ಕೂದಲೆಳೆ ಅಂತರದಿಂದ ಜೀವ ಉಳಿಸಿಕೊಂಡ ಪತ್ರಕರ್ತ ಪರಮೇಶ್ವರಪ್ಪ

KannadaprabhaNewsNetwork |  
Published : Jul 19, 2026, 02:15 AM IST
ಕಾಡಾನೆ ದಾಳಿಯಿಂದಾಗಿ ಅಲ್ಪಸ್ವಲ್ಪ ಗಾಯಗಳಿಂದ ಕೂದಲೆಳೆಯಷ್ಟು ಅಂತರದಿಂದ ಜೀವ ಉಳಿಸಿಕೊಂಡ ಪತ್ರಕರ್ತ ಪರಮೇಶ್ವರಪ್ಪ | Kannada Prabha

ಸಾರಾಂಶ

ತರೀಕೆರೆಕೆಸದ ನಿಮಿತ್ತ ಹೊರ ಹೋಗಿ ಸ್ವಗ್ರಾಮಕ್ಕೆ ಬೈಕ್‌ನಲ್ಲಿ ತೆರಳುವಾಗ ಕಾಡಾನೆಯೊಂದು ದಿಢೀರನೇ ಎದುರಿಗೆ ಬಂದು ದಾಳಿ ಮಾಡಲು ಮುಂದಾದಾಗ ಪತ್ರಕರ್ತ ಪರಮೇಶ್ವರಪ್ಪ 10 ಅಡಿಗಳಷ್ಟು ದೂರದಲ್ಲಿದ್ದ ಪೊದೆಯೊಳಗೆ ನೆಗೆದು ತಮ್ಮ ಜೀವ ಉಳಿಸಿಕೊಂಡಿದ್ದು ಎದುರಿಗೆ ಸಿಕ್ಕ ಬೈಕ್‌ನ್ನು ಆನೆ ಎತ್ತಿ ನೆಲಕ್ಕೆ ಬಡಿದು ಪುಡಿಮಾಡಿರುವ ಘಟನೆ ನಡೆದಿದೆ.

ಕಾಡಾನೆ ದಾಳಿ । ಬೈಕ್‌ ಪುಡಿ ಪುಡಿ

ಕನ್ನಡಪ್ರಭ ವಾರ್ತೆ ತರೀಕೆರೆ

ಕೆಸದ ನಿಮಿತ್ತ ಹೊರ ಹೋಗಿ ಸ್ವಗ್ರಾಮಕ್ಕೆ ಬೈಕ್‌ನಲ್ಲಿ ತೆರಳುವಾಗ ಕಾಡಾನೆಯೊಂದು ದಿಢೀರನೇ ಎದುರಿಗೆ ಬಂದು ದಾಳಿ ಮಾಡಲು ಮುಂದಾದಾಗ ಪತ್ರಕರ್ತ ಪರಮೇಶ್ವರಪ್ಪ 10 ಅಡಿಗಳಷ್ಟು ದೂರದಲ್ಲಿದ್ದ ಪೊದೆಯೊಳಗೆ ನೆಗೆದು ತಮ್ಮ ಜೀವ ಉಳಿಸಿಕೊಂಡಿದ್ದು ಎದುರಿಗೆ ಸಿಕ್ಕ ಬೈಕ್‌ನ್ನು ಆನೆ ಎತ್ತಿ ನೆಲಕ್ಕೆ ಬಡಿದು ಪುಡಿಮಾಡಿರುವ ಘಟನೆ ನಡೆದಿದೆ.

ಲಿಂಗದಹಳ್ಳಿ ಹೋಬಳಿ ಪತ್ರಕರ್ತ ಎನ್.ಎಸ್. ಪರಮೇಶ್ವರಪ್ಪ ಶುಕ್ರವಾರದಂದು ಪತ್ರಿಕೆಗೆ ಸುದ್ಧಿ ಕಳುಹಿಸಿದ ನಂತರ ತಮ್ಮ ಸ್ವಗ್ರಾಮ ಜಯಪುರ ಗ್ರಾಮಕ್ಕೆ ವಾಪಸ್ಸು ಬೈಕ್‌ನಲ್ಲಿ ಬರುವಾಗ ನಂದಿಬಟ್ಟಲು ಗ್ರಾಮದ ರಸ್ತೆಯಲ್ಲಿದ್ದ ಭಾರಿ ಗಾತ್ರದ ಕಾಡಾನೆ ದಿಢೀರನೇ ಎದುರಿಗೆ ಬಂದಿದೆ. ಪರಮೇಶ್ವರಪ್ಪನವರ ಮೇಲೆ ದಾಳಿ ಮಾಡಲು ಕಾಡಾನೆ ದಾವಿಸಿದ್ದನ್ನು ಗಮನಿಸಿದ ಪರಮೇಶ್ವರಪ್ಪ 10 ಅಡಿಗಳಷ್ಟು ದೂರದಲ್ಲಿದ್ದ ಪೊದೆಗೆ ನೆಗೆದಿದ್ದಾರೆ. ಆದರೆ ಗೀಳಿಡುತ್ತಾ ಅಟ್ಟಿಸಿಕೊಂಡು ಬಂದ ಕಾಡಾನೆ ಎದುರಿಗೆ ಸಿಕ್ಕ ಬೈಕ್‌ನ್ನು ಧ್ವಂಸ ಮಾಡಿದೆ.

