‘ಕಾವ್ಯಾಂ ವ್ಹಾಳೊʼ ಕೊಂಕಣಿ ಕವಿಗೋಷ್ಠಿ

KannadaprabhaNewsNetwork |  
Published : Apr 08, 2025, 12:33 AM IST
‘ಕಾವ್ಯಾಂ ವ್ಹಾಳೊʼ ಕೊಂಕಣಿ ಕವಿಗೋಷ್ಠಿಯಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು. | Kannada Prabha

ಸಾರಾಂಶ

ಕವಿಗೋಷ್ಠಿಯಲ್ಲಿ ರಾಜ್ಯದಲ್ಲಿ ಪ್ರಥಮ ಬಾರಿ ಕೊಂಕಣಿ ಭಾಷೆಯಲ್ಲಿ ಪ್ರಬಂಧ ಮಂಡಿಸಿ ಪಿಎಚ್‌ಡಿ ಮಾಡಿದ ಡಾ. ಪ್ರೇಮ್ ಮೊರಾಸ್ ಮತ್ತು ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿದ ಯುವ ಗಾಯಕಿ ರಿಶಲ್ ಮೆಲ್ಬಾ ಕ್ರಾಸ್ತಾ ಅವರನ್ನು ಸನ್ಮಾನಿಸಲಾಯಿತು.

ಕನ್ನಡಪ್ರಭ ವಾರ್ತೆ ಮಂಗಳೂರು

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯಿಂದ ಅಕಾಡೆಮಿ ಸಭಾಂಗಣದಲ್ಲಿ ‘ಕಾವ್ಯಾಂ ವ್ಹಾಳೊʼ ಶೀರ್ಷಿಕೆಯಡಿ ಮಾಸಿಕ ಕವಿಗೋಷ್ಠಿ ಹಮ್ಮಿಕೊಳ್ಳಲಾಗಿತ್ತು.

ರಾಜ್ಯದಲ್ಲಿ ಪ್ರಥಮ ಬಾರಿ ಕೊಂಕಣಿ ಭಾಷೆಯಲ್ಲಿ ಪ್ರಬಂಧ ಮಂಡಿಸಿ ಪಿಎಚ್‌ಡಿ ಮಾಡಿದ ಡಾ. ಪ್ರೇಮ್ ಮೊರಾಸ್ ಮತ್ತು ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿದ ಯುವ ಗಾಯಕಿ ರಿಶಲ್ ಮೆಲ್ಬಾ ಕ್ರಾಸ್ತಾ ಅವರನ್ನು ಸನ್ಮಾನಿಸಲಾಯಿತು.

ಮುಖ್ಯ ಅತಿಥಿಯಾಗಿ ಕೊಡಿಯಾಲ್ ಖಬರ್ ಡಾಟ್‌ ಕಾಮ್‌ ಸಂಪಾದಕ ವೆಂಕಟೇಶ್ ಬಾಳಿಗ ಭಾಗವಹಿಸಿದ್ದರು. ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ರಿಜಿಸ್ಟ್ರಾರ್ ಡಾ. ಆಲ್ವಿನ್ ಡೆಸಾ ಅವರು ಕವಿತೆಗಳ ಬಗ್ಗೆ ಉಪನ್ಯಾಸ ನೀಡಿದರು.

ಅಕಾಡೆಮಿ ಅಧ್ಯಕ್ಷ ಜೋಕಿಂ ಸ್ಟ್ಯಾನಿ ಆಲ್ವಾರಿಸ್ ಸ್ವಾಗತಿಸಿದರು. ಕವಿ ಜೊಸ್ಸಿ ಪಿಂಟೊ ಕಿನ್ನಿಗೋಳಿ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು. ವಾಚಿಸಿದ ಕವಿತೆಗಳನ್ನು ಎಲ್ಸನ್ ಡಿಸೋಜ ಹಿರ್ಗಾನ ವಿಮರ್ಶಿಸಿದರು. ಅನಿಲ್ ಜೆ. ಕುವೆಲ್ಲೊ, ರಮಾನಾಥ ಮೇಸ್ತ ಶಿರೂರು, ವಿನೋದ್ ಪಿಂಟೊ ತಾಕೊಡೆ, ಸತ್ಯವತಿ ಕಾಮತ್ ಮಂಗಳೂರು, ಮೇರಿ ಸಲೋಮಿ ಡಿಸೋಜ ಮೊಗರ್ನಾಡ್, ವೆಂಕಟೇಶ್ ನಾಯಕ್ ಮಂಗಳೂರು, ನವೀನ್ ಪಿರೇರಾ ಸುರತ್ಕಲ್, ರಿಚ್ಚಿ ಪಿರೇರಾ ದೆರೆಬೈಲ್‌, ಮರ್ಲಿನ್ ಮಸ್ಕರೇನ್ಹಸ್, ಪ್ರೀತಾ ಮಿರಾಂದಾ ಮುಂತಾದವರು ಕವಿತೆಗಳನ್ನು ವಾಚಿಸಿದರು. ಅಕಾಡೆಮಿ ಸದಸ್ಯ ರೊನಾಲ್ಡ್ ಕ್ರಾಸ್ತಾ ನಿರೂಪಿಸಿ ವಂದಿಸಿದರು. ಸದಸ್ಯರಾದ ನವೀನ್ ಲೋಬೊ, ಸಮರ್ಥ್ ಭಟ್, ಅಕ್ಷತಾ ನಾಯಕ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಲ್ಸ್‌ ಪೋಲಿಯೋ ಹಾಕಿಸಿ, ಅಂಗವಿಕತೆ ತಪ್ಪಿಸಿ
ಪುಷ್ಪಗಿರಿ ಜೇಸಿಗೆ 50 ವರ್ಷ: ಸಂಭ್ರಮ ಆಚರಣೆ