ಕನ್ನಡಪ್ರಭ ವಾರ್ತೆ ವಿರಾಜಪೇಟೆ
ಕನ್ನಡಪ್ರಭ ಪ್ರಸ್ತುತಿಯಲ್ಲಿ ವಿರಾಜಪೇಟೆಯ ಲಿಟಲ್ ಸ್ಕಾಲರ್ಸ್ ಅಕಾಡೆಮಿ ಹಾಗೂ ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಲಿಟಲ್ ಸ್ಕಾಲರ್ಸ್ ಅಕಾಡೆಮಿಯಲ್ಲಿ ಗುರುವಾರ ವಿರಾಜಪೇಟೆ ಹಾಗೂ ಪೊನ್ನಂಪೇಟೆ ತಾಲೂಕಿನ ವಿದ್ಯಾರ್ಥಿಗಳಿಗೆ ನಡೆದ ತಾಲೂಕು ಮಟ್ಟದ ಚಿತ್ರಕಲಾ ಸ್ಪರ್ಧಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಾಮೇಶ್ವರಂ ಎಂಬ ಪುಟ್ಟ ಊರಿನಿಂದ ಬೆಳೆದ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರು ನಮ್ಮ ದೇಶದ ರಾಷ್ಟ್ರಪತಿಯಾಗಿ, ವಿಜ್ಞಾನಿಯಾಗಿ ಕೆಲಸ ಮಾಡಿದ್ದಾರೆ. ಅವರಂತೆ ಇನ್ನೂ ಸಾಕಷ್ಟು ಜನರು ವಿವಿಧ ಹುದ್ದೆಗಳನ್ನು ಅಲಂಕರಿಸಿ ಸಾಧನೆ ಮಾಡಿದ್ದಾರೆ. ಅವರ ಜೀವನವನ್ನು ಆದರ್ಶವಾಗಿಟ್ಟುಕೊಂಡು ಇಂದಿನ ವಿದ್ಯಾರ್ಥಿಗಳು ಸಾಧನೆ ಮಾಡಬೇಕೆಂದು ಸಲಹೆ ನೀಡಿದರು.ಉತ್ತಮವಾದ ಕೆಲಸ:
ಜೀವನದಲ್ಲಿ ವಿದ್ಯಾರ್ಜನೆ ಮುಖ್ಯವಲ್ಲ. ಎಲ್ಲ ರೀತಿಯ ವ್ಯಕ್ತಿತ್ವ ಪ್ರಮುಖವಾಗುತ್ತದೆ. ಅರಣ್ಯ ಇಲಾಖೆಯಿಂದ ದೇಶದಾದ್ಯಂತ ಹುಲಿ ಗಣತಿ ಕೂಡ ಹಮ್ಮಿಕೊಂಡಿದ್ದಾರೆ. ಕಾಡು ಉಳಿದರೆ ಮಾತ್ರ ಮನುಷ್ಯನ ಜೀವನ ಉಳಿಯಲು ಸಾಧ್ಯ. ಪ್ಲಾಸ್ಟಿಕ್ ಮಿತವಾಗಿ ಬಳಸಬೇಕು ಎಂದು ಕರೆ ನೀಡಿದರು.
ಶೇ.30 ರಷ್ಟು ಅರಣ್ಯ ಪ್ರದೇಶ:
ವಿರಾಜಪೇಟೆಯ ಶಿಕ್ಷಕರಾದ ಕೆ.ವಿ. ಪೌಲೋಸ್ ಮಾತನಾಡಿ ಸ್ಪರ್ಧೆ ಮಕ್ಕಳ ಜೀವನದಲ್ಲಿ ಬಹಳ ಮುಖ್ಯ. ಸೋಲು-ಗೆಲುವು ಬೇರೆ, ಪಾಲ್ಗೊಳ್ಳುವುದು ಮುಖ್ಯ. ನಮ್ಮ ರಾಜ್ಯದಲ್ಲಿ 43 ಸಾವಿರ ಚದರ ಕಿ.ಮೀ ಅರಣ್ಯ ಪ್ರದೇಶವಿದೆ. ಹಾಗಾಗಿ ಅರಣ್ಯ ಪ್ರದೇಶವನ್ನು ಹೆಚ್ಚಿಸಬೇಕಾದ ಅನಿವಾರ್ಯತೆ ಇದೆ ಎಂದರು.
ಶಾಲೆಯ ಶಿಕ್ಷಕಿ ಜೋಲ್ಸಿನ್ ಪ್ರಶಸ್ತಿ ವಿಜೇತರ ಹೆಸರು ವಾಚಿಸಿದರು.
