ಕನ್ನಡಪ್ರಭ ವಾರ್ತೆ ಮಂಡ್ಯ
ರಾಜಕೀಯ ಜೀವನದಲ್ಲಿ ಟೀಕೆಗಳು ಎದುರಾಗುವುದು ಸಾಮಾನ್ಯ. ಆ ಟೀಕೆಗಳು ಆರೋಗ್ಯಕರವಾಗಿರಬೇಕು. ಕುಟುಂಬದ ಸದಸ್ಯರವರೆಗೆ ಬರಬಾರದು. ಜನಪ್ರತಿನಿಧಿಯಾದವರು ಮೂರನೇ ದರ್ಜೆಯ ವ್ಯಕ್ತಿಗಳು ಮಾತನಾಡಿದಂತೆ ಮಾತನಾಡಬಾರದು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಮಂಡ್ಯ ಎಂದಾಗ ರಾಷ್ಟ್ರ, ರಾಜ್ಯ ತಿರುಗಿನೋಡುವಷ್ಟರ ಮಟ್ಟಿಗೆ ಜಿಲ್ಲೆಯ ರಾಜಕೀಯ ನಾಯಕರು ಆಡಳಿತ ನಡೆಸಿ ಹೋಗಿದ್ದಾರೆ. ಜಿಲ್ಲೆಯ ಗೌರವ-ಮರ್ಯಾದೆಯನ್ನು ಎತ್ತಿಹಿಡಿದಿದ್ದಾರೆ. ಅವರಂತೆ ನಡೆದುಕೊಳ್ಳಲು ನಮ್ಮಿಂದ ಸಾಧ್ಯವಾಗದಿದ್ದರೂ ಅವರ ಮಾರ್ಗದರ್ಶನದಲ್ಲಿ ಮುನ್ನಡೆದು ಆ ನಾಯಕರಿಗೆ ಅಗೌರವ ತರುವಂತಹ ರೀತಿಯಲ್ಲಿ ನಡೆದುಕೊಳ್ಳದಿದ್ದರೆ ಸಾಕು. ಯಾರೇ ಆಗಲಿ ಹದ್ದುಮೀರಿದ, ಸಭ್ಯತೆಯನ್ನು ಮೀರಿ ಮಾತುಗಳು ಯಾರಿಗೂ ಗೌರವ ತಂದುಕೊಡುವುದಿಲ್ಲ ಎಂದು ತಿಳಿಸಿದರು.ರವೀಂದ್ರ ಶ್ರೀಕಂಠಯ್ಯನವರ ತಾತ ಚುಂಚೇಗೌಡರ ಧರ್ಮಕಾರ್ಯಗಳನ್ನು ಕಂಡು ಮಹಾರಾಜರೇ ಅವರ ಮನೆಗೆ ಬಂದು ಹೋಗಿದ್ದಾರೆ. ಆ ಕುಟುಂಬದ ಹಿನ್ನೆಲೆಯಲ್ಲಿ ಅರಿತುಕೊಳ್ಳದೆ ಅಧಿಕಾರ, ಹಣದ ಮದದಲ್ಲಿ ಬಾಯಿಗೆ ಬಂದಂತೆ ಮಾತನಾಡಬಾರದು. ನಾಲಿಗೆ ನಾಗರೀಕತೆ ಹೇಳುತ್ತದೆ. ಯಾರೇ ಆಗಲಿ ನಾಲಿಗೆಯ ಮೇಲೆ ಹಿಡಿತವಿರಬೇಕೇ ಹೊರತು ಹರಿತವಿರಬಾರದು ಎಂದು ಆಕ್ರೋಶದಿಂದ ನುಡಿದರು.
ಗೋಷ್ಠಿಯಲ್ಲಿ ಮಾಜಿ ಶಾಸಕ ಕೆ.ಸುರೇಶ್ಗೌಡ, ಜಿಲ್ಲಾಧ್ಯಕ್ಷ ಡಿ.ರಮೇಶ್ ಇದ್ದರು.