ಕೈವಾರ ತಾತಯ್ಯನ ಆದರ್ಶ ಯುವ ಪೀಳಿಗೆಗೆ ಮಾದರಿ: ವೆಂಕಟೇಶಪ್ಪ

KannadaprabhaNewsNetwork |  
Published : Apr 27, 2024, 01:16 AM IST
ಫೋಟೋ : 22 ಹೆಚ್‌ಎಸ್‌ಕೆ 2 ಹೊಸಕೋಟೆ ತಾಲೂಕಿನ ಗೊಟ್ಟಿಪುರ ಗ್ರಾಮದಲ್ಲಿ ಶ್ರೀ ಕೈವಾರ ತಾತಯ್ಯನವರ ಮಠದ ೪೩ನೇ ವರ್ಷದ ವಾರ್ಷಿಕೋತ್ಸವ ಹಾಗೂ ಆರಾಧನಾ ಮಹೋತ್ಸವ ಕಾರ್ಯಕ್ರಮದಲ್ಲಿ ಹಾಪ್‌ಕಾಮ್ಸ್ ನಿರ್ದೇಶಕ ವೆಂಕಟೇಶಪ್ಪ ಭಾಗವಹಿಸಿದ್ದರು. | Kannada Prabha

ಸಾರಾಂಶ

ಅಹಂಕಾರವನ್ನ ಬಿಟ್ಟ ಭಕ್ತನಿಗೆ ಮಾತ್ರ ಪರಮ ಪದವಿ ದೊರೆಯುತ್ತದೆ ಗುರುಗಳಲ್ಲಿ ಅನನ್ಯ ಭಕ್ತಿಯಿಂದ ಶರಣಾಗತಿಯಾದರೆ ನಮ್ಮ ಮುಂದಿನ ಬದುಕನ್ನ ಅವರೇ ರೂಪಿಸುತ್ತಾರೆ. ಮಾನವ ಜನ್ಮವನ್ನು ವ್ಯರ್ಥ ಮಾಡಿಕೊಳ್ಳದೆ ಸದುಪಯೋಗ ಮಾಡಿಕೊಳ್ಳಬೇಕಾದರೆ ಗುರುವಿನ ಅನುಗ್ರಹ ಬೇಕು ನಮ್ಮಲ್ಲಿರುವ ಅವಿದ್ಯೆಗಳನ್ನ ತೆಗೆದುಹಾಕುವ ಶಕ್ತಿ ಗುರುವಿಗೆ ಮಾತ್ರವಿದೆ ಎಂದು ಕೈವಾರ ಯೋಗಿ ನಾರಾಯಣ ಮಠದ ಟ್ರಸ್ಟಿ ಬಾಲಕೃಷ್ಣ ಭಾಗವತ ತಿಳಿಸಿದರು.

ಕನ್ನಡಪ್ರಭ ವಾರ್ತೆ ಹೊಸಕೋಟೆ

ಕಾಲಜ್ಞಾನಿಯಾಗಿದ್ದ ಕೈವಾರ ತಾತಯ್ಯನವರ ಆದರ್ಶಗಳು ಇಂದಿನ ಯುವ ಪೀಳಿಗೆಗೆ ಮಾದರಿಯಾಗಿದ್ದು ಅವರ ಹಾದಿಯಲ್ಲಿ ಪ್ರತಿಯೊಬ್ಬರು ಸಾಗಬೇಕು ಎಂದು ಹಾಪ್‌ಕಾಮ್ಸ್ ನಿರ್ದೇಶಕ ವೆಂಕಟೇಶಪ್ಪ ತಿಳಿಸಿದರು.

ತಾಲೂಕಿನ ಗೊಟ್ಟಿಪುರ ಗ್ರಾಮದಲ್ಲಿರುವ ಕೈವಾರ ತಾತಯ್ಯನವರ ಮಠದ ೪೩ನೇ ವಾರ್ಷಿಕೋತ್ಸವ ಹಾಗೂ ಆರಾಧನಾ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕೈವಾರ ತಾತಯ್ಯನವರು ಯೋಗ ದೃಷ್ಟಿಯಿಂದ ಕಲಿಯುಗದಲ್ಲಿ ಕಟ್ಟ ಕಡೆಯ ಕಾಲಜ್ಞಾನವನ್ನು ನೀಡಿದ್ದಾರೆ. ಆ ಕಾಲಜ್ಞಾನದ ಅರಿವನ್ನ ಪ್ರತಿಯೊಬ್ಬರು ಪಡೆದುಕೊಂಡು ಜಾಗೃತರಾಗಬೇಕು. ಕೈವಾರ ತಾತಯ್ಯನವರು ಪರತತ್ವ ಸಾಧನೆಯನ್ನು ಮಾಡಿರುವ ಸದ್ಗುರುಗಳಾಗಿದ್ದು, ಭಕ್ತಿ, ಕರ್ಮ, ಯೋಗವನ್ನ ಸೇರಿಸಿ ಕೈವಾರ ತಾತಯ್ಯನವರು ಬೋಧನೆ ಮಾಡಿದ್ದಾರೆ. ಬಾಹ್ಯ ಸಾಧನೆಗಳಿಗಿಂತಲೂ ಅಂತರಂಗದ ಸಾಧನೆ ಶ್ರೇಷ್ಠವಾದದ್ದು ಮಾನವರಲ್ಲಿ ಬೇಧವನ್ನು ಮಾಡದೆ ಮುಕ್ತಿಯ ಪಥದೆಡೆಗೆ ಸಾಗುವ ಸಾಧನೆಯನ್ನು ತಾತಯ್ಯನವರು ಬೋಧಿಸಿದ್ದಾರೆ. ಅಂತಹ ಸದ್ಗುರುಗಳ ಆದರ್ಶಗಳನ್ನ ಯುವ ಪೀಳಿಗೆ ಪಾಲಿಸಬೇಕು. ತಾತಯ್ಯನವರ ಆದರ್ಶಗಳನ್ನ ಪ್ರೇರಣೆ ಪಡೆದುಕೊಂಡಿರುವವರು ಸಮಾಜದಲ್ಲಿ ಸಾಕಷ್ಟು ಜನರಿದ್ದು ಅವರ ಆದರ್ಶಗಳಿಂದ ಉನ್ನತಿಯೆಡೆಗೆ ಸಾಗಿದ್ದಾರೆ ಎಂದರು.

