ಕನಕಗಿರಿ: ಕಾಯಕ ಎಂದರೆ ಕೇವಲ ಉದ್ಯೋಗವಲ್ಲ, ಅದು ದೈವಿಕ ಸೇವೆ ಎಂಬುದಾಗಿ ಸಾರಿದ ಕಾಯಕ ಶರಣರ ತತ್ವದಂತೆ ನಾವೆಲ್ಲರೂ ಬದುಕಬೇಕು ಎಂದು ಶಿರಸ್ತೇದಾರ ಇಂಡಿ ಹೇಳಿದರು.
ಕಾಯಕವೇ ಕೈಲಾಸ ಎಂಬ ತತ್ವದಡಿ,ಶರಣರು ನಿಸ್ವಾರ್ಥ ಮನೋಭಾವದಿಂದ,ಸಾಮಾಜಿಕ ಜವಾಬ್ದಾರಿಯೊಂದಿಗೆ ಪ್ರತಿಯೊಬ್ಬರೂ ತಮ್ಮ ಕೆಲಸ ಮಾಡಬೇಕೆಂದು ಪ್ರತಿಪಾದಿಸಿದರು. ಬಸವಣ್ಣನವರು ಕಾಯಕ ಅತ್ಯುನ್ನತ ಸ್ಥಾನಕ್ಕೇರಿಸಿ ಶ್ರಮ ಸಂಸ್ಕೃತಿ ಸಮಾಜದಲ್ಲಿ ಬಿತ್ತಿದ್ದಾರೆ.ಇಂತಹ ಶರಣರ ವಿಚಾರಗಳು ಎಂದಿಗೂ ಪ್ರಸ್ತುತವಾಗಿದ್ದು, ಇವರ ಆದರ್ಶ ಮೈಗೂಡಿಸಿಕೊಂಡು ನಡೆದಾಗ ಮಾತ್ರ ಜೀವನ ಸಾರ್ಥಕವಾಗಲಿದೆ ಎಂದರು.
ತಹಸೀಲ್ದಾರ್ ಕಚೇರಿ ಸಿಬ್ಬಂದಿ ರವೀಶ ಹಿರೇಮಠ, ಅಮರೇಶ, ವಿಜಯಕುಮಾರ, ಸಾಧಿಕಾಭಾನು, ಶಿವಕುಮಾರ ಮ್ಯಾಗೇರಿ, ವಾಸುದೇವ, ವೆಂಕೋಬ, ಬಸವರಾಜ ಮೇಟಿ, ಗಣೇಶ, ವಿಜಯಭಾಸ್ಕರ ರೆಡ್ಡಿ, ಪ್ರಗತಿಪರ ಸಂಘಟನೆಯ ಪಾಮಣ್ಣ ಅರಳಿಗನೂರು ಸೇರಿ ಇತರರಿದ್ದರು.