ಕನ್ನಡಪ್ರಭ ವಾರ್ತೆ,ಚಾಮರಾಜನಗರ
ತಾಲೂಕಿನ ಮಲೆಯೂರು ಗ್ರಾಮದಲ್ಲಿ ಧರ್ಮಸ್ಥಳ ಧರ್ಮೋತ್ಥಾನ ಟ್ರಸ್ಟ್, ಪ್ರಾಚ್ಯ ವಸ್ತು ಸಂಗ್ರಹಾಲಯ, ಪರಂಪರೆ ಇಲಾಖೆ, ಧಾರ್ಮಿಕದತ್ತಿ ಇಲಾಖೆ, ಭಕ್ತಾದಿಗಳ ಸಹಕಾರದೊಂದಿಗೆ ಜೀರ್ಣೋದ್ದಾರಗೊಂಡಿರುವ ಪ್ರಾಚೀನ ಶಿಲಾಬಸದಿ ಭಗವಾನ್ ೧೦೦೮ ಆದಿನಾಥ ತೀರ್ಥಂಕರರ ಶಿಲಾ ಜಿನಬಿಂಬ ಪುನರ್ ಪ್ರತಿಷ್ಠಾಪನೆ ಹಾಗೂ ಧಾಮಸಂಪ್ರೋಕ್ಷಣೆ, ಪಂಚಕಲ್ಯಾಣ ಪೂರ್ವಕ ಎರಡನೇ ದಿನದ ಪೂಜಾಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
೧೨ನೇ ಶತಮಾನದಲ್ಲಿ ಬಸವಣ್ಣನವರು ಹೇಳಿದಂತೆ ದಯವೇ ಧರ್ಮದ ಮೂಲವಯ್ಯ ಎಂಬ ತತ್ವವನ್ನು ಪ್ರಾಚೀನ ಕಾಲದಲ್ಲೇ ಸಾರಿದ ಜೈನ ಧರ್ಮ, ಅಹಿಂಸಾ ಪರಮೋಧರ್ಮ ತತ್ವವನ್ನು ಅಳವಡಿಸಿಕೊಂಡು ಅದನ್ನು ನಿಯಮದಂತೆ ನಡೆಯುತ್ತಾ ಎಲ್ಲರಲ್ಲೂ ಬೆರೆಯುತ್ತಾ ಬಂದಿದ್ದಾರೆ ಎಂದರು.ನಿರ್ಜೀವ ವಸ್ತುಗಳಲ್ಲೂ ಜೀವವಿದೆ. ಅದಕ್ಕೂ ಹಿಂಸೆ ನೀಡಬಾರದು ಎಂದು ಜಗತ್ತಿಗೆ ಸಾರಿದ ಜೈನ ಧರ್ಮ ೫ನೇ ಶತಮಾನದಲ್ಲಿ ಮಹಾ ತಪಸ್ವಿ ಪೂಜ್ಯ ಪಾದರಿಂದ ಸ್ಥಾಪಿತವಾದ ಕನಕಗಿರಿ ಜೈನ ಧರ್ಮದ ಪವಿತ್ರ ಕ್ಷೇತ್ರವಾಗಿ ಬೆಳೆದಿದೆ ಎಂದರು.
ಮನುಷ್ಯನಿಗೆ ಧರ್ಮ ಮುಖ್ಯವಲ್ಲ. ಅದನ್ನು ಹೇಗೆ ಆಚರಣೆ ಮಾಡುತ್ತಾನೆ ಎಂಬುದು ಮುಖ್ಯ. ಲೌಕಿಕ ಸಂತೋಷಗಳು ತಾತ್ಕಾಲಿಕ. ಆದರೆ ಆಧ್ಯಾತ್ಮಿಕ ಚಿಂತನೆ ನಿರಂತರ ಸಂತೋಷವನ್ನು ನೀಡುತ್ತದೆ. ಆದ್ದರಿಂದಲೇ ಯಾವ ದರ್ಮದವರೇ ಇರಲಿ. ಮೊದಲು ದೇವರನ್ನು ನೆನೆದು ಮುಂದವರಿಯುತ್ತಾರೆ ಎಂದರು.
೧೦೮ ಪುಣ್ಯಸಾಗರಮುನಿ ಮಹಾರಾಜರು ಆಶೀರ್ವಚನ ನೀಡಿದರು, ಮಂಡ್ಯ ಜಿಲ್ಲೆ ಆರತಿಪುರ ಜೈನಮಠದ ಸಿದ್ದಾಂತಕೀರ್ತಿ ಭಟ್ಟಾರಕ ಸ್ವಾಮೀಜಿ, ಹರವೆ ವಿರಕ್ತ ಮಠದ ಸರ್ಪಭೂಷಣ ಸ್ವಾಮೀಜಿ, ಮಲೆಯೂರು ಕನಕಗಿರಿ ಕ್ಷೇತ್ರದ ಭುವನಕೀರ್ತಿ ಭಟ್ಟಾರಕ ಸ್ವಾಮೀಜಿ ಮಾತನಾಡಿದರು.
ಧರ್ಮಸ್ಥಳ ಧರ್ಮೊತ್ಥಾನ ಟ್ರಸ್ಟ್ ನ ನೇಮಿರಾಜ್, ಅನಿತಾ ಭಗವಾನ್ ೧೦೦೮ ಆದಿನಾಥತೀರ್ಥಂಕರ ದಿಗಂಬರ ಜೈನಸೇವಾ ಟ್ರಸ್ಟ್ ಅಧ್ಯಕ್ಷ ವಸುಪಾಲ್ ಹಾಗೂ ಪದಾಧಿಕಾರಿಗಳು, ಪಂಚಕಲ್ಯಾಣ ಮಹೋತ್ಸವ ಸಮಿತಿ ಹಾಗೂ ಮಲೆಯೂರು ಗ್ರಾಮಸ್ಥರು, ರಾಜ್ಯದ ವಿವಿಧ ಜಿಲ್ಲೆಗಳ ಜೈನ ಸಮಾಜದವರು ಇದ್ದರು