ಕರ್ನಾಟಕ ಓಲಿಂಪಿಕ್ಸ್ ಅಥ್ಲೆಟಿಕ್ಸ್: ದ.ಕ., ಬೆಳಗಾವಿಗೆ ಅವಳಿ ಚಿನ್ನ

KannadaprabhaNewsNetwork |  
Published : Jan 24, 2025, 12:45 AM IST
ಫೋಟೋಸ್‌ | Kannada Prabha

ಸಾರಾಂಶ

ದಕ್ಷಿಣ ಕನ್ನಡ ಮತ್ತು ಬೆಳಗಾವಿ ಜಿಲ್ಲೆಗಳ ಅಥ್ಲೇಟ್‌ಗಳು ತಲಾ 2 ಚಿನ್ನದ ಪದಕಗಳನ್ನು ಗೆದ್ದುಕೊಂಡಿದ್ದಾರೆ. ಬೆಂಗಳೂರು, ಉಡುಪಿ, ಧಾರವಾಡ, ಶಿವಮೊಗ್ಗ, ಹಾಸನ, ಮೈಸೂರು ಜಿಲ್ಲೆಗಳ ಅಥ್ಲೀಟ್‌ಗಳು ಒಂದೊಂದು ಚಿನ್ನದ ಪದಕ ಕೊರಳಿಗೇರಿಸಿಕೊಂಡಿದ್ದಾರೆ.

ಕನ್ನಡಪ್ರಭ ವಾರ್ತೆ ಉಡುಪಿ

ಇಲ್ಲಿನ ಮಹಾತ್ಮಾಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕರ್ನಾಟಕ ಕ್ರೀಡಾಕೂಟ - 2026 (ಕರ್ನಾಟಕ ಓಲಿಂಪಿಕ್ಸ್)ನ ಅಥ್ಲೆಟಿಕ್ಸ್ ಸ್ಪರ್ಧೆಗಳಲ್ಲಿ ದಕ್ಷಿಣ ಕನ್ನಡ ಮತ್ತು ಬೆಳಗಾವಿ ಜಿಲ್ಲೆಗಳ ಅಥ್ಲೇಟ್‌ಗಳು ತಲಾ 2 ಚಿನ್ನದ ಪದಕಗಳನ್ನು ಗೆದ್ದುಕೊಂಡಿದ್ದಾರೆ.

ಉಳಿದಂತೆ ಬೆಂಗಳೂರು, ಉಡುಪಿ, ಧಾರವಾಡ, ಶಿವಮೊಗ್ಗ, ಹಾಸನ, ಮೈಸೂರು ಜಿಲ್ಲೆಗಳ ಅಥ್ಲೀಟ್‌ಗಳು ತಲಾ ಒಂದೊಂದು ಚಿನ್ನದ ಪದಕಗಳನ್ನು ಕೊರಳಿಗೇರಿಸಿಕೊಂಡರು.

ಫಲಿತಾಂಶ ಹೀಗಿದೆ:

ಪುರುಷರ ವಿಭಾಗ:

400 ಮೀ. ಓಟ: ಚಿನ್ನ - ಶ್ರೀನಾಥ್‌ (ಬೆಂಗಳೂರು), ಬೆಳ್ಳಿ - ದಯಾನಂದ್ (ದಕ), ಕಂಚು - ಭುವನ್ ಪೂಜಾರಿ (ಬೆಂಗಳೂರು)

3000 ಮೀ. ಸ್ಟಿಪಲ್ ಚೇಸ್: ಚಿನ್ನ - ನಾಗರಾಜ ವೆಂಕಟೇಶ್‌ ದೀವಟೆ (ಧಾರವಾಡ), ಬೆಳ್ಳಿ - ಪಟಪ್ಪ ಚಂದ್ರಪ್ಪ (ಧಾರವಾಡ), ಕಂಚು - ಭೀಮ ಶಂಕರ್‌ (ಬೆಂಗಳೂರು)

