ಭಕ್ತರ ಸಮ್ಮುಖದಲ್ಲಿ ಜಗನ್ನಾಥಸ್ವಾಮಿ ರಥಯಾತ್ರೆ

KannadaprabhaNewsNetwork |  
Published : Jul 15, 2024, 01:45 AM IST
ಪೊಟೊ-14 ಕೆ ಎನ್‌ ಎಲ್‌ ಎಮ್‌ 1-ನೆಲಮಂಗಲ ಇಸ್ಕಾನ್ ನೆಲಮಂಗಲ ವತಿಯಿಂದ ನಗರದ ಪವಾಡ ಶ್ರೀಬಸವಣ್ಣ ದೇವರಮಠದ ಆವರಣದಲ್ಲಿ ಶ್ರೀ ಜಗನ್ನಾಥಸ್ವಾಮಿಯ ರಥಯಾತ್ರೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಂಭ್ರಮ ಸಡಗರದಿಂದ ನಡೆಯಿತು. | Kannada Prabha

ಸಾರಾಂಶ

ನೆಲಮಂಗಲ: ನಗರದ ಪವಾಡ ಶ್ರೀಬಸವಣ್ಣ ದೇವರಮಠದ ಆವರಣದಲ್ಲಿ ಶ್ರೀ ಜಗನ್ನಾಥಸ್ವಾಮಿಯ ರಥಯಾತ್ರೆ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಸಂಭ್ರಮದಿಂದ ನೆರವೇರಿತು.

ನೆಲಮಂಗಲ: ನಗರದ ಪವಾಡ ಶ್ರೀಬಸವಣ್ಣ ದೇವರಮಠದ ಆವರಣದಲ್ಲಿ ಶ್ರೀ ಜಗನ್ನಾಥಸ್ವಾಮಿಯ ರಥಯಾತ್ರೆ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಸಂಭ್ರಮದಿಂದ ನೆರವೇರಿತು.

ಭಾನುವಾರ ಬೆಳಗ್ಗೆ ಶ್ರೀಮಠದ ಆವರಣದಲ್ಲಿ ಸಮಾವೇಶಗೊಂಡ ಶ್ರೀಕೃಷ್ಣನ ಭಕ್ತವೃದ ಬೆಂಗಳೂರಿನ ಶೇಷಾದ್ರಿಪುರಂ ಇಸ್ಕಾನ್ ನೇತೃತ್ವದಲ್ಲಿ 12 ಗಂಟೆ ವೇಳೆ ದೇವರ ದರ್ಶನ ಗುರು ಆರತಿ ನೆರವೇರಿಸಿದ ಬಳಿಕ ಹರಿನಾಮ ಸಂಕೀರ್ತನೆಗಳು ದಾಸರ ಪದಗಳಿಂದ ದೇವರನ್ನು ಸಂತೃಪ್ತಿಗೊಳಿಸಿದರು.

ಮಧ್ಯಾಹ್ನದ ನಂತರ ಶ್ರೀ ಕ್ಷೇತ್ರಕ್ಕೆ ಬೆಂಗಳೂರಿನಿಂದ ಆಗಮಿಸಿದ್ದ ಶ್ರೀ ಜಗನ್ನಾಥ ಸ್ವಾಮಿಯ ಮೂರ್ತಿಗಳನ್ನು ವಿವಿಧ ಬಗೆಯ ಹೂ ಮತ್ತು ತಳಿರು ತೋರಣಗಳಿಂದ ಸಿಂಗರಿಸಿದ್ದ ರಥದಲ್ಲಿರಿಸಿ ವಿಶೇಷ ಪೂಜೆ ಸಲ್ಲಿಸಿ ಭಕ್ತರ ಜಯಘೋಷ ಮತ್ತು ಭಜನೆಯ ಮೂಲಕ ಆರಂಭಿಸಿದ ರಥಯಾತ್ರೆಯನ್ನು ಯುವಕರು, ಮಹಿಳೆಯರು, ಮಾತೆಯರು ಮತ್ತು ಮಕ್ಕಳು ಶ್ರೀಸ್ವಾಮಿಯ ರಥವನ್ನು ಜಯಘೋಷಗಳೊಂದಿಗೆ ನಗರದ ರಾಜಬೀದಿಗಳಲ್ಲಿ ಎಳೆದು ಪುನೀತರಾದರು.ನಗರಸಭೆ ಸದಸ್ಯೆ ಪೂರ್ಣಿಮಾ, ನೆಲಮಂಗಲ ಇಸ್ಕಾನ್‌ ಮುಖ್ಯಸ್ಥರಾದ ಅರುಣ್ ಕುಮಾರ್, ನಾಗರಾಜ್ ಪ್ರಭು, ಗಂಗರಾಜ್ ಪ್ರಭು, ಅಸೀಮಶ್ಯಾಮ್‌ ಪ್ರಭು, ಗಂಗಾಜೀವನ್ ಕೃಷ್ಣಪ್ರಭು, ನಾಗೇಂದ್ರನಿತಾಯ್ ಪ್ರಭು, ಪೂಜಾ, ನಳಿನಾ, ಲಕ್ಷ್ಮಮ್ಮ ಮಾತಾಜಿ ಮತ್ತಿತರರಿದ್ದರು.

ಪೊಟೊ-14 ಕೆ ಎನ್‌ ಎಲ್‌ ಎಮ್‌ 1-ನೆಲಮಂಗಲ ಇಸ್ಕಾನ್‌ ವತಿಯಿಂದ ಪವಾಡ ಶ್ರೀಬಸವಣ್ಣ ದೇವರಮಠದ ಆವರಣದಲ್ಲಿ ಶ್ರೀ ಜಗನ್ನಾಥಸ್ವಾಮಿ ರಥಯಾತ್ರೆ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಸಂಭ್ರಮದಿಂದ ನೆರವೇರಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!