ಜೆ.ರಾಜು ವಿದ್ಯಾರ್ಥಿಗಳಿಗೆ ಅಚ್ಚುಮೆಚ್ಚಿನ ಶಿಕ್ಷಕ: ಡಿ.ಬಿ.ದಯಾನಂದ್

KannadaprabhaNewsNetwork | Published : Jun 27, 2025 12:49 AM

ಸೇವೆ ವೇಳೆ ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಪ್ರೀತಿಗಳಿಸಿದ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಅವರಿಗೆ ಜನ ಮೆಚ್ಚಿದ ಶಿಕ್ಷಕ ಪ್ರಶಸ್ತಿ ಮತ್ತು ತಾಲೂಕು ಆಡಳಿತದಿಂದ ಸ್ವತಂತ್ರ ದಿನಾಚರಣೆ ದಿನದಂದು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಹಲವು ಸಂಘ- ಸಂಸ್ಥೆಗಳಲ್ಲಿ ಅವರ ಸೇವೆ ಗುರುತಿಸಿ ಸನ್ಮಾನಿಸಲಾಗಿದೆ .

ಕನ್ನಡಪ್ರಭ ವಾರ್ತೆ ಮಳವಳ್ಳಿ

ಶಿಕ್ಷಣ, ಸಾಹಿತ್ಯ, ಸಮಾಜ ಸೇವೆ ಮೂಲಕ ಜೆ.ರಾಜು ಪೋಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಹಾಗೂ ಗ್ರಾಮಸ್ಥರಿಗೆ ಅಚ್ಚುಮೆಚ್ಚಿನ ಶಿಕ್ಷಕರಾಗಿದ್ದರು ಎಂದು ಶಿಕ್ಷಣ ಸಂಯೋಜಕ ಡಿ.ಬಿ.ದಯಾನಂದ್ ತಿಳಿಸಿದರು.

ತಾಲೂಕಿನ ಬಿಜಿಪುರ ಹೋಬಳಿಯ ಕೊಡಗಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಹ ಶಿಕ್ಷಕರಾಗಿ ಸೇವೆ ಸಲ್ಲಿಸಿ, ಶನಿವಾರ ವಯೋನಿವೃತ್ತಿ ಹೊಂದಿದ ಜೆ.ರಾಜು ಮತ್ತು ಎಂ.ಎಸ್.ನಾಗೇಂದ್ರಸ್ವಾಮಿ ಅವರಿಗೆ ಶಿಕ್ಷಣ ಇಲಾಖೆ, ಶಾಲಾ ಆಡಳಿತ ಮಂಡಳಿ, ವಿವಿಧ ಶಾಲೆ ಶಿಕ್ಷಕರು ಹಾಗೂ ಗ್ರಾಮಸ್ಥರಿಂದ ಅದ್ಧೂರಿಯಾಗಿ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು.

1994ರಲ್ಲಿ ಐನೋರಹುಂಡಿ ಸರ್ಕಾರಿ ಶಾಲೆಯಿಂದ ಪ್ರಾರಂಭವಾದ ಇವರ ಶಿಕ್ಷಣಸೇವೆ ಪೂರಿಗಾಲಿ, ಅಕ್ಕಮಲ್ಲನಹುಂಡಿ, ಮಳವಳ್ಳಿ ಬಿಆರ್‌ಸಿ, ಐಆರ್‌ಟಿ ಹಾಗೂ ಕೊಡಗಹಳ್ಳಿ ಸರ್ಕಾರಿ ಶಾಲೆಯಲ್ಲಿ 12 ವರ್ಷಗಳ ಕಾಲ ನಿರಂತರ ಸೇವೆ ಸಲ್ಲಿಸಿದ್ದಾರೆ ಎಂದರು.

ಸೇವೆ ವೇಳೆ ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಪ್ರೀತಿಗಳಿಸಿದ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಅವರಿಗೆ ಜನ ಮೆಚ್ಚಿದ ಶಿಕ್ಷಕ ಪ್ರಶಸ್ತಿ ಮತ್ತು ತಾಲೂಕು ಆಡಳಿತದಿಂದ ಸ್ವತಂತ್ರ ದಿನಾಚರಣೆ ದಿನದಂದು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಹಲವು ಸಂಘ- ಸಂಸ್ಥೆಗಳಲ್ಲಿ ಅವರ ಸೇವೆ ಗುರುತಿಸಿ ಸನ್ಮಾನಿಸಲಾಗಿದೆ ಎಂದರು.

ದಾನಿಗಳಿಂದ ತಮ್ಮ ಶಾಲೆ ಸೇರಿದಂತೆ ಹಲವು ಶಾಲೆಗಳಿಗೆ ಮಕ್ಕಳ ಕಲಿಕೆಗೆ ಬೇಕಾದ ಯಂತ್ರೋಪಕರಣಗಳನ್ನು ಸಹ ಕೊಡಿಸಿದ್ದಾರೆ. ಜೆ.ರಾಜು ಹಾಗೂ ನಾಗೇಂದ್ರಸ್ವಾಮಿ ಇವರ ನಿವೃತ್ತಿ ಜೀವನ ಮುಂದಿನ ದಿನಗಳಲ್ಲಿ ಸುಖಕರವಾಗಿರಲಿ ಎಂದು ಶುಭಹಾರೈಸಿದರು.

ಜೆ.ರಾಜು ಮತ್ತು ಎಂ.ಎಸ್.ನಾಗೇಂದ್ರಸ್ವಾಮಿ ಅವರನ್ನು ಶಾಲೆ, ಗ್ರಾಮಸ್ಥರು ಸೇರಿದಂತೆ ಹಲವಾರು ಶಾಲೆಗಳಿಂದ ಸಹೋದ್ಯೋಗಿ ಮಿತ್ರರು ಆಗಮಿಸಿ ನೆನಪಿನ ಕಾಣಿಕೆ ನೀಡಿ ನಿವೃತ್ತಿ ಶಿಕ್ಷಕ ದಂಪತಿಗೆ ಅಭಿನಂದನೆ ಸಲ್ಲಿಸಿದರು.

ಸಮಾರಂಭದಲ್ಲಿ ಎಸ್ ಡಿಎಂಸಿ ಅಧ್ಯಕ್ಷ ಎಂ.ರಾಜೇಶ್, ಬಿಆರ್ ಸಿ ಶ್ರೀನಿವಾಸ್, ಬಿಆರ್ ಪಿ ಬಾಬು,ಸರ್ಕಾರಿ ನೌಕರ ಸಂಘದ ತಾಲೂಕು ಅಧ್ಯಕ್ಷ ಎಚ್.ಮಲ್ಲಿಕಾರ್ಜುನಯ್ಯ, ಪ್ರಧಾನ ಕಾರ್ಯದರ್ಶಿ ಎಚ್.ಎಸ್.ಶಿವಶಂಕರ್, ಮುಖ್ಯಶಿಕ್ಷಕರ ಸಂಘದ ವಿಭಾಗೀಯ ಮಟ್ಟದ ಕಾರ್ಯದರ್ಶಿ ವಿ.ಎಲ್.ಬಸವರಾಜು, ಪಿಡಿಒ ಜಯಸ್ವಾಮಿ, ಗ್ರಾಪಂ ಅಧ್ಯಕ್ಷ ಬಿ.ಆರ್.ಸಿದ್ದರಾಜು, ಸದಸ್ಯೆ ನಾಗರತ್ನ, ಮುಖಂಡರಾದ ನಾಡಗೌಡ ನಂಜುಂಡಸ್ವಾಮಿ, ಶಾಂತರಾಜು, ಮಹದೇವಣ್ಣ, ನೀಲಶೆಟ್ಟಿ, ಮಲ್ಲೇಶ್, ಮುಖ್ಯಶಿಕ್ಷಕಿ ಪುಟ್ಟದೇವಮ್ಮ, ಸಹ ಶಿಕ್ಷಕಿ ಮಂಜುಳಾ, ದಲಿತ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಹುರುಗಲವಾಡಿ ರಾಮಯ್ಯ, ತಾಲೂಕು ಅಧ್ಯಕ್ಷ ಚುಂಚಣ್ಣ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ದಾಸೇಗೌಡ, ಸೋಮಶೇಖರ್, ಪಾಪಣ್ಣ ಸೇರಿದಂತೆ ವಿವಿಧ ಶಾಲೆಗಳ ಮುಖ್ಯಶಿಕ್ಷಕರು, ಸಹಶಿಕ್ಷಕರು ಹಾಗೂ ಗ್ರಾಮಸ್ಥರು ಹಾಜರಿದ್ದರು.