ಪತ್ರಕರ್ತರು ವೃತ್ತಿಧರ್ಮ ಕಾಪಾಡಲಿ: ಓಂಕಾರ ಶ್ರೀ

KannadaprabhaNewsNetwork |  
Published : Nov 15, 2024, 12:34 AM IST
14ಕೆಡಿವಿಜಿ7, 8-ದಾವಣಗೆರೆ ಹಾಲಕೆರೆ ಮಠದಲ್ಲಿ ಹಿರಿಯ ಪತ್ರಕರ್ತ ದಿವಂಗತ ವೀರಪ್ಪ ಎಂ.ಭಾವಿ ಭಾವಚಿತ್ರಕ್ಕೆ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ, ಶ್ರೀ ಬಸವಪ್ರಭು ಸ್ವಾಮೀಜಿ, ಅಥಣಿ ಎಸ್.ವೀರಣ್ಣ, ಕೆ.ಎಸ್.ಬಸವಂತಪ್ಪ, ಡಾ.ಜಸ್ಟಿನ್ ಡಿಸೌಜ ಇತರರು ಪುಷ್ಪನಮನ ಸಲ್ಲಿಸಿದರು. | Kannada Prabha

ಸಾರಾಂಶ

ಪ್ರಸ್ತುತ ಕಾಲಘಟ್ಟದಲ್ಲಿ ಪತ್ರಕರ್ತರಿಗೆ ತುಂಬಾ ಗೌರವದ ಸ್ಥಾನವಿದೆ. ಸಮಾಜದ ಓಕೆಕೋರೆ ತಿದ್ದುವಂತಹ ಪತ್ರಿಕಾ ವೃತ್ತಿ ಗೌರವ ಕಾಪಾಡುವ ಮೂಲಕ ಸಮಾಜಕ್ಕೆ ಸಾಧ್ಯವಾದ ಒಳ್ಳೆಯದನ್ನು ಮಾಡುವಂತೆ ‍‍ಆವರಗೊಳ್ಳ ಪುರವರ್ಗ ಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ನುಡಿದಿದ್ದಾರೆ.

- ಹಿರಿಯ ಪತ್ರಕರ್ತ ದಿ।। ವೀರಪ್ಪ ಎಂ. ಭಾವಿ ನುಡಿನಮನ ಕಾರ್ಯಕ್ರಮ

- - - ಕನ್ನಡಪ್ರಭ ವಾರ್ತೆ, ದಾವಣಗೆರೆ

ಪ್ರಸ್ತುತ ಕಾಲಘಟ್ಟದಲ್ಲಿ ಪತ್ರಕರ್ತರಿಗೆ ತುಂಬಾ ಗೌರವದ ಸ್ಥಾನವಿದೆ. ಸಮಾಜದ ಓಕೆಕೋರೆ ತಿದ್ದುವಂತಹ ಪತ್ರಿಕಾ ವೃತ್ತಿ ಗೌರವ ಕಾಪಾಡುವ ಮೂಲಕ ಸಮಾಜಕ್ಕೆ ಸಾಧ್ಯವಾದ ಒಳ್ಳೆಯದನ್ನು ಮಾಡುವಂತೆ ‍‍ಆವರಗೊಳ್ಳ ಪುರವರ್ಗ ಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ನುಡಿದರು.

ನಗರದ ದೇವರಾಜ ಅರಸು ಬಡಾವಣೆಯ ಶ್ರೀ ಹಾಲಕೆರೆ ಅನ್ನದಾನೀಶ್ವರ ಶಾಖಾ ಮಠದಲ್ಲಿ ಗುರುವಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಇಂದಿನ ಸುದ್ದಿ ಪತ್ರಿಕೆಯಿಂದ ಹಮ್ಮಿಕೊಂಡಿದ್ದ ಹಿರಿಯ ಪತ್ರಕರ್ತ ದಿವಂಗತ ವೀರಪ್ಪ ಎಂ.ಭಾವಿಯವರ ನುಡಿನಮನ ಸಮಾರಂಭದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

