ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ಬನಹಟ್ಟಿಯ ಜನತಾ ಶಿಕ್ಷಣ ಸಂಘದ ಶ್ರೀತಮ್ಮಣ್ಣಪ್ಪ ಚಿಕ್ಕೋಡಿ ಕಲಾ, ವಾಣಿಜ್ಯ, ಬಿಬಿಎ, ಬಿಸಿಎ ಮತ್ತು ಸ್ನಾತಕೋತ್ತರ ಕೇಂದ್ರದ ವಿದ್ಯಾರ್ಥಿಗಳು, ಸಿಬ್ಬಂದಿ ಆಯೋಜಿಸಿದ್ದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿ, ನಮ್ಮ ಸಾಹಿತ್ಯ, ಸಂಸ್ಕೃತಿ, ಆಚಾರ-ವಿಚಾರಗಳಲ್ಲಿ ಕನ್ನಡವೇ ಅಡಗಿದೆ. ವೀರ ನಾಡಿನ ಸಂಜಾತರಾದ ನಾವೆಲ್ಲರೂ ಕನ್ನಡ ಬಳಸಿ ಬದುಕುವ, ಕೆಲಸ ಮಾಡುವ, ಗೌರವಿಸುವ ಸಂಸ್ಕಾರ ಬೆಳೆಸಿಕೊಳ್ಳಬೇಕಿದೆ ಎಂದರು. ಅತಿಥಿಯಾಗಿ ಆಗಮಿಸಿದ ನಿರ್ದೇಶಕ ಪಂಡಿತ ಹನಗಂಡಿ ಮಾತನಾಡಿ, ನಾಡು-ನುಡಿ, ಕನ್ನಡ ಸಂಸ್ಕೃತಿ ಮರೆತರೆ ನಮ್ಮ ಮೂಲತ್ವಕ್ಕೇ ಧಕ್ಕೆಯಾಗಿ ಕನ್ನಡತನ ಸಂಪೂರ್ಣ ನಶಿಸುತ್ತದೆ ಎಂದರು. ಕನ್ನಡ ವಿಭಾಗದ ಮುಖ್ಯಸ್ಥ ಸುರೇಶ ನಿಡೋಣಿ, ನಾಡು-ನುಡಿ, ಜಲ, ಸಂಸ್ಕೃತಿ, ಸಂಸ್ಕಾರ ಹಾಗೂ ಕನ್ನಡದ ಪ್ರಾಚೀನತೆಯ ಬಗ್ಗೆ ವಿವರಿಸಿದರು. ಪ್ರಾಚಾರ್ಯ ಡಾ.ಜಿ.ಆರ್.ಜುನ್ನಾಯ್ಕರ್ ಅಧ್ಯಕ್ಷತೆ ವಹಿಸಿದ್ದರು.ಡಾ.ಮನೋಹರ ಶಿರಹಟ್ಟಿ ಸ್ವಾಗತಿಸಿದರು. ವಿ.ವೈ.ಪಾಟೀಲ ವಂದಿಸಿದರು. ಸಮಾರಂಭದಲ್ಲಿ ಡಾ.ರೇಷ್ಮಾ ಗಜಾಕೋಶ, ಡಾ.ಬಿ.ಆರ್.ಕೆಂಗನಾಳ, ಡಾ.ಎಸ್.ಕೆ.ವರದಾಯಿ, ಜಿ.ಎಸ್.ಪಾಟೀಲ, ರಮೇಶ ಮಾಗೂರಿ, ವೆಂಕಟೇಶ ಕುಲಕರ್ಣಿ, ರತ್ನ ಪಾಟೀಲ, ಚೇತನ ಮೂಳೆಗಾಂವಿ, ಎಸ್.ಎಸ್.ಶಿಂಧೆ, ಶ್ವೇತಾ ಮಠದ, ಬಸವರಾಜ ತಳವಾರ, ಐ.ಜಿ.ಫಣಿಬಂಧ, ಶಿವು ಇಟ್ನಾಳ ಸೇರಿದಂತೆ ಎಲ್ಲ ವಿಭಾಗಗಳ ವಿದ್ಯಾರ್ಥಿಗಳು, ಸಿಬ್ಬಂದಿ ಪಾಲ್ಗೊಂಡಿದ್ದರು.ಪದ್ಮಾವತಿ ಶಾಲೆಯಲ್ಲಿ ನಾಡದೇವಿಗೆ ಪೂಜೆ:
ರಬಕವಿ-ಹೊಸೂರಿನ ಪದ್ಮಾವತಿ ಇಂಟರ್ನ್ಯಾಶನಲ್ ಶಾಲೆಯಲ್ಲಿ ೭೦ನೇ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ಕಸಾಪ ಅಧ್ಯಕ್ಷ ಮ.ಕೃ.ಮೇಗಾಡಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು, ಕನ್ನಡ ಭಾಷೆಯ ಇತಿಹಾಸ, ಸಂಸ್ಕೃತಿ, ಪರಂಪರೆ, ಸಾಹಿತ್ಯ ಕ್ಷೇತ್ರದಲ್ಲಿನ ಸಾಧನೆಗಳ ಬಗ್ಗೆ ವಿವರಿಸಿದರು. ಆಡಳಿತಾಧಿಕಾರಿ ಭಾರತಿ ತಾಳಿಕೋಟಿ, ಪ್ರಾಚಾರ್ಯರಾದ ಶ್ರೀಶೈಲ ಕುಂಬಾರ, ಬಸವರಾಜ ಕಲಾದಗಿ, ಸತೀಶ ಬೆಳಗಲಿ ವೇದಿಕೆಯಲ್ಲಿದ್ದು ನಾಡದೇವಿ ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಭಾಷಣ, ನೃತ್ಯ, ರಾಜ್ಯದ ಜಿಲ್ಲಾವಾರು ವೇಷಭೂಷಣವನ್ನು ಏರ್ಪಡಿಸಲಾಗಿತ್ತು. ಶಿವಾನಂದ ಕಾಮಶೆಟ್ಟಿ ಸ್ವಾಗತಿಸಿದರು. ಶಾಖಾಂಬರಿ ಜುಂಜಪ್ಪನವರ ನಿರೂಪಿಸಿದರು. ಸಿದ್ದಮ್ಮ ನಿಂಬರಗಿ ವಂದಿಸಿದರು.ತಾಲೂಕು ಆಡಳಿತದಿಂದ ರಾಜ್ಯೋತ್ಸವ: