ಮಾನವೀಯ ಸಂವೇದನೆಯ ಪತ್ರಕರ್ತ ವೆಂಕಟೇಶ: ನಾರಾಯಣಾಚಾರ್ಯ

KannadaprabhaNewsNetwork |  
Published : Jul 13, 2024, 01:32 AM IST
ಶಹಾಪುರ ನಗರದ ಮಾತೃಛಾಯ ಶಾಲೆಯ ಸಭಾಂಗಣದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತ ಸಂಘದ ವತಿಯಿಂದ ನಿಧನರಾದ  ಹಿರಿಯ ಪತ್ರಕರ್ತ ವೆಂಕಟೇಶ ಮಾನು ಹಾಗೂ ಪತ್ರಕರ್ತ ಶಿವಶರಣ ಕಟ್ಟಿಮನಿ ಅವರಿಗೆ ನುಡಿನಮನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. | Kannada Prabha

ಸಾರಾಂಶ

ಪ್ರಾಮಾಣಿಕತೆ ಹಾಗೂ ವೃತ್ತಿಬದ್ಧತೆಯಿಂದ ಪತ್ರಿಕಾ ರಂಗದಲ್ಲಿ ಹಲವು ದಶಕಗಳಿಂದ ಸೇವೆ ಸಲ್ಲಿಸುತ್ತಿದ್ದ ವೆಂಕಟೇಶ ಮಾನು ಅವರು ಸರಳ, ಸಜ್ಜನಿಕೆಯ, ಪ್ರೀತಿಯ, ಅಂತಃಕರಣದ ಮಾನವೀಯ ಸಂವೇದನೆಯ ಪತ್ರಕರ್ತರಾಗಿದ್ದರು ಎಂದು ಹಿರಿಯ ಪತ್ರಕರ್ತ ನಾರಾಯಣಾಚಾರ್ಯ ಸಗರ ಹೇಳಿದರು.

ಕನ್ನಡಪ್ರಭ ವಾರ್ತೆ ಶಹಾಪುರ

ಪ್ರಾಮಾಣಿಕತೆ ಹಾಗೂ ವೃತ್ತಿಬದ್ಧತೆಯಿಂದ ಪತ್ರಿಕಾ ರಂಗದಲ್ಲಿ ಹಲವು ದಶಕಗಳಿಂದ ಸೇವೆ ಸಲ್ಲಿಸುತ್ತಿದ್ದ ವೆಂಕಟೇಶ ಮಾನು ಅವರು ಸರಳ, ಸಜ್ಜನಿಕೆಯ, ಪ್ರೀತಿಯ, ಅಂತಃಕರಣದ ಮಾನವೀಯ ಸಂವೇದನೆಯ ಪತ್ರಕರ್ತರಾಗಿದ್ದರು ಎಂದು ಹಿರಿಯ ಪತ್ರಕರ್ತ ನಾರಾಯಣಾಚಾರ್ಯ ಸಗರ ಹೇಳಿದರು.

ನಗರದ ಮಾತೃಛಾಯ ಶಾಲೆಯ ಸಭಾಂಗಣದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತ ಸಂಘದ ವತಿಯಿಂದ ನಡೆದ ತೀವ್ರ ಹೃದಯಘಾತದಿಂದ ನಿಧನ ಹೊಂದಿದ ಹಿರಿಯ ಪತ್ರಕರ್ತ ವೆಂಕಟೇಶ ಮಾನು ಹಾಗೂ ಇತ್ತೀಚೆಗೆ ನಿಧನರಾದ ಪತ್ರಕರ್ತ ಶಿವಶರಣ ಕಟ್ಟಿಮನಿಗೆ ನುಡಿನಮನ ಕಾರ್ಯಕ್ರಮದಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿ ಅವರು ಮಾತನಾಡಿದರು.

ಬಹುಮುಖ ಪ್ರತಿಭೆಯ ಗಟ್ಟಿ ಬರಹಗಾರರಾಗಿದ್ದ ವೆಂಕಟೇಶ ಮಾನು ಅವರ ನಿಧನದಿಂದ ಸಗರನಾಡಿನ ಸಾಹಿತ್ಯ, ಸಾಂಸ್ಕೃತಿಕ ಲೋಕ ಮತ್ತು ಪತ್ರಿಕಾ ರಂಗ ಬಡವಾಗಿದೆ. ಚಿಂತನಾಶೀಲ ಬರಹಗಳಿಂದ ನಾಡಿನ ವಿದ್ವಾಂಸರ ಮೆಚ್ಚುಗೆಗೆ ಪಾತ್ರರಾಗಿದ್ದರು ಎಂದು ಅವರೊಂದಿಗಿನ ಒಡನಾಟದ ಅನುಭವಗಳನ್ನು ಹಂಚಿಕೊಂಡರು.

