ಕಾರ್ಗಿಲ್ ಯುದ್ಧ ಸೈನಿಕರ ಶೌರ್ಯ, ತ್ಯಾಗದ ಪ್ರತೀಕ

KannadaprabhaNewsNetwork |  
Published : Jul 27, 2025, 12:02 AM IST
ಮ | Kannada Prabha

ಸಾರಾಂಶ

ದೇಶದೊಳಗೆ ನುಗ್ಗಿ ಆಕ್ರಮಿಸಿಕೊಂಡ ಶಿಖರಗಳನ್ನು ಮರಳಿ ವಶಪಡಿಸಿಕೊಳ್ಳುವಲ್ಲಿ ಕೊನೆಗೊಂಡಿತು

ಬ್ಯಾಡಗಿ: ಕಾರ್ಗಿಲ್ ಯುದ್ಧ ಸೀಮಿತ ಸಂಘರ್ಷವಾಗಿದ್ದರೂ ರಾಷ್ಟ್ರದ ಸ್ಥಿತಿ ಸ್ಥಾಪಕತ್ವ ಮತ್ತು ಸಂಘರ್ಷದ ಸಮಯದಲ್ಲಿ ಪ್ರದರ್ಶಿಸಲಾದ ಶೌರ್ಯ ನೆನಪಿಸುತ್ತಿದ್ದು, ಎರಡು ಪರಮಾಣು ಶಸ್ತ್ರಸಜ್ಜಿತ ರಾಷ್ಟ್ರಗಳ ನಡುವಿನ ಸಮರವಾಗಿದ್ದರಿಂದ ವಿಶ್ವವೇ ಯುದ್ದದ ವಿಜಯವನ್ನು ಎದುರು ನೋಡುತ್ತಿದ್ದವು ಎಂದು ರೋಟರಿ ಸಂಸ್ಥೆ ಅಧ್ಯಕ್ಷ ಅನಿಲಕುಮಾರ ಬೊಡ್ಡಪಾಟಿ ಅಭಿಪ್ರಾಯಪಟ್ಟರು.

ಪಟ್ಟಣದ ತಾಲೂಕಾಸ್ಪತ್ರೆ ಆವರಣದಲ್ಲಿ ಆಯೋಜಿಸಲಾಗಿದ್ದು ಕಾರ್ಗಿಲ್ ವಿಜಯ ದಿವಸ ಕಾರ್ಯಕ್ರಮದಲ್ಲಿ ಮಾಜಿ ಸೈನಿಕರಿಗೆ ಸನ್ಮಾನಿಸಿ ಮಾತನಾಡಿದ ಅವರು, 1999 ರ ಕಾರ್ಗಿಲ್ ಯುದ್ಧವು ಭಾರತಕ್ಕೆ ಒಂದು ಯಶಸ್ಸಿನ ಕಥೆಯಾಗಿದ್ದು, ದೇಶದೊಳಗೆ ನುಗ್ಗಿ ಆಕ್ರಮಿಸಿಕೊಂಡ ಶಿಖರಗಳನ್ನು ಮರಳಿ ವಶಪಡಿಸಿಕೊಳ್ಳುವಲ್ಲಿ ಕೊನೆಗೊಂಡಿತು, ಭಾರತೀಯ ಮಿಲಿಟರಿ ಸಶಸ್ತ್ರ ಪಡೆಗಳು ಆಪರೇಷನ್ ವಿಜಯ್ ಮೂಲಕ, ಟೋಲೋಲಿಂಗ್, ಟೈಗರ್ ಹಿಲ್ ಮತ್ತು ಬಟಾಲಿಕ್ ಇನ್ನಿತರ ಪ್ರದೇಶಗಳನ್ನು ಒಂದಿಂಚೂ ಬಿಡದಂತೆ ಮರಳಿ ಪಡೆದವು, ಭಾರತೀಯ ಸೈನಿಕರ ಶೌರ್ಯ ಮತ್ತು ತ್ಯಾಗದ ಮೂಲಕ ಸಾಧಿಸಿದ ಸದರಿ ವಿಜಯವನ್ನು ಜು.26 ರಂದು ಕಾರ್ಗಿಲ್ ವಿಜಯ ದಿವಸ್ ಎಂದು ಸ್ಮರಿಸಲಾಗುತ್ತಿದೆ ಎಂದರು.