4 ಮತ್ತು 5ನೇ ತರಗತಿ ವಿದ್ಯಾರ್ಥಿಗಳಿಗೆ ನಡೆದ ಚಿತ್ರಕಲಾ ಸ್ಪರ್ಧೆಯಲ್ಲಿ ಸಿದ್ದಾಪುರ ಇಕ್ರಾ ಪಬ್ಲಿಕ್ ಶಾಲೆ ಹಫ್ಸಾ ಫಾತಿಮಾ(ಪ್ರ), ರಿಝಾ ಫಾತಿಮಾ(ದ್ವಿ) ಕಾವೇರಿ ಶಾಲೆಯ ಗಿಯ ಅಚ್ಚಮ್ಮ (ತೃ), ಎಸ್ ಎಂ ಎಸ್ ಶಾಲೆಯ ಲಿಯಾನ ಜಾನಿ ಹಾಗೂ ಬ್ರೈಟ್ ಪಬ್ಲಿಕ್ ಶಾಲೆಯ ಎನ್.ಎಸ್. ಅಯಾನ್ ಸಮಾಧಾನಕರ ಬಹುಮಾನ ಗಳಿಸಿದರು.
6 ಮತ್ತು 7 ನೇ ತರಗತಿ ವಿದ್ಯಾರ್ಥಿಗಳಿಗೆ ನಡೆದ ಸ್ಪರ್ಧೆಯಲ್ಲಿ ಗೋಣಿಕೊಪ್ಪ ಕೂರ್ಗ್ ಪಬ್ಲಿಕ್ ಶಾಲೆಯ ಎಂ.ಬಿ. ಆಯುಷ್(ಪ್ರ), ವಿರಾಜಪೇಟೆ ಸಂತ ಅನ್ನಮ್ಮ ಶಾಲೆಯ ಮೊಹಮ್ಮದ್ ಅರ್ಶಾನ್(ದ್ವಿ), ಜುವನ್ ಕ್ರಿಸ್ಟಿ(ತೃ), ಟಿ.ಎಸ್. ಶಾನ್ವಿ ಹಾಗೂ ಲಯನ್ಸ್ ಶಾಲೆಯ ಕೆ.ಆರ್.ಪೌನಿ ಸಮಾಧಾನಕರ ಬಹುಮಾನ ಪಡೆದರು.8ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ನಡೆದ ಸ್ಪರ್ಧೆಯಲ್ಲಿ ಕಾವೇರಿ ಶಾಲೆಯ ಹನಿಯಾ(ಪ್ರ), ಅರ್ನವ್(ದ್ವಿ), ವಿರಾಜಪೇಟೆ ಸಂತ ಅನ್ನಮ್ಮ ಶಾಲೆಯ ಟಿ.ಕೆ. ತೇಜಸ್(ತೃ) ಬ್ರೈಟ್ ಪಬ್ಲಿಕ್ ಶಾಲೆಯ ಕೆ.ಪಿ. ನೋಫ್ಲಾ, ಎಂ.ಎ. ಫರ್ಜಾ ಶೆರೆನ್ ಸಮಾಧಾನಕರ ಬಹುಮಾನ ಗಳಿಸಿದರು.
ನೂರಕ್ಕೂ ಅಧಿಕ ಮಂದಿ ಭಾಗಿಕನ್ನಡಪ್ರಭ ಆಯೋಜಿಸಿದ ವಿರಾಜಪೇಟೆ ಹಾಗೂ ಪೊನ್ನಂಪೇಟೆ ತಾಲೂಕಿನ ಚಿತ್ರಕಲಾ ಸ್ಪರ್ಧೆಯಲ್ಲಿ ಸುಮಾರು ನೂರಕ್ಕೂ ಅಧಿಕ ವಿದ್ಯಾರ್ಥಿಗಳು ಪಾಲ್ಗೊಂಡರು. ಹುಲಿ, ಸಿಂಹ, ಚಿರತೆ, ಹಾರ್ನಬಿಲ್ ಸೇರಿ ಹಲವು ಬಗೆಯ ಅರಣ್ಯ, ವನ್ಯಜೀವಿ ಚಿತ್ರವನ್ನು ಬಿಡಿಸಿ ಗಮನ ಸೆಳೆದರು. 4-5ನೇ ತರಗತಿ, 6ಮತ್ತು 7ನೇ ತರಗತಿ ಹಾಗೂ 8ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಸ್ಪರ್ಧೆ ನಡೆಯಿತು.