ಕನ್ನಡಪ್ರಭ ವಾರ್ತೆ ಕಲಬುರಗಿ
ಕ್ರಿಸ್ಮಸ್ ಹಬ್ಬದ ಪ್ರಯುಕ್ತ ನಗರದ ವಿಜಯ ವಿದ್ಯಾಲಯ ಕಾಲೇಜಿನ ಹಿದುಗಡೆಯಿರುವ ತಮ್ಮ ಮನೆಯ ಆವರಣದಲ್ಲಿನ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಸೋಮವಾರ ಜರುಗಿದ ‘ಕ್ರಿಸ್ಮಸ್ ಸೌಹಾರ್ಧ ಕಾರ್ಯಕ್ರಮ’ದಲ್ಲಿ ಸತ್ಕಾರ ಸ್ವೀಕರಿಸಿ ಅವರು ಮಾತನಾಡಿದರು.
ಜಿಲ್ಲಾ ಯುವ ಸಂಘಗಳ ಒಕ್ಕೂಟದ ಅಧ್ಯಕ್ಷ ಡಾ.ಸುನೀಲಕುಮಾರ ಎಚ್.ವಂಟಿ ಮಾತನಾಡಿ, ಕ್ರಿಸ್ಮಸ್ ಹಬ್ಬ ಕೇವಲ ಆಚರಣೆಯಾಗಿರದೆ, ಯೆಸುವಿನ ತತ್ವಗಳನ್ನು ಅಳವಡಿಸಿಕೊಳ್ಳುವುದಾಗಿದೆ. ಬಡವರು, ನಿರ್ಗತಿಕರು, ಶೋಷಿತರಿಗೆ ಕೈಹಿಡಿದು ನಡೆಸಿದವರು. ಮೇಲು-ಕೀಳು ತಾರತಮ್ಯ ನಿವಾರಣೆ ಶ್ರಮಿಸಿದವರು. ರೋಗಿಗಳು, ವಿಧವೆಯರು, ಅಸಹಾಯಕರಿಗೆ ಕರುಣೆ ತೋರಿದವರು. ಇಂಥ ಯಾರೇ ಮಹನೀಯರನ್ನು ಯಾವುದೇ ಒಂದು ಧರ್ಮಕ್ಕೆ ಸೀಮಿತಗೊಳಿಸದೆ, ಅವರ ತತ್ವ, ಸಂದೇಶಗಳನ್ನು ಅನುಸರಿಸುವುದು ಇಂದಿನ ಅಗತ್ಯವಾಗಿದೆ ಎಂದು ಮಾರ್ಮಿಕವಾಗಿ ಹೇಳಿದರು.ಪ್ರಮುಖರಾದ ಎಚ್.ಬಿ.ಪಾಟೀಲ, ಶಿವಯೋಗೆಪ್ಪಾ ಎಸ್.ಬಿರಾದಾರ, ಹಮೀದ್ ಅಲಿ, ವಿನಿತಾ ಇಸ್ತರ್, ನಿತೀನ್ ಜಾಸ್ಫರ್, ಜರುಶಾ, ಯೋಗೇಶ ಬಿರಾದಾರ, ಮಲ್ಲಪ್ಪ ಭೋತಗಿ, ಶಿವರಾಜ ನೀಲಾ, ಕನಕಪ್ಪ ಬಿಲ್ವಾ, ರವಿ ಓಕಳಿ, ಗೌಡಪ್ಪಗೌಡ ಪಾಟೀಲ ಇದ್ದರು.