ಮೊಬೈಲೈಸೇಶನ್ ಫಾರ್ ಏಡ್ಸ್ ಸುರಕ್ಷಾ ಅಭಿಯಾನ -೨೦೨೬ಕ್ಕೆ ಚಾಲನೆ
ಯುವ ಜನತೆಯಲ್ಲಿ ಅದರಲ್ಲಿಯೂ ಕಾಲೇಜು ವಿದ್ಯಾರ್ಥಿಗಳಲ್ಲಿ ಎಚ್ಐವಿ ಹರಡುವಿಕೆ ಹೆಚ್ಚುತ್ತಿರುವ ಬಗ್ಗೆ ವರದಿಯಾಗುತ್ತಿದೆ. ಆದ್ದರಿಂದ ಕಾಲೇಜು ವಿದ್ಯಾರ್ಥಿಗಳು ಸ್ವಯಂ ಪ್ರೇರಿತರಾಗಿ ಅಪಾಯದ ಮೌಲ್ಯಮಾಪನ ಮಾಡಿಕೊಂಡು ತಾವು ಎಚ್ಐವಿಯಿಂದ ಸುರಕ್ಷಿತವಾಗಿರುವ ಬಗ್ಗೆ ತಿಳಿದುಕೊಳ್ಳಬೇಕಾಗಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ವೈಶಾಲಿ ನಾಯ್ಕ ಹೇಳಿದರು.
ತಮ್ಮ ಕಚೇರಿಯಲ್ಲಿ "ನಿಮ್ಮ ಎಚ್ಐವಿ ಸ್ಥಿತಿಯನ್ನು ತಿಳಿದುಕೊಳ್ಳಿ ಕ್ಯೂ ಆರ್ ಕೋಡ್ ಪೋಸ್ಟರ್ " ಬಿಡುಗಡೆಗೊಳಿಸಿ ಮೊಬೈಲೈಸೇಶನ್ ಫಾರ್ ಏಡ್ಸ್ ಸುರಕ್ಷಾ ಅಭಿಯಾನ -೨೦೨೬ಕ್ಕೆ ಚಾಲನೆ ನೀಡಿ ಮಾತನಾಡಿದರು.ರಾಜ್ಯದಲ್ಲಿ ಸುಮಾರು ೫೪ ಸಾವಿರ ಜನರಿಗೆ ತಮಗೆ ಎಚ್ಐವಿ ಸೊಂಕು ಇರುವುದೇ ಗೊತ್ತಿಲ್ಲ. ಈ ನಿಟ್ಟಿನಲ್ಲಿ ಯುವ ಜನತೆಯನ್ನು ಎಚ್ಐವಿಯಿಂದ ಸುರಕ್ಷಿತವಾಗಿಡಲು ಸ್ವಯಂ ಪ್ರೇರಿತರಾಗಿ ಕ್ಯೂ ಆರ್ ಕೋಡ್ ಸ್ಯಾನ್ ಮಾಡಿ ಅದರಲ್ಲಿರುವ ಸರಳ ಪ್ರೇಶ್ನೆಗಳಿಗೆ ಉತ್ತರಿಸುವ ಮೂಲಕ ತಮಗೆ ಇರುವ ಎಚ್ಐವಿ ಅಪಾಯದ ಕುರಿತು ಅವಲೋಕನ ಮಾಡಿಕೊಳ್ಳಬಹುದಾಗಿದೆ. ಎಚ್ಐವಿ/ಏಡ್ಸ್ ಕುರಿತ ಸಂಶಯಗಳಗೆ ಕ್ಯೂ ಆರ್ ಕೊಡ್ ನಲ್ಲಿ ಉತ್ತರ ಪಡೆಯಬಹುದಾಗಿದೆ. ತಾಲೂಕಿನ ಎಲ್ಲ ಪದವಿ ಮತ್ತು ಪದವಿ ಪೂರ್ವ ಕಾಲೇಜುಗಳಲ್ಲಿ ಈ ಕ್ಯೂ ಆರ್ ಕೋಡ್ ಪೋಸ್ಟರ್ ಅಳವಡಿಸಲಾಗುವುದು. ತಾಲೂಕಿನ ಪ್ರತಿಯೊಬ್ಬ ಕಾಲೇಜು ವಿದ್ಯಾರ್ಥಿಗಳು ಸ್ವಯಂ ಪ್ರೇರಿತರಾಗಿ ಈ ಅಭಿಯಾನದಲ್ಲಿ ಭಾಗವಹಿಸಿ ಎಚ್ಐವಿ ಮುಕ್ತ ಭಾರತ ಗುರಿ ಮುಟ್ಟಲು ಕೈಜೋಡಿಸಬೇಕು ಎಂದರು.
ಈ ಸಂದರ್ಭ ಆರೋಗ್ಯ ನೀರಿಕ್ಷಣಾಧಿಕಾರಿ ಚಿದಾನಂದ, ಆಪ್ತಸಮಾಲೋಚಕ ವಿನಾಯಕ ಪಟಗಾರ, ಪ್ರಯೋಗಶಾಲಾ ತಂತ್ರಜ್ಞ ಉಮೇಶ ಕೆ. ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು.