ಮಸೀದಿಯಲ್ಲಿ ಸೌಹಾರ್ದತೆ ಮೆರೆದ ಕಾರ್ತಿಕೋತ್ಸವ

KannadaprabhaNewsNetwork |  
Published : Nov 16, 2025, 02:30 AM IST
ಗದಗ-ಬೆಟಗೇರಿಯ ಲಾಲ್ ಬಾಷಾ, ಹುಸೇನ್ ಬಾಷಾ ಮಸೀದಿಯಲ್ಲಿ ಹಿಂದೂ-ಮುಸ್ಲೀಂ ಸಮಾಜ ಬಾಂಧವರು ಒಟ್ಟಾಗಿ ಮಸೀದಿಯಲ್ಲಿ ಗುರುವಾರ ಸಂಜೆ ಕಾರ್ತಿಕೋತ್ಸವವನ್ನು ಆಚರಿಸಿದರು. | Kannada Prabha

ಸಾರಾಂಶ

ಬೆಟಗೇರಿಯ ರಜಪೂತ ಓಣಿಯ ಲಾಲ್ ಬಾಷಾ, ಹುಸೇನ್ ಬಾಷಾ ಮಸೀದಿಯಲ್ಲಿ ಹಿಂದೂ-ಮುಸ್ಲಿಂ ಸಮಾಜ ಬಾಂಧವರು ಒಟ್ಟಾಗಿ ಗುರುವಾರ ಸಂಜೆ ಕಾರ್ತಿಕೋತ್ಸವ ಆಚರಿಸಿದ್ದು, ಸೌಹಾರ್ದಕ್ಕೆ ಮಾದರಿಯಾಗಿದೆ.

ಮಹೇಶ ಛಬ್ಬಿ

ಗದಗ: ಬೆಟಗೇರಿಯ ರಜಪೂತ ಓಣಿಯ ಲಾಲ್ ಬಾಷಾ, ಹುಸೇನ್ ಬಾಷಾ ಮಸೀದಿಯಲ್ಲಿ ಹಿಂದೂ-ಮುಸ್ಲಿಂ ಸಮಾಜ ಬಾಂಧವರು ಒಟ್ಟಾಗಿ ಗುರುವಾರ ಸಂಜೆ ಕಾರ್ತಿಕೋತ್ಸವ ಆಚರಿಸಿದ್ದು, ಸೌಹಾರ್ದಕ್ಕೆ ಮಾದರಿಯಾಗಿದೆ.

ಜಾತಿ, ಧರ್ಮಗಳ ನಡುವೆ ಭಿನ್ನ ವಿಭಿನ್ನ ಆಚರಣೆ, ಸಂಸ್ಕೃತಿ, ಸಂಪ್ರದಾಯಗಳನ್ನು ಕಾಣುತ್ತೇವೆ. ಆದರೆ ಜಾತಿ, ಧರ್ಮದ ಹೆಸರಿನಲ್ಲಿ ಇಂದಿನ ದಿನಮಾನಗಳಲ್ಲಿ ಜಗಳ, ಕಲಹ, ತಂಟೆ-ತಕರಾರು ಸಾಮಾನ್ಯವಾಗಿದೆ. ಅದನ್ನೆಲ್ಲ ಮೀರಿ ಜಾತಿ, ಧರ್ಮ ಮರೆತು, ನಾವೆಲ್ಲ ಒಂದೇ ಎಂದು ಸಾರಿ ಹೇಳಲು ಕೆಲವೊಂದಿಷ್ಟು ಉದಾಹರಣೆಗಳು ಸಿಗುತ್ತವೆ. ಅಂತಹ ಒಂದು ವಿಶೇಷ ಕಾರ್ಯವನ್ನು ಬೆಟಗೇರಿಯ ರಜಪೂತ ಓಣಿಯ ಲಾಲ್ ಬಾಷಾ, ಹುಸೇನ್ ಬಾಷಾ ಮಸೀದಿಯಲ್ಲಿ ಮಾಡಲಾಗಿದೆ. ಇಲ್ಲಿ ಹಿಂದೂ-ಮುಸ್ಲಿಂ ಸಮಾಜದವರು ಒಟ್ಟಾಗಿ ಕಾರ್ತಿಕೋತ್ಸವ ಆಚರಿಸಿದ್ದಾರೆ. ಹಿಂದೂ ದೇವಾಲಯಗಳಲ್ಲಿ ಕಾರ್ತಿಕೋತ್ಸವದಲ್ಲಿ ನಡೆಯುವ ಎಲ್ಲ ಸಂಪ್ರದಾಯ-ಆಚರಣೆಗಳನ್ನು ಪಾಲಿಸಲಾಗಿದೆ.

