ಕನ್ನಡಪ್ರಭ ವಾರ್ತೆ ಕೊರಟಗೆರೆ
ತಾತಯ್ಯನವರ ತತ್ವ ಆದರ್ಶ ಇಂದಿಗೂ ಪ್ರಸ್ತುತ. ಅವರು ತಮ್ಮ ಕೀರ್ತನೆಗಳ ಮೂಲಕ ಸಮಾಜದ ಅಂಕು ಡೊಂಕುಗಳನ್ನು ತಿದ್ದುವ ಪ್ರಯತ್ನ ಮಾಡಿದರು, ಯೋಗಿ ನಾರೇಯಣ ಯಂತ್ರೀಂದ್ರರ ಆದರ್ಶಗಳನ್ನು ಜನರಿಗೆ ತಲುಪಿಸಲು ಇಂತಹ ಜಯಂತಿಗಳು ಸಹಕಾರಿ. ಬಲಿಜ ಸಮಾಜಕ್ಕೆ ಸರ್ಕಾರ ಶೈಕ್ಷಣಿಕ, ಉದ್ಯೋಗ ಕ್ಷೇತ್ರದಲ್ಲಿ ಮೀಸಲಾತಿ ನೀಡಿದೆ, ಕೃಷಿಕರೇ ಹೆಚ್ಚಿರುವ ಈ ಸಮಾಜದ ಮಕ್ಕಳು ಶೈಕ್ಷಣಿಕ ಕ್ಷೇತ್ರದಲ್ಲಿ ಹೆಚ್ಚಿನ ಪ್ರಗತಿ ಕಾಣಬೇಕು ಎಂದು ತಿಳಿಸಿದರು.
ತಾಲೂಕು ಬಲಿಜ ಸಂಘದ ಅಧ್ಯಕ್ಷ ಎನ್. ಪದ್ಮನಾಭ್ ಮಾತನಾಡಿ ಕರ್ನಾಟಕ ಸರ್ಕಾರ ಬಲಿಜ ಜನಾಂಗದ ಒತ್ತಾಸೆಯ ಮೇರೆಗೆ ಕಳೆದ ನಾಲ್ಕು ವರ್ಷಗಳಿಂದ ಕೈವಾರ ತಾತಯ್ಯನವರ ಜಯಂತಿ ಸರ್ಕಾರಿ ಕಾರ್ಯಕ್ರಮವಾಗಿ ಆಚರಿಸುತ್ತಿದೆ, ಈ ಬಾರಿ ತಾತಯ್ಯನವರ ೩೦೦ ನೇ ಜಯಂತಿ ಆಚರಿಸಲಾಗುತ್ತಿದೆ. ಅದರೆ ರಾಜ್ಯ ಸರ್ಕಾರ ಕಳೆದ ೪೦ ವರ್ಷಗಳಿಂದ ಮೀಸಲಾತಿಯಲ್ಲಿ ೨ಎ ಯಿಂದ ೩ಎಗೆ ಬದಲಿಸಿ ಅನ್ಯಾಯ ಮಾಡಿದ್ದು ಇಲ್ಲಿಯವೆರಗೂ ಸರಿಪಡಿಸಿಲ್ಲ ಹಾಗೂ ಬಲಿಜ ನಿಗಮ ರಚಿಸಿ ಹಣ ಬಿಡುಗಡೆ ಮಾಡದೆ ನಿರ್ಲಕ್ಷಿಸುತ್ತಿದೆ ಎಂದು ಹೇಳಿದರು.ಪಪಂ ಮುಖ್ಯಾಧಿಕಾರಿ ಉಮೇಶ್ ಮಾತನಾಡಿ, ತಾತಯ್ಯನವರು ತಮ್ಮ ಜೀವನ ಸಂದೇಶವನ್ನು ಜನರಿಗೆ ತಲುಪಿಸಲು ಶಕ್ತಿಮೀರಿ ಪ್ರಯತ್ನಿಸಿದವರು. ನಾಡಿಗೆ ಉತ್ತಮ ಸಂದೇಶದೊಂದಿಗೆ ಕಾಲಜ್ಞಾನ ನೀಡಿ ಹಾಗೂ ಸಮಾಜದಲ್ಲಿ ಸಾಮರಸ್ಯ ಮತ್ತು ಶಾಂತಿ ಸೌಹಾರ್ದತೆಗಾಗಿ ಶ್ರಮಿಸಿದ ಕೈವಾರ ತಾತಯ್ಯನವರ ತತ್ವ, ಆದರ್ಶ ಗುಣಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಆಳವಡಿಸಿಕೊಂಡು ಸನ್ಮಾರ್ಗದಲ್ಲಿ ಸಾಗಬೇಕು ಎಂದು ತಿಳಿಸಿದರು.
ತಾಲೂಕು ಬಲಿಜ ಸಂಘದ ಪ್ರಧಾನ ಕಾರ್ಯದರ್ಶಿ ನವೀನ್ ಕುಮಾರ್, ಪ.ಪಂ ಮಾಜಿ ಸದಸ್ಯ ಕೆ.ಎಲ್.ಆನಂದ್, ಅಧಿಕಾರಿಗಳಾದ ಮಧುಸೂದನ್, ಬಸವರಾಜು, ನಕುಲ್, ರುದ್ರಪ್ಪ, ಯಮುನಾ, ಕಾಂತರಾಜು, ಶೃತಿ, ಪ್ರೇಂಡ್ಸ್ ಗ್ರೂಪ್ ಅಧ್ಯಕ್ಷ ರವಿಕುಮಾರ್, ಬೆನಕಾವೆಂಕಟೇಶ್, ಪತ್ರಕರ್ತರಾದ ಕೆ.ಬಿ. ಲೋಕೇಶ್, ದೇವರಾಜು, ತಿಮ್ಮರಾಜು, ಮುಖಂಡರಾದ ವೆಂಕಟೇಗೌಡ, ಗಿರಿಜಮ್ಮ ಕೃಷ್ಣಪ್ಪ, ಮಂಜುಳಾ ಗೋವಿಂದರಾಜು, ಕಿರಣ್ಕುಮಾರ್, ಕುಂಭಿ ನರಸಿಂಹಯ್ಯ, ನಾರಾಯಣ್, ಸಿದ್ದಾರ್ಥ ಸೇರಿದಂತೆ ಇತರರು ಇದ್ದರು.