲೆದಂಡ ಮಾಡಿರುವುದು ಸರಿಯೇ ಎಂದು ಪ್ರಶ್ನಿಸಿದರು.

ಚಾಮರಾಜ ನಗರದಿಂದ ಬೀದರ್‌ವರೆಗೆ ಅರ್ಜೆಸ್ಟ್‌ಮೆಂಟ್ ರಾಜಕಾರಣ ನಡೆದಿದೆ. ಅರ್ಜೆಸ್ಟ್‌ಮೆಂಟ್ ಮಾಡಿಕೊಳ್ಳದೇ ಇರುವ ನನ್ನಂತಹ ನಿಷ್ಠಾವಂತರಿಗೆ ಪಕ್ಷದಿಂದ ಉಚ್ಚಾಟನೆ ಮಾಡಿದ್ದಾರೆ. ಈಗ ರಾಜ್ಯದಲ್ಲಿ ಹಿಂದುತ್ವದ ಅಲೆ ಸುನಾಮಿಯಂತೆ ಎದ್ದಿದೆ. ವಿಧಾನಸೌಧದಲ್ಲಿ ಗಟ್ಟಿಯಾಗಿ ಮಾತನಾಡುತ್ತಾನೆ ಯತ್ನಾಳ್ ಎಂಬ ಕಾರಣಕ್ಕಾಗಿ ರಾಜ್ಯದ ಜನತೆ ನನ್ನ ಬೆನ್ನಿಗೆ ನಿಂತಿದ್ದಾರೆ ಎಂದರು.

ರಾಜ್ಯದಲ್ಲಿ ಹಿಂದುತ್ವದ ಪರವಾದ ಸರ್ಕಾರ ಅಧಿಕಾರಕ್ಕೆ ಬರಬೇಕು ಎಂಬ ಕೂಗು ಹೆಚ್ಚಾಗಿದ್ದು, ನಾನು ಅಧಿಕಾರಕ್ಕೆ ಬಂದರೆ ನನ್ನ ಪ್ರಮಾಣ ವಚನ ಸಂದರ್ಭದಲ್ಲಿ ವಿಧಾನಸೌದ ಮುಂದೆ ಜೆಸಿಬಿ ಯಂತ್ರವನ್ನು ನಿಲ್ಲಿಸಿಕೊಂಡು ಪ್ರಮಾಣ ವಚನ ಸ್ವೀಕರಿಸುತ್ತೇನೆ. ರಾಜ್ಯದಲ್ಲಿ ಮುಸ್ಲಿಮರು 50 ಪರ್ಸೆಂಟ್ ದಾಟಿದರೆ ಹಿಂದೂಗಳಿಗೆ ಭವಿಷ್ಯವಿಲ್ಲ. ಅದನ್ನು ಅರಿತುಕೊಂಡು ಮುಂದಿನ ದಿನಗಳಲ್ಲಿ ಹಿಂದೂಗಳು ಒಗ್ಗಟ್ಟಾಗಿ ಮತಗಳನ್ನು ನೀಡಬೇಕು ಎಂದರು.

ಸಮಾರಂಭದಲ್ಲಿ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ, ರೈತ ಮುಖಂಡ ತೇಜಸ್ವಿ ವಿ. ಪಟೇಲ್, ಗ್ರಾ.ಪಂ. ಅಧ್ಯಕ್ಷ ಪುಪ್ಪಾ ಪ್ರಕಾಶ್, ರೇಣುಕಮ್ಮ, ಪವನ್ ಕುಮಾರ್, ಎಚ್.ಕೆ. ಹಾಲೇಶ್, ಸಂಗಮೇಶ್, ಅಶೋಕ್ ಗೋಪನಾಳ್, ರಾಜು, ಪ್ರಜ್ವಲ್, ಗ್ರಾಮಸ್ಥರು ಭಾಗವಹಿಸಿದ್ದರು.

- - -

(ಕೋಟ್‌)

ಚನ್ನಗಿರಿ ತಾಲೂಕಿನಲ್ಲಿ ಜೆ.ಎಚ್.ಪಟೇಲ್‌ರಂತಹ ಮೇಧಾವಿ ರಾಜಕಾರಣಿ ಜನಿಸಿರುವುದು ಈ ತಾಲೂಕಿನ ಸೌಭಾಗ್ಯವಾಗಿದೆ. ನಡೆದಾಡುವ ಗ್ರಂಥದಂತೆ ಇದ್ದಂತವರಾಗಿದ್ದರು. ಅವರು ರಾಜಕಾರಣದಲ್ಲಿ ಮೇರುವ್ಯಕ್ತಿತ್ವವನ್ನು ಹೊಂದಿದರು. ಅವರು ಮುಖ್ಯಮಂತ್ರಿ ಆಗಿದ್ದಾಗ ನಾನು ಸಂಸತ್ ಸದಸ್ಯನಾಗಿದ್ದೆ. ಅಂಥವರ ಒಡನಾಟದಲ್ಲಿ ನಾನು ರಾಜಕಾರಣ ಮಾಡಿದ್ದು ನನ್ನ ಸೌಭಾಗ್ಯ.

- ಬಸವನಗೌಡ ಪಾಟೀಲ ಯತ್ನಾಳ, ಶಾಸಕ, ವಿಜಯಪುರ ಕ್ಷೇತ್ರ.

- - -

-17ಕೆಸಿಎನ್‌ಜಿ5.ಜೆಪಿಜಿ:

ಚನ್ನಗಿರಿ ತಾಲೂಕಿನ ಮರಡಿ ಗ್ರಾಮದಲ್ಲಿ ನಡೆದ ಗಣೇಶೋತ್ಸವ ಸಮಾರಂಭವನ್ನು ವಿಜಯಪುರ ಕ್ಷೇತ್ರ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಉದ್ಘಾಟಿಸಿದರು.

PREV

Recommended Stories

ಹಿಂದೂ ಮಹಾಗಣಪತಿ ಮೂರ್ತಿಯ ವಿಸರ್ಜನೆ
ಪ್ಲಾನಿಂಗ್‌ ಆ್ಯಂಡ್ ಆರ್ಕಿಟೆಕ್ಚರ್‌ ಸ್ಕೂಲ್‌ ಆರಂಭಕ್ಕೆ ಸಿದ್ಧತೆ: ಡಿಕೆಶಿ