ಪತ್ರಕರ್ತರು ಹಮ್ಮು ಬಿಮ್ಮುಗಳನ್ನು ಬಿಟ್ಟು, ಸಮಾಜಮುಖಿಯಾಗಿ ತಮ್ಮ ಕಾಯಕ ಮಾಡಬೇಕು. ಅನ್ನದಾನೀಶ್ವರ ಮಠದ ಬೆಳವಣಿಗೆಯಲ್ಲಿ ಅಥಣಿ ಎಸ್.ವೀರಣ್ಣ, ಎನ್.ಅಡಿವೆಪ್ಪನವರ ಜೊತೆಗೆ ವೀರಪ್ಪ ಭಾವಿ ಹೆಗಲಿಗೆ ಹೆಗಲು ಕೊಟ್ಟವರು. ಎರೆಸೀಮೆಯಿಂದ ಬಂದ ಜನರಿಗೆ ಬಾಯಾರಿದವರಿಗೆ ನೀರಿನ ಬಾವಿ ಕಂಡಂತೆ ಕಷ್ಟ, ಸುಖಕ್ಕೆ ವೀರಪ್ಪ ಭಾವಿ ಆಗುತ್ತಿದ್ದ ವ್ಯಕ್ತಿ ಎಂದು ಅವರು ಸ್ಮರಿಸಿದರು.

ಸಾನಿಧ್ಯ ವಹಿಸಿದ್ದ ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ ಮಾತನಾಡಿ, ವೀರಪ್ಪ ಎಂ.ಭಾವಿ ಕೇವಲ ಪತ್ರಕರ್ತ ಅಷ್ಟೇ ಆಗಿರದೆ, ಸಂಸ್ಕಾರ, ಸದ್ಗುಣ ಮೈಗೂಡಿಸಿಕೊಂಡಿದ್ದ ದೊಡ್ಡ ವ್ಯಕ್ತಿತ್ವದ ವ್ಯಕ್ತಿಯಾಗಿದ್ದರು. ಹಾಲಕೆರೆ ಮಠದ ಕಾರ್ಯಕ್ರಮಕ್ಕೆ ಹತ್ತಾರು ಸಲ ತಾವು ಬಂದಿದ್ದು, ಕಳೆದ ತಿಂಗಳಷ್ಟೇ ಅನಾರೋಗ್ಯದಿಂದ ಬಳಲುತ್ತಿದ್ದರೂ ಸಮಾರಂಭಕ್ಕೆ ಬಂದು, ಭಾಷಣ ಮಾಡಿದ್ದರು. ಶ್ರೀಮತಿ ವೀರಪ್ಪ ಭಾವಿ, ಮಕ್ಕಳು, ಕುಟುಂಬ ವರ್ಗ ಭಾವಿ ಅವರು ಹಾಕಿಕೊಟ್ಟ ಮಾರ್ಗದಲ್ಲಿ ಸಾಗಲಿ ಎಂದರು.

ಶಾಸಕ ಕೆ.ಎಸ್.ಬಸವಂತಪ್ಪ ಮಾತನಾಡಿ, ತುಂಬಾ ಸರಳ ವ್ಯಕ್ತಿತ್ವದ ವೀರಪ್ಪ ಭಾವಿ ಕಷ್ಟಕಾಲದಲ್ಲಿ ಪತ್ರಿಕಾ ರಂಗ ಪ್ರವೇಶಿಸಿ, ಸ್ವಂತ ಪತ್ರಿಕೆ ಯಶಸ್ವಿಯಾಗಿ ನಡೆಸಿಕೊಂಡು ಬಂದಿದ್ದಾರೆ. ಲಾಭವಿಲ್ಲದಿದ್ದರೂ ಕಾಯಕ ನಿಷ್ಟೆಯಿಂದ ಕೆಲಸ ಮಾಡುತ್ತಿದ್ದರು ಎಂದು ಸ್ಮರಿಸಿದರು.