ಉಪ್ಪಾರ ಮಾತನಾಡಿ, ಪಾಕಿಸ್ತಾನಿ ಸೈನಿಕರು ಮತ್ತು ಉಗ್ರಗಾಮಿಗಳು ಜಮ್ಮು ಮತ್ತು ಕಾಶ್ಮೀರದ ಕಾರ್ಗಿಲ್ ವಲಯದಲ್ಲಿ ನಿಯಂತ್ರಣ ರೇಖೆ (ಎಲ್‌ಒಸಿ) ಯುದ್ದಕ್ಕೂ ಭಾರತೀಯ ಪ್ರದೇಶಕ್ಕೆ ನುಸುಳಿದರು, ಶ್ರೀನಗರ-ಲೇಹ್ ಹೆದ್ದಾರಿ ಮಾರ್ಗ ಕಡಿತಗೊಳಿಸುವುದು ಇವರ ಉದ್ದೇಶವಾಗಿತ್ತು, ಆದರೆ ಆಪರೇಷನ್ ವಿಜಯ ಮೂಲಕ ಆಕ್ರಮಿತ ಶಿಖರಗಳ ಮೇಲೆ ದಾಳಿ ನಡೆಸುವ ಮೂಲಕ ಹಿಡಿತ ಸಾಧಿಸಿತು. ಪರ್ವತ ಪ್ರದೇಶದಲ್ಲಿ ನಡೆಸಿದ ಯುದ್ಧವು ಅತ್ಯಂತ ಸವಾಲಿನ ಕಠಿಣ ಪರಿಸ್ಥಿತಿ ನಮ್ಮ ಸೈನಿಕರು ಎದುರಿಸಬೇಕಾಯಿತು ಎಂದರು.

557 ಸೈನಿಕರು ಅಮರ:

ಮಾಜಿ ಸೈನಿಕ ಮಹದೇವಪ್ಪ ಬಣಕಾರ ಮಾತನಾಡಿ, ಕಾರ್ಗಿಲ್ ವಿಜಯ ಸುಮ್ಮನೆ ಬಂದಿದ್ದಲ್ಲ, ಬದಲಾಗಿ ನಮ್ಮ ಸೈನಿಕರು 3 ತಿಂಗಳ ಕಾಲ ನಿರಂತರ ಹೋರಾಟ ಮಾಡಿದ್ದಲ್ಲದೇ ಒಟ್ಟು 527 ಸೈನಿಕರ ಬಲಿದಾನದಿಂದ ಬಂದಿದೆ, ನೂರಾರು ಸೈನಿಕರು ಇಂದಿಗೂ ಶಾಶ್ವತ ಅಂಗವಿಕಲರಾಗಿದ್ದಾರೆ, ಕ್ಯಾಪ್ಟನ್ ವಿಕ್ರಮ್ ಭಾತ್ರಾ ಮತ್ತು ಲೆಫ್ಟಿನೆಂಟ್ ಮನೋಜಕುಮಾರ ಪಾಂಡೆ ತ್ಯಾಗದಿಂದ ಯುದ್ಧ ಗೆಲ್ಲಲು ಸಾಧ್ಯವಾಯಿತು ಎಂದರು.

ಈ ವೇಳೆ ರೋಟರಿ ಸದಸ್ಯ ಪವಾಡೆಪ್ಪ ಆಚನೂರ, ಮಾಲತೇಶ ಅರಳಿಮಟ್ಟಿ, ಶಿವರಾಜ ಚೂರಿ, ವಿಶ್ವನಾಥ ಅಂಕಲ ಕೋಟಿ, ಪರಶುರಾಮ ಮೇಲಗಿರಿ, ಶ್ರೀನಿವಾಸ ಅಗಡಿ, ಪ್ರವೀಣ ಮಾಳೇನಹಳ್ಳಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''