ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಶ್ರೀಗುರು ಶಾಂತ ಸ್ವಾಮೀಜಿ ಹಾಗೂ ಶಿವಬಸವ ಸ್ವಾಮೀಜಿಗಳ ಸಮ್ಮುಖದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿದರಹಳ್ಳಿ ಮಹಿಳಾ ಮತ್ತು ಪುರುಷ ಸ್ವಸಹಾಯ ಸಂಘದ ಫಲಾನುಭವಿಗಳಿಂದ ಸಾಲ ಮಂಜೂರಾತಿಗೆ ಸಹಕರಿಸಿದ ನಿಜಗುಣ, ಬ್ಯಾಂಕಿನ ಮುಖ್ಯಸ್ಥ ನಟರಾಜ್, ರಾಜಶೇಖರ್ ಪ್ರಸಾದ್, ಬಲರಾಮ್, ಹರ್ಷವರ್ಧನ್ ಅವರನ್ನು ಸನ್ಮಾನಿಸಲಾಯಿತು.
ಈ ವೇಳೆ ಮಾತನಾಡಿದ ಟ್ರಸ್ಟ್ ಅಧ್ಯಕ್ಷ ನಿಜಗುಣ, ಮಹಿಳೆಯರು ಮತ್ತು ಪುರುಷರು ಗ್ರಾಮೀಣ ಪ್ರದೇಶದಲ್ಲಿ ಅವರು ಎದುರಿಸುತ್ತಿರುವ ಆರ್ಥಿಕ ಪರಿಸ್ಥಿತಿ ಹಾಗೂ ಮಾಹಿತಿ ಕೊರತೆಯಿಂದ ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗಿರುವುದನ್ನು ಗಮನಿಸಿ ಬ್ಯಾಂಕ್ಗಳಿಂದ ಫಲಾನುಭವಿಗಳಿಗೆ ಸಾಲ ವಿತರಿಸಲಾಗಿದೆ ಎಂದರು.ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸೌಲಭ್ಯ ಪಡೆಯುವ ಬಗ್ಗೆ ಮಾಹಿತಿ ಮತ್ತು ಫಲಾನುಭವಿಗಳಿಗೆ ಸೌಲಭ್ಯ ತಲುಪಿಸಲು ಕಳೆದ ಐದು ವರ್ಷಗಳಿಂದ 3000 ಹೆಚ್ಚು ಮಹಿಳಾ, ಪುರುಷ ಸದಸ್ಯರಿಗೆ 30 ಕೋಟಿಗೂ ಹೆಚ್ಚು ಹಣವನ್ನು ಕಡಿಮೆ ಬಡ್ಡಿ ಮತ್ತು ಬಡ್ಡಿ ರಹಿತ ಸಾಲವನ್ನು ವಿತರಿಸಲಾಗಿದೆ ಎಂದರು.
ತಾಲೂಕಿನ ಬಿದರಹಳ್ಳಿ, ಹಂಪಾಪುರ, ಚನ್ನಹಳ್ಳಿ ಹಾಗೂ ಮೈಸೂರು ತಾಲೂಕಿನ ಪಿಲ್ಲಹಳ್ಳಿ, ಪುಟ್ಟೇಗೌಡನಹುಂಡಿ, ಚಿಕ್ಕಳ್ಳಿ, ಪಾಳ್ಯ ಹಾಗೂ ಮುದ್ದೇಗೌಡನಹುಂಡಿ, ಸಾತ್ಗಳ್ಳಿ ಗ್ರಾಮದ ಸ್ವಸಹಾಯ ಸಂಘದ ಸದಸ್ಯರು ಸಾಲಸೌಲಭ್ಯದ ಅನುಕೂಲ ಪಡೆದುಕೊಂಡಿದ್ದಾರೆ ಎಂದರು.