ನಂತರವೂ ಸುತ್ತಲೂ ಗಮನಿಸಿದ ಆನೆ ಮುಳ್ಳಿನ ಪೊದೆಯೊಳಗೆ ಅವಿತು ಕುಳಿತಿದ್ದವರನ್ನು ಗಮನಿಸದೇ ಮುಂದಕ್ಕೆ ತೆರಳಿದೆ. ತನ್ನ ಪ್ರಾಣ ಹೋಯಿತೆಂಬ ಭಯದಲ್ಲಿ ಕುಳಿತಿದ್ದ ಪರಮೇಶ್ವರಪ್ಪ ಘಟನೆ ನಡೆದ ಐದಾರು ನಿಮಿಷಗಳ ನಂತರ ಸುಧಾರಿಸಿಕೊಂಡು, ಧೈರ್ಯ ಮಾಡಿ ಮುಳ್ಳಿನ ಪೊದೆಯಿಂದ ಹೊರ ಬಂದು ನೋಡಿದಾಗ ಆನೆ ದೂರದಲ್ಲಿ ನಡೆದು ಹೋಗುತ್ತಿದ್ದನ್ನು ನೋಡಿ ಸ್ವಲ್ಪ ಹೊತ್ತು ಸ್ಥಳದಲ್ಲಿದ್ದು ಆನಂತರ ಪೊದೆಯಿಂದ ಎದ್ದು ರಸ್ತೆಗೆ ಬಂದಿದ್ದಾರೆ.

ನಂತರ ಭದ್ರ ವನ್ಯ ಜೀವಿ ವಿಭಾಗ ತಣಿಗೆಬೈಲು ವಲಯ ಅರಣ್ಯಾಧಿಕಾರಿ ಬಿ.ಸುಧಾಕರ್ ಗೆ ದೂರವಾಣಿ ಕರೆ ಮಾಡಿ ಘಟನೆ ಬಗ್ಗೆ ಮಾಹಿತಿ ನೀಡಿದ್ದು ತಕ್ಷಣ ಎಚ್ಚೆತ್ತ ಅರಣ್ಯಾಧಿಕಾರಿ, ವಲಯಾರಣ್ಯಾಧಿಕಾರಿ ಪ್ರದೀಪ್ ಅವರ ತಂಡ ದೊಂದಿಗೆ ಇಲಾಖಾ ವಾಹನ ಸ್ಥಳಕ್ಕೆ ಕಳುಹಿಸಿ ಗಾಯಗೊಂಡಿದ್ದ ಪರಮೇಶ್ವರಪ್ಪ ಅವರನ್ನು ಲಿಂಗದಹಳ್ಳಿ ಸರ್ಕಾರಿ ಪ್ರಾಥಮಿಕ ಆರೋಗ್ಯದಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಧೈರ್ಯ ತುಂಬಿ ಮನೆಗೆ ತಲುಪಿಸಿದ್ದಾರೆ.

ಪತ್ರಕರ್ತ ಪರಮೇಶ್ವರಪ್ಪನಮವ ವಿಕ್ಟರ್ ಬೈಕ್ ಕಾಡಾನೆ ದಾಳಿದೆ ನುಜ್ಜು ಗುಜ್ಜಾಗಿದ್ದು ಈ ಸಂಬಂಧ ಲಿಂಗದಹಳ್ಳಿ ಆರಕ್ಷಕ ಠಾಣೆಗೆ ದೂರು ನೀಡಲಾಗಿದೆ.

-

18ಕೆಟಿಆರ್.ಕೆ.4.

ಲಿಂಗದಹಳ್ಳಿ ಹೋಬಳಿ ಪತ್ರಕರ್ತರಾದ ಪರಮೇಶ್ವರಪ್ಪನವರ ಮೇಲೆ ಕಾಡಾನೆ ದಿಢೀರ್ ದಾಳಿ ಪರಿಣಾಮ ಕೂದಲೆಳೆ ಅಂತರದಿಂದ ಬೈಕಿನಿಂದ ಜಿಗಿದು ಪ್ರಾಣ ಉಳಿಸಿಕೊಂಡಿದ್ದು ಅವರ ವಿಕ್ಟರ್‌ನ್ನು ಬೈಕ್‌ನ್ನು ಕಾಡಾನೆ ತುಳಿದು ಜಕಮ್ ಮಾಡಿರುವ ದೃಶ್ಯಗಳು.

18ಕೆಟಿಆರ್.ಕೆ.5ಃ ಕಾಡಾನೆ ಧಾಳಿಯಿಂದ ವಿಕ್ಟರ್‌ನ್ನು ಬೈಕ್‌ .ನ ಮಾಸ್ಕ್ ಜಖಂ ಆಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿಂಗಾಡಿ- ಕದಿರೇನಹಳ್ಳಿ ಭೂ ವಿವಾದದಲ್ಲಿ ದಲಿತ ಕುಟುಂಬಗಳಿಗೆ ನ್ಯಾಯ ಒದಗಿಸಲು ಆಗ್ರಹ
ನೀಟ್‌ನಲ್ಲೂ ಮುಂದುವರಿದ ಎಸ್.ಆರ್.ಎಸ್ ನಾಗಾಲೋಟ