ಕನ್ನಡಪ್ರಭ ವಾರ್ತೆ ಮಹಾಲಿಂಗಪುರ
ಕಾರ್ಯಾಚರಣೆಗೆ ಅಗತ್ಯವಿರುವ ಜೆಸಿಬಿ, ಭದ್ರತೆಗೆ ಪೊಲೀಸ್ ಮತ್ತು ಹೆಸ್ಕಾಂ ಅಧಿಕಾರಿಗಳು ಮತ್ತು ಸಿಬ್ಬಂದಿ ತಾಲೂಕಾಡಳಿತ ಸೋಮವಾರ ರಾತ್ರಿಯೇ ಸಿದ್ಧಗೊಳಿಸಿದ್ದರು. ಬೆಳಕು ಹರಿಯುವ ಮುನ್ನವೇ ಅಪಾರ ಸಂಖ್ಯೆಯ ಪೊಲೀಸ್ ಭದ್ರತೆಯಲ್ಲಿ ಜೆಸಿಬಿಗಳು ತೆರವು ಕಾರ್ಯಾಚರಣೆ ಆರಂಭಿಸಿದವು. ಇಲ್ಲಿ ₹5.6 ಲಕ್ಷ ವೆಚ್ಚ ಮಾಡಿ ಶೆಡ್ ಹಾಕಿಕೊಂಡು 5-6 ವರ್ಷಗಳಿಂದ ನೆಲೆಸಿದ್ದರು. 2-3 ಗಂಟೆಗಳಲ್ಲಿ ತಾಲೂಕು ಆಡಳಿತ ಕಾರ್ಯಾಚರಣೆ ನಡೆಸಿದ ಪರಿಣಾಮ ಪ್ರದೇಶದಲ್ಲಿ ಸ್ಮಶಾನ ಮೌನ ಆವರಿಸಿತ್ತು
ಇದನ್ನು ತಡೆಯಲು ಸ್ಥಳೀಯರು ಪೊಲೀಸ್ ಅಧಿಕಾರಿಗಳು, ತಹಸೀಲ್ದಾರ್ ಮತ್ತು ಮುಖಂಡರ ಬಳಿ ಗೋಗರೆದರೂ ಇದ್ಯಾವುದಕ್ಕೂ ಕ್ಯಾರೆ ಎನ್ನದ ತಹಸೀಲ್ದಾರರು ಕಾರ್ಯಾಚರಣೆ ಮುಂದುವರಿಸಿದರು.ಅತಿಕ್ರಮಣ ಮಾಡಿ ಹಾಕಿಕೊಂಡ ೨೯/೦೧ ಸರ್ವೆ ನಂಬರ್ ೩ ಎಕರೆ ೬ ಗುಂಟೆ ಖಾಲಿ ಬಿದ್ದ ಜಾಗೆ ಕಂದಾಯ ಇಲಾಖೆಗೆ ಸೇರಿದೆ.ಇಲ್ಲಿ ಮನೆ ಇಲ್ಲದ ೩೩ ಕುಟುಂಬಗಳು ಹಲವಾರು ವರ್ಷಗಳಿಂದ ಅನಧಿಕೃತವಾಗಿ ಪತ್ರಾಸ್ ಶೆಡ್ ನಿರ್ಮಿಸಿಕ್ಕೊಂಡು ಜೀವನ ಸಾಗಿಸುತ್ತಿದ್ದರು.
೨೦೨೪ ನವೆಂಬರ್ ಮತ್ತು ಡಿಸೆಂಬರ್ ತಿಂಗಳಲ್ಲಿ ಜಿಲ್ಲಾಧಿಕಾರಿ ಮತ್ತು ಪುರಸಭೆಗೆ ಬರೆದ ಮನವಿಯಲ್ಲಿ ಈ ಅನಧಿಕೃತ ಶೆಡ್ ನಿರ್ಮಾಣದಲ್ಲಿ ಪ್ರಭಾವಿಗಳು ಹಣ ಮಾಡಿರುವ ಕೆಲವರು ಸ್ವಂತ ಮನೆ ಹೊಂದಿದ್ದು ಮತ್ತು ಸ್ಥಿತಿವಂತರಿದ್ದು ಇಲ್ಲಿಂದ ತೆರುವುಗೊಳಿಸಬೇಕು ಎಂದು ಮನವಿ ಮಾಡಲಾಗಿತ್ತು.