ಕನ್ನಡಪ್ರಭ ವಾರತೆ ಕಲಬುರಗಿ
ಕರ್ನಾಟಕ ಕೇಂದ್ರೀಯ ವಿವಿ ಅಂಗಳದಲ್ಲಿ 9ನೇ ಘಟಿಕೋತ್ಸವದಲ್ಲಿ ಭಾಷಣ ಮಾಡಿದ ಅವರು, ಬೆಳವಣಿಗೆ ಎಂದಿಗೂ ಪ್ರತ್ಯೇಕತೆಯಲ್ಲಿ ಮಾತ್ರ ಸಂಭವಿಸುವುದಿಲ್ಲ, ಅದು ಅನೇಕ ಅಂಶಗಳಲ್ಲಿ ಬೇರೂರಿರುತ್ತದೆ. ಪರಂಪರಾಗತವಾಗಿ ಬಳುವಳಿಯಾಗಿ ಬಂದ ಸಂಸ್ಕೃತಿ, ಬೇರುಗಳು, ಪರಿಸರ ಮತ್ತು ರೆಕ್ಕೆಗಳು ನಿಮ್ಮನ್ನು ರೂಪಿಸುತ್ತವೆ. ನಿಮ್ಮ ವ್ಯಕ್ತಿತ್ವವನ್ನು ಮತ್ತು ನಿಮ್ಮ ನಡತೆಯನ್ನು ರೂಪಿಸಲು ಇವೆರಡೂ ಬಹಳ ಅಗತ್ಯ ಎಂದರು.
ಪ್ರೊ. ಬಟು ಸತ್ಯನಾರಾಯಣ ಮಾತನಾಡಿದರು. ಕುಲಸಚಿವ ಆರ್ ಆರ್ ಬಿರಾದಾರ್ ಅವರು ರ್ಯಾಂಕ್ ವಿಜೇತರನ್ನು ಪರಿಚಯಿಸಿದರು.ಪರೀಕ್ಷಾ ನಿಯಂತ್ರಣಾಧಿಕಾರಿ ಕೋಟಾ ಸಾಯಿಕೃಷ್ಣ ನವ ಪದವೀಧರರನ್ನು ಸಭೆಗೆ ಪರಿಚಯಿಸಿದರು. ಡಾ.ಚನ್ನವೀರ ಆರ್.ಎಂ., ಸಮಾಜ ನಿಕಾಯದ ಡೀನ್ ಡಾ. ಪವಿತ್ರಾ ಆಲೂರ್, ಸಾರ್ವಜನಿಕ ಸಂಪರ್ಕಾಧಿಕಾರಿ ಡಾ.ಗಣಪತಿ ಬಿ ಸಿನ್ನೂರ, ಘಟಿಕೋತ್ಸವ ಮಾಧ್ಯಮ ಉಸ್ತುವಾರಿ ಡಾ.ಜೋಹೆರ್, ಡಾ.ಪ್ರಕಾಶ ಬಾಳಿಕಾಯಿ ಇದ್ದರು.
ಘನತೆ ನಿತ್ಯ ಬದುಕಿನ ಅಂಗವಾಗಲಿ
ರಾಮಾಯಣದ ಭರತ ನೀಡಿದ ಆದರ್ಶ ಶಾಶ್ವತ ದೀಪಸ್ತಂಭವಾಗಿದೆ. ಕೈಕೇಯಿ ತನ್ನ ಬುದ್ಧಿವಂತಿಕೆಯಿಂದ ರಾಮನ ವನವಾಸದ ವಾಗ್ದಾನ ಮತ್ತು ಭರತನ ಪಟ್ಟಾಭಿಷೇಕದ ಸೌಲಭ್ಯ ದೊರಕಿಸಿಕೊಂಡರೂ ಭರತ ಆಯೋಧ್ಯೆಯ ಸಿಂಹಾಸನವನ್ನು ಏರಲು ನಿರಾಕರಿಸಿದ. ಅವನು ರಾಮನ ಪಾದುಕೆಗಳನ್ನು ಸಿಂಹಾಸನದ ಮೇಲಿರಿಸಿ, ತಾನು ಕೇವಲ ನಾಮಮಾತ್ರ ರಾಜನಾಗಿ ರಾಮನು ವನವಾಸದಿಂದ ಮರಳುವವರೆಗೆ ನಿಷ್ಠೆಯಿಂದ ರಾಜ್ಯಭಾರ ಮಾಡಿದ. ಭರತ ಮಾನವನಿಗೆ ಮಾದರಿಯಾಗುವ ಎರಡು ಶಾಶ್ವತ ಮೌಲ್ಯಗಳನ್ನು ಬದುಕಿ ತೋರಿಸಿದ. ಅನ್ಯಾಯದಿಂದ ದೊರೆತ ಅಧಿಕಾರವನ್ನು ತ್ಯಜಿಸುವ ಧೈರ್ಯ ಮತ್ತು ತಾಂತ್ರಿಕ ನಿಯಮಗಳಿಗಿಂತ ಮೇಲಾಗಿ ಧರ್ಮದ ಅಂತರಾರ್ಥವನ್ನು ಗೌರವಿಸುವ ವಿವೇಕ. ಇವು ಜ್ಞಾನದಿಂದ ಅರಿವಿನೆಡೆಗೆ ಸಾಗುವ ನಿಜವಾದ ದಾರಿಗಳೂ ಅಂತರಂಗದ ದೀಪ ಬೆಳಗಿಸುವ ಪಥಗಳೂ ಆಗಿವೆ ಎಂದು ನ್ಯಾಯಮೂರ್ತಿ ದಿನೇಶ ಮಹೇಶ್ವರಿ ಪ್ರತಿಪಾದಿಸಿದರು.