ಕನ್ನಡಪ್ರಭ ವಾರ್ತೆ ಕೊಲ್ಹಾರ
ಪಟ್ಟಣದ ಡಾ.ಅಬ್ದುಲ್ ಕಲಾಂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಬುಧವಾರ ಕನ್ನಡಪ್ರಭ ದಿನಪತ್ರಿಕೆ ಹಾಗೂ ಸುವರ್ಣ ನ್ಯೂಸ್ ವತಿಯಿಂದ ಪ್ರೌಢ ಶಾಲಾ ಮಕ್ಕಳಿಗಾಗಿ ಆಯೋಜಿಸಿದ್ದ ಕರ್ನಾಟಕದ ಅರಣ್ಯ ಮತ್ತು ವನ್ಯ ಜೀವಿಗಳು ವಿಷಯ ಕುರಿತಾದ ಕೊಲ್ಹಾರ ತಾಲೂಕು ಮಟ್ಟದ ಚಿತ್ರಕಲಾ ಸ್ಪರ್ಧೆ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ಚಿತ್ರಕಲೆ ಮೂಲಕ ಮಕ್ಕಳಿಗೆ ಅಕ್ಷರ ಅಭ್ಯಾಸವಾಗಬೇಕು ಎಂದು ಮಹಾತ್ಮ ಗಾಂಧೀಜಿಯವರು ಸ್ವಾತಂತ್ರ್ಯ ಪೂರ್ವದಲ್ಲಿಯೇ ತಿಳಿಸಿದ್ದಾರೆ ಎಂದರು.
ಇತ್ತೀಚಿನ ದಿನಮಾನಗಳಲ್ಲಿ ಚಿತ್ರಕಲೆ ಮಾಯವಾಗುತ್ತಿದ್ದು, ಚಿತ್ರಕಲೆ ಕಲಿಸುವ ಶಿಕ್ಷಕರ ಕೊರತೆಯೇ ಇದಕ್ಕೆ ಮುಖ್ಯ ಕಾರಣವಾಗಿದೆ. ಸರ್ಕಾರ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಬೇಕು. ಒಂದು ವೇಳೆ ಮಾಡದೆ ಹೋದರೆ ನಾವೆಲ್ಲ ಸ್ವಾಮೀಜಿಗಳು ಸೇರಿಕೊಂಡು ಚಿತ್ರಕಲಾ ಶಿಕ್ಷಕರೊಂದಿಗೆ ವಿಧಾನಸೌಧ ಮುತ್ತಿಗೆ ಹಾಕಬೇಕಾಗುತ್ತೆ ಎಂದು ಎಚ್ಚರಿಕೆ ನೀಡಿದರು.ಕಾರ್ಯಕ್ರಮ ಉದ್ಘಾಟಿಸಿ ಆಲಮಟ್ಟಿ ವಲಯ ಅರಣ್ಯ ಅಧಿಕಾರಿ ರಾಜಶೇಖರ ಲಮಾಣಿ ಮಾತನಾಡಿ, ಕನ್ನಡಪ್ರಭ ಪತ್ರಿಕೆ ಕರ್ನಾಟಕದ ಅರಣ್ಯ ಮತ್ತು ವನ್ಯ ಜೀವಿಗಳ ರಕ್ಷಣೆಗಾಗಿ ಮಕ್ಕಳ ದಿನಾಚರಣೆ ಅಂಗವಾಗಿ ರಾಜ್ಯಮಟ್ಟದಲ್ಲಿ ಪ್ರೌಢ ಶಾಲಾ ಮಕ್ಕಳಿಗಾಗಿ ಚಿತ್ರಕಲೆ ಸ್ಪರ್ಧೆ ಏರ್ಪಡಿಸಿ ಅವರಲ್ಲಿ ಜಾಗೃತಿ ಮೂಡಿಸುತ್ತಿರುವುದು ಬಹಳ ಸಂತೋಷವಾಗಿದೆ. ಇವತ್ತು ಅರಣ್ಯ ಮತ್ತು ವನ್ಯಜೀವಿಗಳ ಬಗ್ಗೆ ಮಕ್ಕಳು ಒಳ್ಳೆಯ ಚಿತ್ರಕಲೆಯನ್ನು ಕಲ್ಪನೆಗೆ ತಕ್ಕಂತೆ ತೆಗೆದಿದ್ದಾರೆ. ಅವರ ಕಲೆ ಮೆಚ್ಚುವಂತದ್ದಾಗಿದೆ. ಇತ್ತೀಚಿನ ದಿನಗಳಲ್ಲಿ ನಮ್ಮ ಜಿಲ್ಲೆಯ ತಾಪಮಾನ ಬಹಳಷ್ಟು ಏರಿಕೆ ಆಗಿತ್ತು, ಅದಕ್ಕೆ ಮುಖ್ಯ ಕಾರಣ ಶೇ.33 ಇರಬೇಕಾದ ಅರಣ್ಯ ಕೇವಲ ಶೇ. 0.1 ಇದೆ. ನಾವು ಇಂತಹ ಆಘಾತಕಾರಿ ವಾತಾವರಣದಲ್ಲಿ ಬದಕುತ್ತಿದ್ದೇವೆ ಎಂದು ಕಳವಳ ವ್ಯಕ್ತಪಡಿಸಿದರು.
