ಹುಬ್ಬಳ್ಳಿ:
ನಗರದಲ್ಲಿ ಶನಿವಾರ ನಡೆದ ವಿಬಿಎಫ್ನ ಸದಸ್ಯರು ಮತ್ತು ಪದಾಧಿಕಾರಿಗಳ ಸಭೆಯಲ್ಲಿ ಶಿವಮೊಗ್ಗ ಮತ್ತು ಬೀದರ್ಗಳಲ್ಲಿ ನಡೆದ ಘಟನೆಗಳನ್ನು ತೀವ್ರವಾಗಿ ಖಂಡಿಸಿ ನಿರ್ಣಯ ಕೈಗೊಳ್ಳಲಾಯಿತಲ್ಲದೇ, ತಪ್ಪಿತಸ್ಥರ ವಿರುದ್ಧ ತೀವ್ರ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಲಾಯಿತು.
ಸಭೆಯಲ್ಲಿ ಸದಸ್ಯತ್ವ ಹೆಚ್ಚಳದ ಬಗ್ಗೆ ಹಾಗೂ ಸದಸ್ಯರು ಪರಸ್ಪರ ಸಹಕಾರ ಮತ್ತು ತಮ್ಮ ವ್ಯಾಪಾರ ವಹಿವಾಟಿಗೆ ಸಂಬಂಧಿಸಿದ ಮಾಹಿತಿ ವಿನಿಯಮ ಮಾಡಿಕೊಂಡು ಪ್ರಗತಿ ಸಾಧಿಸಲು ಪಣ ತೊಡಬೇಕೆಂದು ನಿರ್ಧರಿಸಲಾಯಿತು. ಹುಬ್ಬಳ್ಳಿ ವಿಬಿಎಫ್ ಅಗಸ್ತ್ಯ ವಾಹಿನಿಯ ಹೊಸ ಹೆಡ್ ಟೇಬಲ್ನ ಪದಾಧಿಕಾರಿಗಳಾದ ನಂದನ್ ಇನಾಂದಾರ್, ಸಂತೋಷ ಮೊಕಾಶಿ, ವೀಣಾ ಅಂಗಡಿ ಪದಗ್ರಹಣ ಮಾಡಿದರು.ಸಭೆಯಲ್ಲಿ ವಿಪ್ರ ಬ್ಯುಸಿನೆಸ್ ಫೋರಂನ ಅಧ್ಯಕ್ಷ ಜಯತೀರ್ಥ ಕೆ.ಆರ್., ಸಂಘಟನಾ ಕಾರ್ಯದರ್ಶಿ ರವಿ ರಾಮನಾರಾಯಣ್, ಪ್ರಾದೇಶಿಕ ನಿರ್ದೇಶಕ ಶರದ ರಾಜಪುರೋಹಿತ್, ನಿಕಟಪೂರ್ವ ಹೆಡ್ ಟೇಬಲ್ ಪದಾಧಿಕಾರಿಗಳಾದ ಕೃಷ್ಣ ಜೋಶಿ, ಸಾಗರ್ ಗ್ರಾಮಪುರೋಹಿತ್, ವೈಶಾಲಿ ಪಾಟೀಲ ಹಾಜರಿದ್ದರು.
ಸಭೆಯಲ್ಲಿ ಉಡುಪಿಯ ಬಾ.ನಾ. ಶಾಂತಪ್ರಿಯ, ಶಂಕರ ಪಾಟೀಲ ಮತ್ತಿತರರು ಮಾತನಾಡಿದರು.