ಕನ್ನಡಪ್ರಭ ವಾರ್ತೆ ಬೆಳಗಾವಿ
ರಾಜಕಾರಣಿಗಳು ಮತ್ತು ಅಧಿಕಾರಿಗಳು ಭಾಷಣಕ್ಕೆ ಮಾತ್ರ ಸೀಮಿತವಾಗಿದ್ದು ವಲಸಿಗರೊಂದಿಗೆ ಶಾಮೀಲಾಗಿ ನಮ್ಮ ನಾಡು, ನುಡಿ, ಸಂಸ್ಕೃತಿಗಳ ಅಧೋಗತಿಗೆ ಇಳಿಸಿರವುದು ಶೋಚನೀಯ ಎಂದು ದೂರಿದರು ಅನವಶ್ಯಕವಾಗಿ ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ ಮತ್ತು ಕಾರ್ಯಕರ್ತರವನ್ನು ಬಂಧಿಸಿದ್ದಾರೆ , ಈ ಕೂಡಲೆ ಬೇಷರತ್ತಾಗಿ ಬಂಧ ಮುಕ್ತಗೊಳಿಸಬೇಕು ಎಂದು ಸರ್ಕಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕನ್ನಡ ನಾಮಫಲಕ ಬಳಸುವುದು ಕಡ್ಡಾಯ ಮಾಡಿ, ಯಾರು ನಾಮಫಲಕದಲ್ಲಿ ಅನ್ಯ ಭಾಷೆಗೆ ಹೆಚ್ಚು ಒತ್ತು ಕೊಡುತ್ತಾರೋ ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಅನವಶ್ಯಕವಾಗಿ ರಾಜ್ಯಾಧ್ಯಕ್ಷರನ್ನು ಮತ್ತು ಕಾರ್ಯಕರ್ತರವನ್ನು ಬಂಧಿಸಿರುವುದನ್ನು ಈ ಕೂಡಲೆ ಬೇಷರತ್ತಾಗಿ ಬಂಧನ ಮುಕ್ತಗೊಳಿಸಬೇಕು..ಫೆ.28 ರ ಒಳಗೆ ಎಲ್ಲ ನಾಮಫಲಕಗಳು ಕನ್ನಡದಲಿ ಇರಬೇಕು ,ಇಲ್ಲದಿದ್ದರೆ, ಮುಂದಿನ ದಿನಗಳಲ್ಲಿ ಸಂಘಟನೆಯಿಂದ ತೀವ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.ಕರವೇ ಶಿವರಾಮೇಗೌಡ ಕಾರ್ಯಕರ್ತರು ,ಕನ್ನಡ ಪರ ಹೋರಾಟಗಾರರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.