ವಿಜಯಪುರ: ಬಮೂಲ್ ನಿರ್ದೇಶಕ ಸ್ಥಾನದ ಚುನಾವಣೆಗೆ ಜೆಡಿಎಸ್ ಬೆಂಬಲಿತ ಅಭ್ಯರ್ಥಿಯಾಗಿ ಆಯ್ಕೆಯಾಗಿರುವ ಇರಿಗೇನಹಳ್ಳಿ ಶ್ರೀನಿವಾಸ್ ಅವರನ್ನು ಗೆಲ್ಲಿಸಬೇಕು ಎಂದು ಮಾಜಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಹೇಳಿದರು.
ಇರಿಗೇನಹಳ್ಳಿ ಶ್ರೀನಿವಾಸ್ ಮಾತನಾಡಿ, ತಾಲೂಕಿನಲ್ಲಿ ಸರಕಾರಿ ಶಾಲೆಗಳಿಗೆ ಪೀಠೋಪಕರಣಗಳು, ಹಳ್ಳಿಗಳಲ್ಲಿ ಶುದ್ಧ ಕುಡಿವ ನೀರಿನ ಘಟಕಗಳು, ಡೇರಿ ಕಟ್ಟಡಗಳಿಗೆ ಬಣ್ಣ, ನಂದಿನಿ ಉತ್ಪನ್ನಗಳ ಪ್ರಚಾರ, ರಾಸುಗಳಿಗೆ ವಿಮೆ, ಪಶುಗಳ ಆರೋಗ್ಯ, ಆಹಾರ ಪೂರೈಕೆ, ಲಸಿಕೆ ಸೇರಿದಂತೆ ವಿವಿಧ ಮಾಹಿತಿ ಹಂಚಿಕೊಂಡಿದ್ದೇನೆ. ಎರಡೂ ಅವಧಿಯಲ್ಲಿ ಪ್ರಾಮಾಣಿಕಗಿ ಕೆಲಸ ಮಾಡಿದ್ದೇನೆ. ಈ ಬಾರಿಯೂ ಅಧ್ಯಕ್ಷರು ನನ್ನ ಕೈ ಹಿಡಿಯುವ ನಂಬಿಕೆಯಿದೆ ಎಂದರು.
ಜೆಡಿಎಸ್ ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಬಿ.ಮುನೇಗೌಡ, ತಾಲೂಕು ಕಾರ್ಯಾಧ್ಯಕ್ಷ ಮುನಿರಾಜು, ಕೋಡಗುರ್ಕಿ ಮಂಜುನಾಥ್, ಜಿಪಂ ಮಾಜಿ ಸದಸ್ಯ ಕೋರಮಂಗಲ ವೀರಪ್ಪ, ಮಾಜಿ ಬಮೂಲ್ ನಿರ್ದೇಶಕ ದಂಡಿಗಾನಹಳ್ಳಿ ನಾರಾಯಣಸ್ವಾಮಿ, ಕಲ್ಯಾಣ್ ಕುಮಾರ್ ಬಾಬು, ವೆಂಕಟಗಿರಿ ಕೋಟೆ ರವಿ ಕುಮಾರ್, ಎಸ್.ಎಲ್.ಎನ್ ಮುನಿರಾಜು, ಹನುಮಪ್ಪ, ಜಗದೀಶ್, ನಂಜೇಗೌಡ, ಆನಂದ್, ರವಿಕುಮಾರ್, ಬಿಜ್ಜವಾರ ಆನಂದ್ ಇತರರಿದ್ದರು.(ಫೋಟೋ ಕ್ಯಾಪ್ಷನ್)
ವಿಜಯಪುರ ಹೋಬಳಿ ಭಟ್ರೇನಹಳ್ಳಿ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದಲ್ಲಿ ಇರಿಗೇನಹಳ್ಳಿ ಶ್ರೀನಿವಾಸ್, ಮಾಜಿ ಶಾಸಕ ನಿಸರ್ಗ ನಾರಾಯಣಸ್ವಾಮಿ, ಜೆಡಿಎಸ್ ಜಿಲ್ಲಾಧ್ಯಕ್ಷ ಬಿ.ಮುನೇಗೌಡ ಇತರೊಂದಿಗೆ ಪೂಜೆ ಸಲ್ಲಿಸಿದರು.