ಅಧ್ಯಕ್ಷತೆ ವಹಿಸಿದ್ದ ಕಾರ್ಯನಿರತ ಪತ್ರಕರ್ತ ಸಂಘದ ತಾಲೂಕಾಧ್ಯಕ್ಷ ಮಲ್ಲಿಕಾರ್ಜುನ ಮುದನೂರ ಮಾತನಾಡಿ, ಸೂಕ್ಷ್ಮ ಸಂವೇದನೆಯ ಹಿರಿಯ ಪತ್ರಕರ್ತ ವೆಂಕಟೇಶ ಮಾನು ಅವರು ನಾಡಿನ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಅನುಪಮ ಸೇವೆ ಸಲ್ಲಿಸಿದ್ದ ಅವರು ಪತ್ರಿಕಾ ಕ್ಷೇತ್ರಕ್ಕೆ ಶ್ರೇಷ್ಠ ಕೊಡುಗೆ ನೀಡಿದ್ದಾರೆ ಎಂದರು.

ಇತ್ತೀಚಿಗೆ ನಿಧನ ಹೊಂದಿದ ಪತ್ರಕರ್ತ ಶಿವಶರಣ ಕಟ್ಟಿಮನಿ ಸಗರನಾಡಿನ ಪತ್ರಿಕಾ ಕ್ಷೇತ್ರದಲ್ಲಿ ಸೇವಾ ಮನೋಭಾವನೆಯಿಂದ ಸೇವೆ ಸಲ್ಲಿಸಿ, ಪತ್ರಿಕಾ ಕ್ಷೇತ್ರ ಬೆಳವಣಿಗೆಯಲ್ಲಿ ಮಹತ್ತರ ಪಾತ್ರ ವಹಿಸಿದ್ದರು. ಸಗರನಾಡು ಅಪರೂಪದ ಪ್ರತಿಭಾವಂತ ಪತ್ರಕರ್ತರನ್ನು ಕಳೆದುಕೊಂಡಿದ್ದು ಪತ್ರಿಕಾ ಕ್ಷೇತ್ರಕ್ಕೆ ತುಂಬಲಾರದ ನಷ್ಟ ಎಂದು ಭಾವುಕರಾಗಿ ನುಡಿದರು.

ಸಂಶೋಧಕ ಡಿ.ಎನ್. ಅಕ್ಕಿ, ಪತ್ರಿಕಾ ಹಾಗೂ ಸಾಹಿತ್ಯ ಚೇತನ ವೆಂಕಟೇಶ ಮಾನು ಅವರ ಆತ್ಮಕ್ಕೆ ಚಿರಶಾಂತಿ ಕೋರುವೆ ಎಂದು ತಿಳಿಸಿದ್ದಾರೆ.

ಉಪನ್ಯಾಸಕ ರಾಘವೇಂದ್ರ ಹಾರಣಗೇರಾ, ನಿಧನರಾದ ಹಿರಿಯ ಪತ್ರಕರ್ತರಾದ ವೆಂಕಟೇಶ ಮಾನು ಮತ್ತು ಪತ್ರಕರ್ತ ಶಿವಶರಣ ಕಟ್ಟಿಮನಿ ಅವರ ಬದುಕು ಮತ್ತು ವ್ಯಕ್ತಿತ್ವ ಸಾಧನೆ ಕುರಿತು ಮಾತನಾಡಿದರು.

ಪತ್ರಕರ್ತರಾದ ಪ್ರಹ್ಲಾದ ತಿಳುಗೊಳ, ಈರಣ್ಣ ಮೌರ್ಯ, ವಿಶಾಲ ಸಿಂಧೆ, ಮಂಜುನಾಥ ಸಗರ, ಮಲ್ಲಿಕಾರ್ಜುನ, ಬಸವರಾಜ ಕರೆಗಾರ, ಮಾತೃಛಾಯ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ತಿಪ್ಪಣ್ಣ ಕ್ಯಾತನಾಳ, ಅಶೋಕ ಘನತೆ, ತಿಪ್ಪಣ ಇತರರಿದ್ದರು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...