2027ಕ್ಕೆ ಕರ್ನಾಟಕ ಉತ್ಸವ: ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆ

KannadaprabhaNewsNetwork |  
Published : Feb 03, 2026, 01:30 AM IST
ಕೆ ಕೆ ಪಿ ಸುದ್ದಿ 05: ಡಿ ಸಿ ಎಂ ಡಿ ಕೆ ಶಿ ಮೇಕೆದಾಟು ಯೋಜನೆ ಬಗ್ಗೆ ಮಾತನಾಡಿದರು.  | Kannada Prabha

ಸಾರಾಂಶ

ತಾಲೂಕಿನ ಜನರ ಜೊತೆಗೆ ಬೆಂಗಳೂರು ಸೇರಿ ಐದಾರು ಜಿಲ್ಲೆ ಜನ ಮೇಕೆದಾಟು ಪಾದಯಾತ್ರೆಯಲ್ಲಿ‌ ನಮ್ಮ ಜೊತೆ ಹೆಜ್ಜೆ ಹಾಕಿ, ‘ನಮ್ಮ ನೀರು ನಮ್ಮ ಹಕ್ಕು’ ಎಂದು ಪಾದಯಾತ್ರೆ ಮಾಡಿದ್ದೀರಿ, ನ್ಯಾಯಾಲಯ ಮೇಕೆದಾಟಿಗೆ ಕೇಂದ್ರ ಸರ್ಕಾರವು ಅನುಮತಿ ನೀಡಬೇಕೆಂದು ತೀರ್ಮಾನ ಕೊಟ್ಟಿದೆ,

ಕನ್ನಡಪ್ರಭ ವಾರ್ತೆ ಕನಕಪುರ

ಸುಮಾರು ಜನ‌ ಸಚಿವರು ಪೋನ್ ಮಾಡಿ ಕನಕೋತ್ಸವ ಮಾಡುತ್ತಿದ್ದೀಯೋ ಅಥವಾ ಕರ್ನಾಟಕ ಉತ್ಸವ ಮಾಡುತ್ತಿದ್ದೀಯೋ ಎಂದು ಕೇಳಿದ್ದು, 2027ಕ್ಕೆ ಕನಕಪುರದಲ್ಲಿ ಕರ್ನಾಟಕ ಉತ್ಸವವನ್ನು ಅದ್ಧೂರಿಯಾಗಿ ಮಾಡೋಣ ಎಂದು ಡಿಸಿಎಂ ಡಿಕೆಶಿ ಹೇಳಿದರು.

ಭಾನುವಾರ ಸಂಜೆ ನಡೆದ ಕನಕೋತ್ಸವದ ಸಮಾರೋಪದಲ್ಲಿ ಭಾಗಿಯಾಗಿ ಮಾತನಾಡಿ, ತಾಲೂಕಿನ ಜನರ ಜೊತೆಗೆ ಬೆಂಗಳೂರು ಸೇರಿ ಐದಾರು ಜಿಲ್ಲೆ ಜನ ಮೇಕೆದಾಟು ಪಾದಯಾತ್ರೆಯಲ್ಲಿ‌ ನಮ್ಮ ಜೊತೆ ಹೆಜ್ಜೆ ಹಾಕಿ, ‘ನಮ್ಮ ನೀರು ನಮ್ಮ ಹಕ್ಕು’ ಎಂದು ಪಾದಯಾತ್ರೆ ಮಾಡಿದ್ದೀರಿ, ನ್ಯಾಯಾಲಯ ಮೇಕೆದಾಟಿಗೆ ಕೇಂದ್ರ ಸರ್ಕಾರವು ಅನುಮತಿ ನೀಡಬೇಕೆಂದು ತೀರ್ಮಾನ ಕೊಟ್ಟಿದೆ, ನಿಮ್ಮ‌ ಹೋರಾಟಕ್ಕೆ ನ್ಯಾಯ ಸಿಕ್ಕಿದೆ, ನಿಮ್ಮ ಮನೆಯ ಮಗನ‌ ಕೈಯಲ್ಲೇ ಆ ಯೋಜನೆಗೆ ಪೂಜೆ ಮಾಡುವ ಭಾಗ್ಯ ಸಿಗುತ್ತದೆ ಎಂದರು.

ಜತೆಗೆ ಸದ್ಯದಲ್ಲೇ ಮೆಡಿಕಲ್ ಕಾಲೇಜಿಗೂ ಭೂಮಿ ಪೂಜೆ ಮಾಡುತ್ತೇನೆ, ನಮ್ಮ ತಾಲೂಕಿನ ಜನ ಯಾರು ಕೂಡ ಬೆಂಗಳೂರು ಆಸ್ಪತ್ರೆಗೆ ಹೋಗಿ ಹಣ ಖರ್ಚು ಮಾಡಬಾರದು ಎಂಬುದು ನನ್ನ ಉದ್ದೇಶವಾಗಿದ್ದು, ಕೆಲ ಆ್ಯಂಬುಲೆನ್ಸ್ ಡ್ರೈವರ್ ಗಳು ಹೊಂದಾಣಿಕೆ ಮಾಡಿಕೊಂಡು ರೋಗಿಗಳನ್ನು ದೊಡ್ಡ ದೊಡ್ಡ ಆಸ್ಪತ್ರೆಗೆ ಕಳಿಸುತ್ತಿದ್ದು, ಅದಾಗಬಾರದು. ತಾಲೂಕಿನಲ್ಲಿ ಮೆಡಿಕಲ್ ಕಾಲೇಜು ನಿರ್ಮಿಸಬೇಕು ಎಂಬುದು ನನ್ನ ಕೊನೆಯ ಆಸೆ ಎಂದು ಡಿಕೆ ಶಿವಕುಮಾರ್ ಹೇಳಿದರು.

----------

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೃಹಲಕ್ಷ್ಮೀಯರಿಗೆ ಗುಡ್ ನ್ಯೂಸ್ ಕೊಟ್ರು ಸಚಿವೆ ಲಕ್ಷ್ಮೀ
ಸಿ.ಜೆ.ರಾಯ್‌ ಕೇಸ್‌ : ಸಚಿವೆ ನಿರ್ಮಲಾಗೆ ಕೇರಳ ಸಿಎಂ ಪತ್ರ