ಅಷ್ಟಪ್ರಕಾರಿ ಮಹಾಪೂಜೆ, ಧಾರ್ಮಿಕ ಸಭೆ
ನಗರದ ಹೊರವಲಯದಲ್ಲಿರುವ ಜಾಜೂರು ಗ್ರಾಮದ ವಿಜಯನಗರ ಬಡಾವಣೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ಶ್ರೀ ಸಂಕಟಮೋಚನ ಪಾರ್ಶ್ವ ಭೈರವ ಧಾಮ ಹಾಗೂ ಶ್ರೀ ಶಾಂತಿ ಗುರುದೇವರ ಭವ್ಯ ಮಂದಿರದಲ್ಲಿ ನಡೆದ ವಿಶ್ವ ಶಾಂತಿ ಮತ್ತು ಲೋಕ ಕಲ್ಯಾಣಾರ್ಥವಾಗಿ ನಡೆದ ರಾಷ್ಟ್ರೀಯ ಮಟ್ಟದ ಗುರು ಭಕ್ತಿ ಕಾರ್ಯಕ್ರಮದ ಅಷ್ಟಪ್ರಕಾರಿ ಮಹಾಪೂಜೆ, ಧಾರ್ಮಿಕ ಸಭೆ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಮನುಷ್ಯನ ಜೀವನದಲ್ಲಿ ದೈಹಿಕ ಮತ್ತು ಮಾನಸಿಕ ಸಾಧನೆ ಮಾಡಬೇಕಾದಲ್ಲಿ ಕಠಿಣ ವ್ರತಗಳನ್ನು ಆಚರಿಸಿದಾಗ ಮಾತ್ರ ಸಾಧಿಸಲು ಸಾಧ್ಯವಾಗುತ್ತದೆ. ಧರ್ಮಾಚರಣೆ ಮತ್ತು ತತ್ವ ಆದರ್ಶಗಳ ಆಚರಣೆ ಕ್ಷೀಣಿಸುತ್ತಿರುವ ಪ್ರಸ್ತುತ ದಿನಗಳಲ್ಲಿ ಅರಸೀಕೆರೆ ಸಮೀಪ ಶ್ರೀ ಸಂಕಟಮೋಚನ ಪಾರ್ಶ್ವ ಭೈರವ ಧಾಮ ಹಾಗೂ ಶ್ರೀ ಶಾಂತಿ ಗುರುದೇವರ ಭವ್ಯ ಮಂದಿರ ನಿರ್ಮಾಣವು ಪೂರ್ಣಗೊಂಡ ನಂತರ ವಿಶೇಷ ಧಾರ್ಮಿಕ ಕ್ಷೇತ್ರವಾಗಿ ಹೊರಹೊಮ್ಮಲಿದೆ. ಶಾಂತಿ ಮತ್ತು ಸಹಬಾಳ್ವೆಯನ್ನು ರೂಢಿಸಿಕೊಳ್ಳಲು ಎಲ್ಲರೂ ಈ ಪುಣ್ಯ ಕ್ಷೇತ್ರಕ್ಕೆ ಭೇಟಿ ನೀಡಬೇಕು ಎಂದು ಹೇಳಿದರು.ಸಮಾರಂಭಕ್ಕೂ ಮುನ್ನ ನಗರದ ಯಜಮಾನ್ ರಂಗೇಗೌಡರ ಬೀದಿಯಲ್ಲಿರುವ ಶ್ರೀ ವಾಸು ಪೂಜ್ಯ ಸ್ವಾಮಿ ಜೈನ ದೇವಾಲಯದಿಂದ ವಿವಿಧ ಬೀದಿಗಳಲ್ಲಿ ಸಾಗಿದ ಮೆರವಣಿಗೆಯಲ್ಲಿ ನೂರಾರು ಮಹಿಳೆಯರು ಸಾಂಪ್ರದಾಯಿಕ ವೇಷಭೂಷಣ, ಪೂರ್ಣಕುಂಭ ಸ್ವಾಗತದೊಂದಿಗೆ, ಹೆಣ್ಣು ಮಕ್ಕಳ ಬೈಕ್ ರ್ಯಾಲಿ ಮತ್ತು ಅಲಂಕೃತ ಕುದುರೆ ಸವಾರಿಗೆ ಮೆರಗನ್ನು ನೀಡಿತು.
ಕಾರ್ಯಕ್ರಮಕ್ಕೆ ಕರ್ನಾಟಕ ಸೇರಿ ಹೊರ ರಾಜ್ಯಗಳಿಂದ ನೂರಾರು ಜೈನ ಸಮುದಾಯದವರು ಆಗಮಿಸಿ ಭಾಗವಹಿಸಿದ್ದರು.
ರಾಜ್ಯ ಜೈನ ಸಮಾಜದ ಅಧ್ಯಕ್ಷ ಚೇತನ್ ಪ್ರಕಾಶ್ ಡೊಂಗ್ರವಾಲ್, ಶ್ರೀ ಸಂಕಟಮೋಚನ ಪಾರ್ಶ್ವಭೈರವ ಧಾಮ ಅಭಿವೃದ್ಧಿ ಸಮಿತಿ ಅಧ್ಯಕ್ಷ ಅಶೋಕ್ ಸುರಾನಾ, ಬೆಂಗಳೂರು ಉದ್ಯಮಿ ರಮೇಶ್ ಕುಮಾರ್ ಜಿ.ಹರಣ್, ನಹಾರ್ ಭವನ್, ಕುಮಾರ್ ಪಾಲ್ ಸಿಸೋದಿಯ, ಪ್ರಕಾಶ್ ಚಂದ್ ರಾಥೋಡ್, ಮುಂಬೈನ ಗುರು ಭಕ್ತರಾದ ಭರತ್ ಕುಮಾರ್ ಕೊಠಾರಿ, ಉದಯ್ ಸಿಂಗ್ವಿ, ಮಹಾವೀರ್ ಚೂತರ್, ಪ್ರಸನ್ನಕುಮಾರ್, ಪರಸ್ ಮಲ್ ಮೆಹ್ತಾ, ಮಹಾವೀರ್ ಬೋಹರಾ, ಚೇತನ್ ಪ್ರಕಾಶ್, ಚೇತನ್ ಮೆಹ್ತಾ, ಚೇತನ್ ಜೈನ್, ವಿಕಾಸ್ ಮೆಹತಾ ಇದ್ದರು.