ಗಂಗಾವತಿ: 79ನೇ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಅಂಗವಾಗಿ ಕನ್ನಡಪ್ರಭ ಹೋರಾಟಗಾರರ ಇತಿಹಾಸದ ಕಲ್ಯಾಣ ಉತ್ಸವ ಪುರವಣಿ ಹೊರತಂದಿರುವುದು ಪ್ರಶಂಸನೀಯ ಎಂದು ಶಾಸಕ ಗಾಲಿ ಜನಾರ್ದನ ರೆಡ್ಡಿ ಹೇಳಿದರು.
ಗಂಗಾವತಿ- ನವಲಿ ಸೇರಿದಂತೆ ಅಖಂಡ ಗಂಗಾವತಿ ತಾಲೂಕಿನಲ್ಲಿ ಬಹಳಷ್ಟು ಹೋರಾಟಗಾರರು ನಿಜಾಮರ ವಿರುದ್ಧ ದಂಗೆ ಎದ್ದು ಸೆರೆಮನೆವಾಸ ಅನುಭವಿಸಿದ್ದಾರೆ. ಗಂಗಾವತಿ ರಾಮಭಟ್ ಜೋಷಿ, ಡಾ. ಎಚ್.ಕೆ. ರಾಮರಾವ್, ಗೌಳಿ ಮಹಾದೇವಪ್ಪ, ವೆಂಕೋಬಾಚಾರ ಬೋವಿನಾಳ, ಅಯೋಧ್ಯಾ ರಾಮಚಾರ, ಗುರುರಾಜರಾವ್ ಬೆಳ್ಳುಬ್ಬಿ, ನರಸಿಂಹಚಾರ ನವಲಿ, ರಾಘವೇಂದ್ರರಾವ್ ಚೆಳ್ಳೂರು ಸೇರಿದಂತೆ ಅನೇಕ ಮಹನೀಯರು ಹೋರಾಟದ ಮುಂಚೂಣಿಯಲ್ಲಿದ್ದು, ರಜಾಕಾರರ ವಿರುದ್ಧ ಹೋರಾಟ ನಡೆಸಿದ್ದಾರೆ. ಅಂತಹ ಮಹನೀಯರ ಇತಿಹಾಸ ಇರುವ ಪುರವಣಿ ಮುಂದಿನ ಪೀಳಿಗೆಗೆ ಉಪಯುಕ್ತ ಎಂದರು.
ಪುರವಣಿ ಬಿಡುಗಡೆ ಸಂದರ್ಭದಲ್ಲಿ ತಹಸೀಲ್ದಾರ್ ವಸಂತಕುಮಾರಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಇಸ್ಮಾಯಿಲ್ ಖಾದ್ರಿ, ತಾಪಂ ಕಾರ್ಯನಿರ್ವಹಣಾಧಿಕಾರಿ ರಾಮರೆಡ್ಡಿ ಪಾಟೀಲ್, ಡಿವೈಎಸ್ಪಿ ಜಾಯಪ್ಪ ನ್ಯಾಮಗೌಡರ್, ಪ್ರಭಾರಿ ಕ್ಷೇತ್ರ ಶಿಕ್ಷಣಾಧಿಕಾರಿ ವೀರಭದ್ರಪ್ಪ ಗೊಂಡಬಾಳ, ಕನ್ನಡಪ್ರಭ ವರದಿಗಾರ ರಾಮಮೂರ್ತಿ ನವಲಿ, ಜಯಶ್ರೀ ಹಕ್ಕಂಡಿ ಉಪಸ್ಥಿತರಿದ್ದರು.ಕಲ್ಯಾಣ ಕರ್ನಾಟಕ ಉತ್ಸವಕ್ಕೆ ರಜೆ ಘೋಷಿಸಲಿ: ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಗೆ ಸರ್ಕಾರ ಘೋಷಣೆ ಮಾಡಲಿ ಎಂದು ಶಾಸಕ ಗಾಲಿ ಜನಾರ್ದನ ರೆಡ್ಡಿ ಹೇಳಿದರು.
ಪೊಲೀಸ್, ಸ್ಕೌಟ್ಸ್, ಎನ್ಸಿಸಿ, ವಿದ್ಯಾರ್ಥಿಗಳಿಂದ ಗೌರವ ವಂದನೆ ಸ್ವೀಕರಿಸಿದರು. ಆನಂತರ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.ತಹಸೀಲ್ದಾರ್ ವಸಂತಕುಮಾರಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಇಸ್ಮಾಯಿಲ್ ಖಾದ್ರಿ, ತಾಪಂ ಕಾರ್ಯನಿರ್ವಹಣಾಧಿಕಾರಿ ರಾಮರೆಡ್ಡಿ ಪಾಟೀಲ್, ಡಿವೈಎಸ್ಪಿ ಜಾಯಪ್ಪ ನ್ಯಾಮಗೌಡರ್, ಪ್ರಭಾರಿ ಕ್ಷೇತ್ರ ಶಿಕ್ಷಣಾಧಿಕಾರಿ ವೀರಭದ್ರಪ್ಪ ಗೊಂಡಬಾಳ ಉಪಸ್ಥಿತರಿದ್ದರು. ಜಯಶ್ರೀ ಹಕ್ಕಂಡಿ ಕಾರ್ಯಕ್ರಮ ನಿರೂಪಿಸಿದರು. ಬಿಇಒ ವೀರಭದ್ರಪ್ಪ ಗೊಂಡಬಾಳ ಸ್ವಾಗತಿಸಿದರು. ರಾಜಾಸಾಬ ಸಂಗಡಿಗರು ನಾಡಗೀತೆ, ವಂದೇ ಮಾತರಂ ಪ್ರಸ್ತುತ ಪಡಿಸಿದರು.