ಕನ್ನಡಪ್ರಭ ವಾರ್ತೆ ಕಲಬುರಗಿ
ಕಲಬುರಗಿಯ ಪ್ರಜ್ಞಾ ಪ್ರವಾಹ, ಶರಣಬಸವ ವಿಶ್ವವಿದ್ಯಾಲಯ, ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಕರ್ನಾಟಕ ಘಟಕದ ಆಶ್ರಯದಲ್ಲಿ ನಗರದ ಬಸವರಾಜಪ್ಪ ಅಪ್ಪ ಸ್ಮಾರಕ ಭವನದಲ್ಲಿ ಶನಿವಾರ ರಾತ್ರಿ ‘ವಚನ ದರ್ಶನ’ ಕೃತಿ ಬಿಡುಗಡೆ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಸಮಾರಂಭ ಆರಂಭವಾಗುವ ವೇಳೆ ಸಭಾಂಗಣದೊಳಗೆ ನುಗ್ಗಲು ಯತ್ನಿಸಿ ಅಖಿಲ ಭರತ ಲಿಂಗಾಯತ ಮಹಾಸಭಾ, ಬಸವ ದಳ ಸಂಘಟನೆ ಹಾಗೂ ಪ್ರಗತಿಪರರಿಂದ ಮುಖಂಡರಿಂದ ಪ್ರತಿಭಟನೆ ಶುರುವಾಯ್ತು.ಇದು ಸಂಘ ಪರಿವಾರದ ಪ್ರೇರಿತ ವಿಶ್ವ ಗುರು ಕರ್ನಾಟಕ ಸಾಂಸ್ಕೃತಿಕ ನಾಯಕ ಬಸವಣ್ಣನವರ, ಶರಣ ಚಳುವಳಿಯ ನಿಜ ಸ್ವರೂಪ ತಿರುಚಿರುವ ಕೃತಿ.
ಈ ಸಂದರ್ಭದಲ್ಲಿ ಆರ್ಜಿ ಶೆಟಗಾರ, ಆರ್ಕೆ ಹುಡುಗಿ, ಶಾಂತಪ್ಪ ಪಾಟೀಲ, ಪ್ರಭು ಖಾನಾಪುರ, ಮೀನಾಕ್ಷಿ ಬಾಳಿ, ಸುನೀಲ ಮಾರುತಿ ಮಾನಪಡೆ, ರವೀಂದ್ರ ಶಬಾದಿ,ಲಕ್ಷ್ಮೀಕಾಂತ ಹುಬ್ಬಳ್ಳಿ, ಶರಣಗೌಡ ಪಾಟೀಲ, ಮಹಾಂತೇಶ್ ಕಲಬುರಗಿ, ಪ್ರಭುಲಿಂಗ ಮಾಹಗಾಂವಕರ್, ಲವಿತ್ರಾ ವಸ್ತ್ರದ ಸೇರಿದಂತೆ ಐವತ್ತಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿದರು.
ನಂತರವೇ ವಚನ ದರ್ಶನ ಕೃತಿ ಬಿಡುಗಡೆ ಸಮಾರಂಭ ನಡೆಯಿತು. ಸಮಾರಂಭದಲ್ಲಿ ಬಿಜೆಪಿ ರಾಷ್ಟೀಯ ಸಂಘಟನಾ ಪ್ರ ಕಾರ್ಯದರ್ಶಿ ಬಿಎಲ್ ಸುತೋಷ್, ಸದಾಶಿವ ಸ್ವಾಮೀಜಿ ಸೇರಿದಂತೆ ಹಲವರು ಪ್ರಮುಖರು ಭಾಗಿಯಾಗಿದ್ದರು.