ಮಕ್ಕಳ ಸಾಹಿತ್ಯ ಪರಿಷತ್ನ ತಾಲೂಕಾಧ್ಯಕ್ಷ ಜಗದೀಶ ಸಾಲಳ್ಳಿ ಮಾತನಾಡಿ, ಚಿತ್ರಕಲೆಯೊಂದು ಸ್ಪರ್ಧೆಯಲ್ಲ. ಅದು ದೈವದತ್ತ ಕಲೆಯಾಗಿದೆ. ಪರಿಸರದ ಕುರಿತು ಚಿತ್ರ ಬಿಡಿಸುವಾಗ ಮಕ್ಕಳಲ್ಲಿ ಪ್ರಕೃತಿ ಹಾಗೂ ಪ್ರಾಣಿ ಪಕ್ಷಿಗಳನ್ನು ಉಳಿಸಬೇಕು. ಗಿಡ ಮರಗಳನ್ನು ಬೆಳಸಬೇಕು ಎಂಬ ಪ್ರಜ್ಞೆ ಬರುತ್ತದೆ. ಇಂತಹ ಕಾರ್ಯಕ್ರಮಗಳು ಪರಿಸರ ಪ್ರಜ್ಞೆ ಬೆಳೆಸುತ್ತವೆ ಎಂದರು.
ಶಾಲೆ ಪ್ರಾಂಶುಪಾಲ ಬಂಧನಾ ಬ್ಯಾನರ್ಜಿ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ವಲಯ ಅರಣ್ಯಾಧಿಕಾರಿ ರಾಜಶೇಖರ ಲಮಾಣಿ, ಶಾಲೆ ಆಡಳಿತಾಧಿಕಾರಿ ಕೌಸರ್ ಪಟೇಲ, ಮಕ್ಕಳ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಜಗದೀಶ ಸಾಲಳ್ಳಿ, ಚಿತ್ರಕಲಾ ಶಿಕ್ಷಕರಾದ ಸಲೀಂ ಢಾಂಗೆ, ವ್ಹಿ.ಎಸ್ ಲಿಂಬಿಕಾಯಿ, ಶಮೀಮಾರಾ ದ್ರಾಕ್ಷಿ, ಎಂ.ಎಂ. ಹರಣಶಿಕಾರಿ, ಈರಣ್ಣ ಬಸರಕೋಡ, ಇಂತಿಯಾಜ ಸೇರಿ ಶಾಲೆ ಶಿಕ್ಷಕರು ಹಾಗೂ ಸಿಬ್ಬಂದಿ ಇದ್ದರು.
8ನೇ ತರಗತಿ ವಿಭಾಗದಲ್ಲಿ ರೋಣಿಹಾಳದ ಎಸ್ವೈಎಸ್ ಪ್ರೌಢಶಾಲೆ ವಿದ್ಯಾರ್ಥಿನಿ ಸೌಜನ್ಯ ಡೆಂಗಿ ಪ್ರಥಮ, ಕೊಲ್ಹಾರ ಸರ್ಕಾರಿ ಪ್ರೌಢಶಾಲೆ ಅಂಜನಾ ಬಾಟಿ ದ್ವಿತೀಯ, ರೋಣಿಹಾಳ ಎಸ್ವೈಎಸ್ ಪ್ರೌಢಶಾಲೆ ಮಲ್ಲಿಕಾರ್ಜುನ ಬಾಡಗಿ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.
ಅಭಿನಂದನೆಗಳು: