ಏಪ್ರಿಲ್ ೨ರಂದು ಕಾಲಕಾಲೇಶ್ವರ ಜಾತ್ರೆ

KannadaprabhaNewsNetwork |  
Published : Mar 30, 2026, 01:45 AM IST
 ಸ್ವಯಂಭೂ ಕಾಲಕಾಲೇಶ್ವರ | Kannada Prabha

ಸಾರಾಂಶ

ಕಾಲಕಾಲೇಶ್ವರ ದೇವರ ಜಾತ್ರೆಯು ಏ. ೧೨ರಂದು ದವನದ ಹುಣ್ಣಿಮೆಯಂದು ವೈಭವಗಳೊಂದಿಗೆ ರಥೋತ್ಸವವು ನಡೆಯಲಿದೆ.

ಗಜೇಂದ್ರಗಡ: ಪಟ್ಟಣ ಸಮೀಪದ ಅಸಂಖ್ಯಾತ ಭಕ್ತರ ಆರಾಧ್ಯ ಕುಲದೈವ ಕಾಲಕಾಲೇಶ್ವರ ಜಾತ್ರಾ ರಥೋತ್ಸವ ಏ. ೨ರಂದು ದವನದ ಹುಣ್ಣಿಮೆಯಂದು ಸಂಜೆ ೫.೨೦ಕ್ಕೆ ಅದ್ಧೂರಿಯಾಗಿ ನಡೆಯಲಿದೆ.

ದೇಶದಲ್ಲಿ ಪ್ರಚಾರದಲ್ಲಿರುವ ೧೨ ಜ್ಯೋರ್ತಿಲೀಂಗಗಳ ನಂತರದಲ್ಲಿ ಅಷ್ಟೇ ಪ್ರಚಾರದಲ್ಲಿ ಇರುವ ಉಪ ಜ್ಯೋರ್ತಿಲೀಂಗಗಳ ಸಾಲಿಗೆ ಬರುವುದು. ಗಜೇಂದ್ರಗಡ ತಾಲೂಕಿನ ದಕ್ಷಿಣ ಪ್ರಸಿದ್ಧಿ ಸ್ವಯಂಭೂ ಲಿಂಗ ಕಾಲಕಾಲೇಶ್ವರ ದೇವಸ್ಥಾನವು ಈ ಭಾಗದ ಅಸಂಖ್ಯಾತ ಜನರ ಆರಾಧ್ಯ ದೈವನಾಗಿದ್ದಾನೆ.ದೇವಸ್ಥಾನದಲ್ಲಿ ನಿತ್ಯ ತ್ರಿಕಾಲ ಪೂಜೆ ನಡೆಯುತ್ತದೆ. ಬೆಳಗ್ಗೆ ಮತ್ತು ಸಂಜೆ ಜಂಗಮರಿಂದ ಹಾಗೂ ಮಧ್ಯಾಹ್ನ ಬ್ರಾಹ್ಮಣರು ಪೂಜೆ ಸಲ್ಲಿಸುತ್ತಾರೆ. ಐತಿಹಾಸಿಕ ಮತ್ತು ಪೌರಾಣಿಕವಾಗಿ ತನ್ನದೆ ಆದ ಚರಿತ್ರೆಯನ್ನು ಹೊಂದಿರುವ ಸುಣ್ಣ- ಸುರುಮಗಳ ಲೀಲೆ- ದೇವಸ್ಥಾನದ ಅಂತರ ಗಂಗೆಯ ಮೇಲ್ಭಾಗದಲ್ಲಿ ಯಾರೂ ಹತ್ತಲಾಗದಂತ ಸ್ಥಳದಲ್ಲಿ ಆಶ್ಟರ್ಯಕರ ರೀತಿಯಲ್ಲಿ ಸುಣ್ಣ- ಸುರುಮ ತಾನೆ ಹಚ್ಚಿಕೊಳ್ಳತ್ತದೆ ಎಂಬ ನಂಬಿಕೆ ಇಲ್ಲಿನ ಭಕ್ತರದ್ದಾಗಿದೆ.

ಕಾಲಕಾಲೇಶ್ವರ ದೇವರ ಜಾತ್ರೆಯು ಏ. ೧೨ರಂದು ದವನದ ಹುಣ್ಣಿಮೆಯಂದು ವೈಭವಗಳೊಂದಿಗೆ ರಥೋತ್ಸವವು ನಡೆಯಲಿದೆ.ದವನದ ಹುಣ್ಣಿಮೆ ದಿನದಂದು ವಿಶೇಷ ಪೂಜೆಯೊಂದಿಗೆ ಉತ್ಸವ ಮೂರ್ತಿಗೆ ದವನಾರ್ಪಣೆ, ತೆಂಗಿನ ಕಾಯಿ, ಉತ್ತತ್ತಿ, ಬಾಳೆಹಣ್ಣು, ಕಬ್ಬು ದವಸ- ಧಾನ್ಯ ಸಮರ್ಪಿಸಿದ ನಂತರ ಪಲ್ಲಕ್ಕಿ ಸೇವೆ. ದುರ್ಗಾದೇವಿಯ ವಿಶೇಷ ಪೂಜೆಯೊಂದಿಗೆ ರಥದಲ್ಲಿ ಸ್ವಾಮಿಯ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿದ ನಂತರ ಧರ್ಮದರ್ಶಿಗಳಾದ ಘೋರ್ಪಡೆಯವರು ಸಂಜೆ ಬಾನಂಗಳದಲ್ಲಿ ಚಿತ್ತಾ ನಕ್ಷತ್ರ ಕಾಣಿಸಿಕೊಳ್ಳುತ್ತಿದ್ದಂತೆಯೇ ತುಪಾಕಿ ಹಾರಿಸುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಲಿದ್ದಾರೆ.ಏ. ೧ರಂದು ಮಹಾರಥಕ್ಕೆ ಕಳಸಾರೋಹಣ ಬಳಿಕ ಕಾಲಕಾಲೇಶ್ವರ ಬೋರಾದೇವಿಯವರ ನಂದಿ ವಾಹನದಲ್ಲಿ ಕಲ್ಯಾಣೋತ್ಸವ ಜರುಗಲಿದ್ದು, ಏ. ೨ರಂದು ಬೆಳಗ್ಗೆ ಸ್ವಾಮಿಗೆ ರುದ್ರಾಭಿಷೇಕ, ಬಿಲ್ವಾರ್ಚನೆ, ದವನಾರ್ಪಣೆ ಸೇವೆ ಸಂಜೆ ಮಹಾರಥೋತ್ಸವ ನಡೆಯಲಿದೆ. ಏ. ೩ರಂದು ಕಡುಬಿನ ಕಾಳಗ, ಸ್ವಾಮಿಗೆ ನಿತ್ಯ ರುದ್ರಾಭಿಷೇಕ ಸಂಜೆ ಕಾಲಕಾಲೇಶ್ವರ ಸ್ವಾಮಿಗೆ ಬೋರಾದೇವಿಯನ್ನು ಒಪ್ಪಿಸುವ ಕಾರ್ಯಕ್ರಮ ಬಳಿಕ ತೊಟ್ಟಿಲು, ಗುಲಾಲ ಸೇವೆ ನಡೆಯಲಿದೆ.

ಏ. ೪ರಂದು ಪುಷ್ಕರ್ಣಿ ತೀರ್ಥದಲ್ಲಿ ಕಾಲೇಶನಿಗೆ ಹಾಗೂ ಬೋರಾದೇವಿಗೆ ಅಮೃತ ಸ್ನಾನ ನಡೆಯಲಿದೆ. ಭಾವೈಕ್ಯತೆಯ ಸಂಕೇತವಾಗಿರುವ ಈ ಜಾತ್ರೆಯು ಐದು ದಿನಗಳ ವರೆಗೆ ನಡೆಯಲಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸ್ಪರ್ಧೆ ಎದುರಿಸಲು ಯುವ ವಿದ್ಯಾರ್ಥಿಗಳು ಸನ್ನದ್ಧರಾಗಬೇಕು
ಪರಸ್ಪರ ಹೊಂದಾಣಿಕೆ, ಪ್ರೀತಿ ವಿಶ್ವಾಸವೇ ಜೀವನ