1500 ಮೀ. ಓಟ: ಚಿನ್ನ - ವೈಭವ್‌ ಪಾಟೀಲ್‌ (ಬೆಳಗಾವಿ), ಬೆಳ್ಳಿ - ಕಮಲ್‌ ಎಸ್‌. (ಬೆಂಗಳೂರು), ಕಂಚು - ಕಲ್ಯಾಣ್‌ ಜೆ.ಆರ್. (ಬೆಂಗಳೂರು)

ಟ್ರಿಪಲ್‌ ಜಂಪ್‌: ಚಿನ್ನ - ಯಶಸ್‌ ಆರ್. ಗೌಡ (ದಕ), ಬೆಳ್ಳಿ - ರಾಧಾಕೃಷ್ಣ ಆರ್ (ಬೆಂಗಳೂರು), ಕಂಚು - ಅಬ್ದುಲ್‌ ಮುನಾಫ್‌ (ಬೆಂಗಳೂರು)

ಮಹಿಳೆಯರ ವಿಭಾಗ

400 ಮೀ. ಓಟ: ಚಿನ್ನ - ಮೇಘ (ಬೆಳಗಾವಿ), ಬೆಳ್ಳಿ - ಅಭಿಗ್ನ್ಯ ಪಿ. (ಶಿವಮೊಗ್ಗ), ಕಂಚು - ಎನ್.ಸಿ. ಮಾನಸ (ಬೆಂಗಳೂರು)

3000 ಮೀ. ಸ್ಟಿಪಲ್ ಚೇಸ್: ಚಿನ್ನ - ಎಚ್.ಇ. ದೀಕ್ಷಾ (ಶಿವಮೊಗ್ಗ), ಬೆಳ್ಳಿ - ನಕೋಶ ಮನ್ಗಾಂಕರ್ (ಬೆಳಗಾವಿ), ಕಂಚು - ಸ್ಪಂದನ ಪಿ. (ದಕ)

1500 ಮೀ. ಓಟ: ಚಿನ್ನ - ಸ್ಮಿತಾ ಡಿ. ಆರ್. (ಹಾಸನ), ಬೆಳ‍್ಳಿ - ರೇಖಾ ಬಸಪ್ಪ (ದಕ), ಕಂಚು - ಶಿಲ್ಪಾ (ಬೆಳಗಾವಿ)

ಟ್ರಿಪಲ್ ಜಂಪ್‌: ಚಿನ್ನ - ಪವಿತ್ರ ಜಿ. (ಉಡುಪಿ), ಬೆಳ್ಳಿ - ನಿತ್ಯಶ್ರೀ (ಬೆಂಗಳೂರು), ಕಂಚು - ಸ್ಮಿತಾ ಪ್ರಮೋದ್‌ ಕಾಕತ್ಕರ್ (ಬೆಳಗಾವಿ)

ಡಿಸ್ಕಸ್‌ ತ್ರೋ: ಚಿನ್ನ - ಸುಷ್ಮಾ ಬಿ. (ಮೈಸೂರು), ಬೆಳ್ಳಿ - ಸುಶಮ ಎಂ.ಎನ್. (ಮೈಸೂರು), ಕಂಚು - ಐಶ್ವರ್ಯ ಮಾರುತಿ ಬೆಂಡಿ (ದಕ)

ಹ್ಯಾಮರ್ ತ್ರೋ: ಚಿನ್ನ - ಅಮ್ರಿನ್‌ (ದಕ), ಬೆಳ್ಳಿ - ನಿಶೇಲ್‌ ಡೆಲ್ಫಿನ ಡಿಸೋಜ (ದಕ), ಕಂಚು - ಸ್ಪ್ರುಹ ನಾಯ್ಕ್ (ಬೆಳಗಾವಿ)

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನೀರಿನ ಬಿಲ್‌ ಬಾಕಿದಾರರಿಗೆ ಶುಭ ಸುದ್ದಿ : ಬಡ್ಡಿ, ದಂಡ ಪೂರ್ಣ ಮನ್ನಾ।
ಡ್ರಗ್ಸ್‌ ದಂಧೆಯಲ್ಲಿ ಕಾಂಗ್ರೆಸ್‌ ನಿಕಟವರ್ತಿಗಳ ಕೈವಾಡ: ಶಾಸಕ ಅಶ್ವತ್ಥನಾರಾಯಣ