ನೂರಾರು ವರ್ಷಗಳಿಂದ ಈ ಮಸೀದಿಯಲ್ಲಿ ಹಿಂದೂ-ಮುಸ್ಲಿಮರು ಸೇರಿ ಶ್ರದ್ಧಾ-ಭಕ್ತಿಯಿಂದ ಕಾರ್ತಿಕೋತ್ಸವ ಆಚರಿಸುತ್ತ ಬಂದಿದ್ದಾರೆ. ಅದರಂತೆ ಈ ವರ್ಷವೂ ಸಂಭ್ರಮದಿಂದ ಕಾರ್ಯಕ್ರಮ ನಡೆದಿದ್ದು, ನಾವೆಲ್ಲ ಒಂದೇ ಎಂಬ ಸಂದೇಶ ಸಾರಿದ್ದಾರೆ.

ಮಸೀದಿಗೆ ಅಲಂಕಾರ: ಕಾರ್ತಿಕೋತ್ಸವಕ್ಕೂ ಮುನ್ನ ಮಸೀದಿಯನ್ನು ಹಿಂದೂ-ಮುಸ್ಲಿಮರು ಸೇರಿ ಶುಚಿಗೊಳಿಸಿ, ಮಸೀದಿಯನ್ನು ಹೂವು, ತಳಿರು ತೋರಣಗಳಿಂದ ಅಲಂಕೃತಗೊಳಿಸಿದ್ದಾರೆ. ಆವರಣದಲ್ಲಿ ಮಹಿಳೆಯರು ರಂಗೋಲಿ ಹಾಕಿದ್ದಾರೆ. ಮಸೀದಿಯಲ್ಲಿ ದೀಪ ಹಚ್ಚಿ ಸಂಭ್ರಮಿಸಿದ್ದಾರೆ. ಈ ದೃಶ್ಯ ನೋಡುವುದೇ ಒಂದು ಖುಷಿ ಎಂದು ಸ್ಥಳೀಯರು ಹೇಳುತ್ತಾರೆ.

ದೂರದ ಊರುಗಳಿಂದ ಬರುವ ಭಕ್ತರು: ಲಾಲ್ ಬಾಷಾ, ಹುಸೇನ್ ಬಾಷಾ ಮಸೀದಿಗೆ ಜಿಲ್ಲೆ, ಅಕ್ಕ-ಪಕ್ಕದ ಜಿಲ್ಲೆ, ಅಷ್ಟೇ ಅಲ್ಲದೆ ಬೇರೆ, ಬೇರೆ ರಾಜ್ಯಗಳಿಂದಲೂ ಭಕ್ತರು ಬರುತ್ತಾರೆ. ತಮ್ಮ ಇಷ್ಟಾರ್ಥ ಕೈಗೂಡಲಿ ಎಂದು ಪ್ರಾರ್ಥಿಸುತ್ತಾರೆ. ಯಾವುದೇ ಸಮಸ್ಯೆಯಿದ್ದರೂ ಇಲ್ಲಿಗೆ ಬಂದ ಆನಂತರ ಪರಿಹಾರ ಆಗುತ್ತದೆ, ಅಂತಹ ಒಂದು ಶಕ್ತಿ ಈ ಕ್ಷೇತ್ರದಲ್ಲಿದೆ ಎನ್ನುವುದು ಭಕ್ತರ ನಂಬಿಕೆ.

ಹಲವಾರು ವರ್ಷಗಳಿಂದ ಲಾಲ್ ಬಾಷಾ, ಹುಸೇನ್ ಬಾಷಾ ಮಸೀದಿಯಲ್ಲಿ ಹಿಂದೂ-ಮುಸ್ಲಿಂ ಸಮಾಜದವರು ಒಟ್ಟಾಗಿ ಇಲ್ಲಿ ಕಾರ್ತಿಕೋತ್ಸವವನ್ನು ಸಂಭ್ರಮದಿಂದ ಆಚರಿಸುತ್ತಿದ್ದೇವೆ. ಅಷ್ಟೇ ಅಲ್ಲದೆ ಮೊಹರಂ ಸೇರಿದಂತೆ ಪ್ರತಿ ಹಬ್ಬ-ಹರಿದಿನಗಳನ್ನು ನಾವೆಲ್ಲ ಒಂದಾಗಿ ಆಚರಿಸುತ್ತೇವೆ. ಇಲ್ಲಿ ಯಾವುದೇ ಭೇದ-ಭಾವ ಇಲ್ಲದೆ ಎಲ್ಲರೂ ಒಂದಾಗಿ ಆಚರಣೆ ಮಾಡುವುದು ಖುಷಿ ನೀಡುತ್ತದೆ ಎಂದು ಸ್ಥಳೀಯರು ಹೇಳುತ್ತಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗಾಳಿಪಟ ದಾರ ಕುತ್ತಿಗೆ ಸೀಳಿ ಮಗಳನ್ನು ಹಾಸ್ಟೆಲ್‌ನಿಂದ ಕರೆತರಲು ಹೊರಟಿದ್ದ ಅಪ್ಪ ದಾರುಣ ಸಾವು
ಪೌರಾಯುಕ್ತೆಗೆ ಬೆಂಕಿ: ಕಾಂಗ್ರೆಸ್ಸಿಗನಿಂದ ಧಮ್ಕಿ