ಹಾಲಕೆರೆ ಮಠ ಟ್ರಸ್ಟ್ ಅಧ್ಯಕ್ಷ, ಹಿರಿಯ ಲೆಕ್ಕ ಪರಿಶೋಧಕ ಅಥಣಿ ಎಸ್.ವೀರಣ್ಣ ಅಧ್ಯಕ್ಷತೆ ವಹಿಸಿ, ವೀರಪ್ಪ ಭಾವಿ ಅಗಲಿಕೆ ವೈಯಕ್ತಿಕವಾಗಿ ನಮಗೂ ನಷ್ಟ. ತಮ್ಮ ಸಹೋದರ ಅಥಣಿ ಕೊಟ್ರೇಶರ ಆತ್ಮೀಯನಾಗಿದ್ದ ವೀರಣ್ಣ ಭಾವಿ ಕೊಟ್ರೇಶರ ಅಗಲಿಕೆ ನಂತರ ನನಗೆ ಹತ್ತಿರವಾದವರು. ಎಷ್ಟೇ ಕಷ್ಟವಿದ್ದರೂ ಸಮಚಿತ್ತದಿಂದ ಬಾಳಿ ಬದುಕಿದ ವ್ಯಕ್ತಿ ಎಂದರು.

ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆಯ ಮುಖ್ಯಸ್ಥೆ ಡಾ.ಜಸ್ಟಿನ್ ಡಿಸೌಜ, ಹಿರಿಯ ಪತ್ರಕರ್ತ ಬಾ.ಮ.ಬಸವರಾಜಯ್ಯ, ವರದಿಗಾರರ ಕೂಟದ ಅಧ್ಯಕ್ಷ ನಾಗರಾಜ ಎಸ್. ಬಡದಾಳ್, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಇ.ಎಂ. ಮಂಜುನಾಥ, ಖಜಾಂಚಿ ಎನ್.ವಿ.ಬದರೀನಾಥ, ಮಂಗಳಾ ವೀರಪ್ಪ ಭಾವಿ, ಮುತ್ತುರಾಜ ಎಂ. ಭಾವಿ, ಅನಿಲಕುಮಾರ ಎಂ.ಭಾವಿ, ವೇದಮೂರ್ತಿ, ಮಾಗನೂರು ಮಂಜಪ್ಪ, ಎಚ್.ಎಂ.ಪಿ.ಕುಮಾರ, ಇ.ಎಂ.ಪವನ್‌, ಮಹೇಶ ಕಾಶೀಪುರ, ಜಿ.ಎಸ್.ವೀರೇಶ ಇತರರು ಇದ್ದರು.

- - - ಟಾಪ್‌ ಕೋಟ್‌ ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆ ಸಂಸ್ಥಾಪಕ ಎಂ.ಎಸ್.ಶಿವಣ್ಣ ಸರ್‌ ಸುಮಾರು 16-17 ವರ್ಷದ ಬಾಲಕನಿದ್ದಾಗ ತಮಗೆ ವೀರಪ್ಪ ಭಾವಿ ಪರಿಚಯಿಸಿದ್ದರು. ನಮ್ಮ ಕುಟುಂಬದ ಹಿರಿ ಮಗನಂತೆ ಕೊನೆಯವರೂ ಇದ್ದರು. ವಿವಿಧ ಮಠಾಧೀಶರನ್ನು ತಮ್ಮ ಶಾಲೆಗೆ ಕರೆಸಿ, ಆಶೀರ್ವದಿಸುವಂತೆ ಮಾಡಿದ್ದರು

- ಡಾ. ಜಸ್ಟಿನ್ ಡಿಸೌಜ, ಮುಖ್ಯಸ್ಥ, ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆ

- - - -14ಕೆಡಿವಿಜಿ7, 8:

ದಾವಣಗೆರೆ ಹಾಲಕೆರೆ ಮಠದಲ್ಲಿ ಹಿರಿಯ ಪತ್ರಕರ್ತ ದಿ।। ವೀರಪ್ಪ ಎಂ.ಭಾವಿ ಭಾವಚಿತ್ರಕ್ಕೆ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ, ಶ್ರೀ ಬಸವಪ್ರಭು ಸ್ವಾಮೀಜಿ, ಅಥಣಿ ಎಸ್.ವೀರಣ್ಣ, ಕೆ.ಎಸ್.ಬಸವಂತಪ್ಪ, ಡಾ.ಜಸ್ಟಿನ್ ಡಿಸೌಜ ಇತರ ಗಣ್ಯರು ಪುಷ್ಪನಮನ ಸಲ್ಲಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಇಂದು, ನಾಳೆ ಬೆಲ್ಕಾನ್ ಪ್ರದರ್ಶನ
ಬುರುಡೆ ಪ್ರಕರಣ: ವಿಚಾರಣೆ 13ಕ್ಕೆ ಮುಂದೂಡಿಕೆ