ಬಿ.ಸಿ.ರೋಡ್ ಸ್ಪರ್ಶ ಕಲಾಮಂದಿರದಲ್ಲಿ ಸಂಸ್ಕಾರ ಭಾರತೀ ದ.ಕ.ಜಿಲ್ಲಾ ಬಂಟ್ವಾಳ ಘಟಕದ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ ನಟರಾಜ ಪೂಜನ ಮತ್ತು ಗುರುವಂದನಾ ಕಾರ್ಯಕ್ರಮದಲ್ಲಿ ಹಿರಿಯ ಯಕ್ಷಗಾನ ಕಲಾವಿದ ಸೂರಿಕುಮೇರು ಗೋವಿಂದ ಭಟ್ ಸನ್ಮಾನ ಸ್ವೀಕರಿಸಿದರು.
ಕನ್ನಡಪ್ರಭ ವಾರ್ತೆ ಬಂಟ್ವಾಳ
ಯಾವುದೇ ಕಲಾಪ್ರಕಾರ ಧರ್ಮಪ್ರಕಾರ ಧರ್ಮಜಾಗೃತಿ ಮಾಡಬೇಕು. ಆನಂದ ನೀಡಬೇಕು ಎಂದು ಹಿರಿಯ ಯಕ್ಷಗಾನ ಕಲಾವಿದ, ದಶಾವತಾರಿ, ರಾಷ್ಟ್ರ ಪ್ರಶಸ್ತಿ ವಿಜೇತ ಕೆ. ಗೋವಿಂದ ಭಟ್ ಹೇಳಿದ್ದಾರೆ.ಬಿ.ಸಿ.ರೋಡ್ ಸ್ಪರ್ಶ ಕಲಾಮಂದಿರದಲ್ಲಿ ಸಂಸ್ಕಾರ ಭಾರತೀ ದ.ಕ.ಜಿಲ್ಲಾ ಬಂಟ್ವಾಳ ಘಟಕದ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ ನಟರಾಜ ಪೂಜನ ಮತ್ತು ಗುರುವಂದನಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿಅವರು ಮಾತನಾಡಿದರು.ಕಲೆ ಅಮೂರ್ತವಾದುದು. ಕಲೆಗಳ ಮೂಲ ಉದ್ದೇಶವಿರುವುದು ಜನರ ಶಾಂತಿ, ಸಮಾಧಾನ. ಯಕ್ಷಗಾನವು ಸೃಜನಶೀಲ ಕಲೆಯಾಗಿದ್ದು ಕಾಲಕ್ಕೆ ತಕ್ಕಂತೆ ಬದಲಾವಣೆಯಾಗಿದ್ದು, ಸತ್ಯ, ಸಾಕ್ಷತ್ಕಾರವೇ ಕಲೆಯ ಪರಮ ಗುರಿ ಎಂದರು.ಹಿರಿಯ ಯಕ್ಷಗಾನ ಕಲಾವಿದ ಶಿವರಾಮ ಜೋಗಿ ಅಭಿನಂದನಾ ಭಾಷಣ ಮಾಡಿ, ಮೇರು ವ್ಯಕ್ತಿತ್ವ ಹಾಗೂ ವಿದ್ವತ್ತು ಹೊಂದಿರುವ ಗೋವಿಂದ ಭಟ್ಟರು ತನ್ನೊಂದಿಗೆ ಇತರ ಕಲಾವಿದರನ್ನೂ ರಂಗದಲ್ಲಿ ಬೆಳೆಸಿದ್ದಾರೆ ಎಂದು ಹೇಳಿದರು.ಅಧ್ಯಕ್ಷತೆ ವಹಿಸಿದ ಸಂಸ್ಕಾರ ಭಾರತೀ ಜಿಲ್ಲಾಧ್ಯಕ್ಷರಾದ ತೇವು ತಾರಾನಾಥ ಕೊಟ್ಟಾರಿ ಮಾತನಾಡಿ, ಸನಾತನ ಹಿಂದೂ ಧರ್ಮದ ಪರಂಪರೆಯೇ ಗುರು- ಶಿಷ್ಯ ಸಂಸ್ಕೃತಿ. ಗುರುವನ್ನು ಮರೆಯದ ಕ್ಷೇತ್ರವಿದ್ದರೆ ಅದು ಕಲಾ ಕ್ಷೇತ್ರ. ಕಲೆಯು ವ್ಯಕ್ತಿಯ ವಿಕಸನದೊಂದಿಗೆ ರಾಷ್ಟ್ರದ ವಿಕಾಸಕ್ಕೆ ಪೂರಕವಾಗಿದೆ. ಧರ್ಮ ಸಂಸ್ಕೃತಿ, ಸಂಸ್ಕಾರವನ್ನು ಸೇವೆ ಮತ್ತು ತ್ಯಾಗದ ಮೂಲಕ ಉಳಿಸಿ ಬೆಳೆಸುವ ಕಾರ್ಯ ನಡೆಯುತ್ತಿದೆ ಎಂದರು.ಪ್ರಮುಖರಾದ ಸಂಘ ಚಾಲಕ ಡಾ. ಬಾಲಕೃಷ್ಣ ಬಿ.ಸಿ.ರೋಡ್, ಉಪಾಧ್ಯಕ್ಷ ಶಶಿ ಕುಮಾರ್ ಇಂದ್ರ ವೇಣೂರು, ಕೋಶಾಧಿಕಾರಿ ವಿಜಯ ಶೆಟ್ಟಿ ಸಾಲೆತ್ತೂರ್, ಸಂಕಪ್ಪ ಶೆಟ್ಟಿ ಬಿ. ಸಿ.ರೋಡ್, ಜನಾರ್ದನ ಅಮ್ಮುಂಜೆ ಮತ್ತಿತರರಿದ್ದರು.ಜಿಲ್ಲಾ ಗೌರವಾಧ್ಯಕ್ಷ ಸರಪಾಡಿ ಅಶೋಕ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಸ್ಕಾರ ಭಾರತೀ ಜಿಲ್ಲಾ ಉಪಾಧ್ಯಕ್ಷ ಅನಿಲ್ ಪಂಡಿತ್ ಸ್ವಾಗತಿಸಿದರು. ಮಾನಸ ಕಡೆಗೋಳಿ ಸಂಸ್ಕಾರ ಧ್ಯೇಯ ಗೀತೆ ಹಾಡಿದರು. ವಿಜಯ ಶೆಟ್ಟಿ ಸಾಲೆತ್ತೂರು ಸನ್ಮಾನ ಪತ್ರ ವಾಚಿಸಿದರು, ಜಗದೀಶ ಕಡೆಗೋಳಿ ವಂದಿಸಿದರು. ಮಹಿಮಾ ಬಿ. ರೈ ಸಾಲೆತ್ತೂರು ಕಾರ್ಯಕ್ರಮ ನಿರೂಪಿಸಿದರು. ಜಗದೀಶ ಕಡೆಗೋಳಿ ವಂದಿಸಿದರು.ಉಪನ್ಯಾಸಕ ಜಯಾನಂದ ಪೆರಾಜೆ ಹಾಗೂ ಡಾ.ವಾರಿಜ ನಿರ್ಬೈಲು ಇವರು ಗಮಕ ಕಾರ್ಯಕ್ರಮ ನಡೆಸಿಕೊಟ್ಟರು
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.