ಪಾಪಿಗಳ ಪರಿವರ್ತನೆಗೆ ಯೇಸು ಭೂಮಿಗೆ ಬಂದ: ಸನತ್

KannadaprabhaNewsNetwork |  
Published : Mar 30, 2024, 12:53 AM ISTUpdated : Mar 30, 2024, 12:54 AM IST
29ಕೆಪಿಎಸ್ಡಬ್ಲ್ಯೂಆರ್ 01 | Kannada Prabha

ಸಾರಾಂಶ

ಸಿರವಾರ ಪಟ್ಟಣದ ಮೆಥೋಡಿಸ್ಟ್ ಚರ್ಚ್‌ನಲ್ಲಿ ಶುಭ ಶುಕ್ರವಾರ ನಿಮಿತ್ತ ವಿಶೇಷ ಪ್ರಾರ್ಥನೆ ಸಭೆ ನಡೆಯಿತು.

ಸಿರವಾರ:ಏನು ತಿಳಿಯದೇ ಭೂಮಿ ಮೇಲೆ ಪಾಪ ಮಾಡಿ ಅಸಹಾಯಕತೆಯಿಂದ ಇದ್ದ ಪಾಪಿ ಮನುಜರನ್ನು ಪರಿವರ್ತನೆ ಮಾಡಲು ಯೇಸುಕ್ರಿಸ್ತನು ಭೂಮಿಗೆ ಬಂದನು ಎಂದು ಮೆಥೋಡಿಸ್ಟ್ ಚರ್ಚ್‌ ಜಿಲ್ಲಾ ಮೇಲ್ವಿಚಾರಕ ಸನತ್ ಸತೀಶ ಕುಮಾರ ಹೇಳಿದರು.

ಪಟ್ಟಣದ ಮೆಥೋಡಿಸ್ಟ್ ಚರ್ಚ್‌ನಲ್ಲಿ ಶುಭ ಶುಕ್ರವಾರ ಅಂಗವಾಗಿ ನಡೆದ ಪ್ರಾರ್ಥನೆಯಲ್ಲಿ ಭಾಗವಹಿಸಿ ಮಾತನಾಡಿ, ಯೇಸು ಕ್ರಿಸ್ತನು ಶಿಲುಬೆಯ ಮೇಲೆ ಆಡಿದ ಏಳು ಮಾತುಗಳು ಅತ್ಯಂತ ಮಹತ್ವ ಪೂರ್ಣ ಮಾತುಗಳಾಗಿದ್ದು, ಯೇಸು ಕ್ರಿಸ್ತನು ಭೂಮಿಗೆ ಬಂದು ಅನೇಕ ರೋಗಿಗಳನ್ನು ಸ್ವಸ್ಥ ಮಾಡಿದನು ಎಂದು ಹೇಳಿದರು. ಈ ಶುಕ್ರವಾರವು ಯೇಸುಕ್ರಿಸ್ತನು ಶಿಲುಬೆಗೇರಿಸಿದ ಮೂರು ದಿನಗಳ ನಂತರ ಸತ್ತವರೊಳಗೆ ಪುನರುತ್ಥಾನಗೊಂಡದ್ದನ್ನು ಗೌರವಿಸುವ ಹಬ್ಬವಾಗಿದೆ ಎಂದರು. 40 ದಿನಗಳ ಉಪವಾಸ ಮಾಡಿ ದೇವರಿಗೆ ಪೂಜೆ ಸಲ್ಲಿಸಿ ತಮ್ಮ ಪಾಪಗಳ ಕ್ಷಮಾಪಣೆ ಮಾಡಲು ಪ್ರಾರ್ಥನೆ ಮಾಡಲಾಯಿತು. ಸಭಾಪಾಲಕ ರಾಜಪ್ಪ, ಸಭಪಾಲನಾ ಸಮಿತಿ ಸದಸ್ಯರು, ಉಗ್ರಾಣಿಕರು, ಮಹಿಳೆಯರು ಮತ್ತು ಮಕ್ಕಳು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಏಕಾದಶಿ ಪ್ರಯುಕ್ತ ಶರವಣ ಟ್ರಸ್ಟ್‌ನಿಂದ ಲಕ್ಷ ಲಡ್ಡು ಹಂಚಿಕೆ
ಹಳೆ ದ್ವೇಷ: ರಸ್ತೆಯಲ್ಲಿ ಅಟ್ಟಾಡಿಸಿ ಅಪ್ಪ, ಮಗನ ಮೇಲೆ ಹಲ್ಲೆ ನಡೆಸಿ ಪರಾರಿ