ಮೈಸೂರು: ನಗರದ ಜೆಸಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ 26ನೇ ವರ್ಷದ ಕಾರ್ಗಿಲ್ ವಿಜಯ ದಿನವನ್ನು ಮಾಜಿ ಸೈನಿಕರಿಂದ ಒಂದು ವಿಶಿಷ್ಟ ರೀತಿಯಲ್ಲಿ ಅರ್ಥ ಪೂರ್ಣವಾಗಿ ಆಚರಿಸಲಾಯಿತು.
ಮೊದಲಿಗೆ ಕಾಲೇಜಿನ ಎನ್ಸಿಸಿ ತಂಡ ಗೌರವಿತವಾಗಿ ಎಲ್ಲಾ ಮಾಜಿ ಸೈನಿಕರಗಳನ್ನು ಬರಮಾಡಿಕೊಂಡರು. ಹುತಾತ್ಮ ಕಾರ್ಗಿಲ್ ಮಾಣಿಕ್ಯರಾದ ಕ್ಯಾಪ್ಟನ್ ವಿಕ್ರಂ ಬತ್ರ, ಲೆಫ್ಟ್ ನೆಟ್ ಮನೋಜ್ ಪಾಂಡೆ ಮತ್ತು ಕ್ಯಾಪ್ಟನ್ ಸೌರಭ ಕಾಲಿಯಾ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.
ಯುವ ಬ್ರಿಗೇಡ್ ನ ನಿತಿನ್ ಪರದೆಯ ಮೇಲೆ ಕಾರ್ಗಿಲ್ ಚಿತ್ರಣವನ್ನು ಪ್ರದರ್ಶಿಸಿದರು. ಮಾಜಿ ಸೈನಿಕ ವಿ. ಮಹೇಶ್, ಪ್ರಾಂಶುಪಾಲ ಭಕ್ತವತ್ಸಲ ಮಾತನಾಡಿದರು.ಮಾಜಿ ಸೈನಿಕರಿಂದ ಎಲ್ಲ ವಿದ್ಯಾರ್ಥಿಗಳಿಗೆ ವಿಜಯದ ಸಂಕೇತವಾಗಿ ಖುಷಿಯಿಂದ ಸಿಹಿ ಹಂಚಿ, ಸಂಭ್ರಮಿಸಿದರು.