ಕನ್ನಡಪ್ರಭ ವಾರ್ತೆ ಮೈಸೂರು
ನಗರದ ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗೌರವ ಡಾಕ್ಟರೇಟ್ ಪದವಿ ಪ್ರದಾನ, ವಿಶೇಷ ಸಂಗೀತ ಪರೀಕ್ಷೆಗಳ ಪ್ರಮಾಣ ಪತ್ರ ಪ್ರದಾನ ಹಾಗೂ ಬೆಂಗಳೂರಿನ ಡೋಲು ನಾದಸ್ವರ ಕೇಂದ್ರದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಣಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಭಾರತೀಯ ಸಂಸ್ಕೃತಿಯ ವೈಭವ ಮತ್ತು ಕಲಾ ಪರಂಪರೆಯ ಮಹತ್ವ ಉಲ್ಲೇಖಿಸಿ, ಕಲೆಯನ್ನು ಸಂರಕ್ಷಿಸುವುದು, ಸಮೃದ್ಧಿಗೊಳಿಸುವುದು ಹಾಗೂ ಜನಸಾಮಾನ್ಯರಿಗೂ ತಲುಪಿಸುವುದು ಅತ್ಯವಶ್ಯಕ ಎಂದು ಅವರು ಹೇಳಿದರು. ಮುಖ್ಯಅತಿಥಿಯಾಗಿ ಕರ್ನಾಟಕ ರಾಜ್ಯ ಮುಕ್ತ ವಿವಿಯ ಪ್ರೊ. ಶರಣಪ್ಪ ವಿ. ಹಲ್ಸೆ ಭಾಗವಹಿಸಿ ಮಾತನಾಡಿ, ಕಲೆಯು ಪ್ರತಿದಿನದ ಜೀವನದಲ್ಲಿ ನಿರ್ವಹಿಸುವ ಪ್ರಮುಖ ಪಾತ್ರವನ್ನು ಪ್ರಸ್ತಾಪಿಸಿದರು. ಕರ್ನಾಟಕ ಮತ್ತುಅದಕ್ಕೂ ಹೊರತಾಗಿ ಕಲೆಯ ಮಹತ್ವವನ್ನು ಹಬ್ಬಿಸಲು ವಿಶ್ವವಿದ್ಯಾಲಯ ನೀಡುತ್ತಿರುವ ಅಮೂಲ್ಯ ಸೇವೆಯನ್ನು ಪ್ರಶಂಸಿಸಿದರು.
ವಿಶ್ವವಿದ್ಯಾಲಯದಲ್ಲಿ ನಡೆಸಿದ ಜೂನಿಯರ್, ಸೀನಿಯರ್ ಮತ್ತು ವಿದ್ವತ್ ಪರೀಕ್ಷೆಗಳಲ್ಲಿ ಭರತನಾಟ್ಯ, ಕಥಕ್, ಕುಚಿಪುಡಿ, ಹಿಂದೂಸ್ಥಾನಿ ಸಂಗೀತ (ಸ್ವರ ಮತ್ತು ವಾದ್ಯ) ಮತ್ತು ಕರ್ನಾಟಕ ಸಂಗೀತ (ಸ್ವರ ಮತ್ತು ವಾದ್ಯ) ವಿಭಾಗಗಳಲ್ಲಿ ಶ್ರೇಯಾಂಕಿತರಾದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು. ವಿಶ್ವವಿದ್ಯಾಲಯದ ಕುಲಪತಿ ಪ್ರೊ. ನಾಗೇಶ್ ವಿ. ಬೆಟ್ಟಕೋಟೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಪರೀಕ್ಷಾಂಗ ಕುಲಸಚಿವ ಡಾ.ಎಂ.ಜಿ. ಮಂಜುನಾಥ ಇದ್ದರು.