ಮಠದ ಧರ್ಮಾಧಿಕಾರಿಗಳಾದ ಮುನಿಸ್ವಾಮಿ ಮಾತನಾಡಿ, ನಾನು ಚಿಕ್ಕಂದಿನಿಂದಲೂ ಕೈವಾರ ತಾತಯ್ಯನವರ ಭಕ್ತನಾಗಿದ್ದೆ. ಕೈವಾರದಲ್ಲಿರುವ ಮಠಕ್ಕೆ ಚಿಕ್ಕಂದಿನಿಂದಲೂ ತೆರಳುತ್ತಿದ್ದ ಸಂದರ್ಭದಲ್ಲಿ ನಮ್ಮ ಗ್ರಾಮದಲ್ಲಿಯೇ ಮಠಸ್ಥಾಪನೆ ಮಾಡುವ ಉದ್ದೇಶಹೊಂದಿ ಹಲವಾರು ಮಹನೀಯರ ಸಹಾಯದಿಂದ ಮಠವನ್ನು ಸ್ಥಾಪನೆ ಮಾಡಿದ್ದು ಇಂದಿಗೆ ೪೩ ವರ್ಷಗಳು ಕಳೆದಿದೆ. ಈ ಹಿನ್ನೆಲೆಯಲ್ಲಿ ಮಠದಲ್ಲಿ ಹೋಮ ಹವನ, ಭಜನೆ, ಕೀರ್ತನೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಗಳನ್ನು ಹಮ್ಮಿಕೊಳ್ಳುವುದರ ಮೂಲಕ ತಾತಯ್ಯನವರ ಆರಾಧನೆ ಮಾಡಲಾಗುತ್ತಿದೆ ಎಂದರು.

ಕೈವಾರ ಮಠದ ಟ್ರಸ್ಟಿ ಬಾಲಕೃಷ್ಣ ಭಾಗವತ, ಹಿರಿಯ ಕಲಾವಿದ ಜ್ಞಾನಮೂರ್ತಿ, ಗ್ರಾಮ ಪಂಚಾಯತಿ ಸದಸ್ಯ ರಮೇಶ್, ಮುಖಂಡರಾದ ನಾಗೇಶ್, ಕೈವಾರ ಜಗದೀಶ್, ಮುನಿರಾಜು ಸೇರಿದಂತೆ ಹಲವಾರು ಮುಖಂಡರು ಹಾಜರಿದ್ದರು. ಅಹಂಕಾರವನ್ನ ಬಿಟ್ಟ ಭಕ್ತನಿಗೆ ಮಾತ್ರ ಪರಮ ಪದವಿ ದೊರೆಯುತ್ತದೆ ಗುರುಗಳಲ್ಲಿ ಅನನ್ಯ ಭಕ್ತಿಯಿಂದ ಶರಣಾಗತಿಯಾದರೆ ನಮ್ಮ ಮುಂದಿನ ಬದುಕನ್ನ ಅವರೇ ರೂಪಿಸುತ್ತಾರೆ. ಮಾನವ ಜನ್ಮವನ್ನು ವ್ಯರ್ಥ ಮಾಡಿಕೊಳ್ಳದೆ ಸದುಪಯೋಗ ಮಾಡಿಕೊಳ್ಳಬೇಕಾದರೆ ಗುರುವಿನ ಅನುಗ್ರಹ ಬೇಕು ನಮ್ಮಲ್ಲಿರುವ ಅವಿದ್ಯೆಗಳನ್ನ ತೆಗೆದುಹಾಕುವ ಶಕ್ತಿ ಗುರುವಿಗೆ ಮಾತ್ರವಿದೆ ಎಂದು ಕೈವಾರ ಯೋಗಿ ನಾರಾಯಣ ಮಠದ ಟ್ರಸ್ಟಿ ಬಾಲಕೃಷ್ಣ ಭಾಗವತ ತಿಳಿಸಿದರು.(ಫೋಟೋ)ಹೊಸಕೋಟೆ ತಾಲೂಕಿನ ಗೊಟ್ಟಿಪುರ ಗ್ರಾಮದಲ್ಲಿ ಶ್ರೀ ಕೈವಾರ ತಾತಯ್ಯನವರ ಮಠದ ೪೩ನೇ ವರ್ಷದ ವಾರ್ಷಿಕೋತ್ಸವ ಹಾಗೂ ಆರಾಧನಾ ಮಹೋತ್ಸವ ಕಾರ್ಯಕ್ರಮದಲ್ಲಿ ಹಾಪ್‌ಕಾಮ್ಸ್ ನಿರ್ದೇಶಕ ವೆಂಕಟೇಶಪ್ಪ ಭಾಗವಹಿಸಿದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