ಕೆಜಿಎಫ್‌: ‘ಆಪರೇಷನ್ ಅಭ್ಯಾಸ್’ ಅಣುಕು ಪ್ರದರ್ಶನ

KannadaprabhaNewsNetwork | Published : May 17, 2025 2:07 AM
Follow Us

ಸಾರಾಂಶ

ಜನ ನಿಬಿಡ ಪ್ರದೇಶಗಳಲ್ಲಿ ನಡೆಯುವ ಭಯೋತ್ಪಾದಕ ಚಟುವಟಿಕೆ, ಅಗ್ನಿಅವಘಡ, ಬಾಂಬ್ ಸ್ಟೋಟ, ಕಟ್ಟಡ ದುರಂತ ಇತರ ಅಹಿತಕರ ಘಟನೆಗಳಿಂದ ಸಾರ್ವಜನಿಕರು ಭಯ ಭೀತರಾಗದೆ ಅರಿವು ಮೂಡಿಸುವ ಸಲುವಾಗಿ ಜಿಲ್ಲಾಡಳಿತ ಸಹಕಾರದೊಂದಿಗೆ ಗೃಹರಕ್ಷದಳ, ಪೋಲೀಸ್ ಇಲಾಖೆ, ಅಗ್ನಿ ಶಾಮಕ ದಳ ಅಣಕು ಪ್ರದರ್ಶನ ನೀಡಿದವು.

ಕನ್ನಡಪ್ರಭ ವಾರ್ತೆ ಕೆಜಿಎಫ್ಯುದ್ಧದ ವೇಳೆ ದಾಳಿ ನಡೆದ್ರೆ ನಮ್ಮ ರಕ್ಷಣೆ ಹೇಗೆ ಮಾಡಿಕೊಳ್ಳಬೇಕು, ಸೈರನ್ ಆದ ವೇಳೆಯಲ್ಲಿ ಯಾವ ರೀತಿ ತುರ್ತು ಕ್ರಮಗಳನ್ನು ಕೈಗೊಂಡು ದಿಟ್ಟವಾಗಿ ಎದರಿಸಿ ವಿಪತ್ತು ಸಂದರ್ಭದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಕೆಜಿಎಫ್ ಪೊಲೀಸ್ ಜಿಲ್ಲಾ ವರಿಷ್ಠಾಧಿಕಾರಿ ಕೆ.ಎಂ. ಶಾಂತರಾಜು ತಿಳಿಸಿದರು.

ಕೆಜಿಎಫ್‌ನ ನಗರಸಭೆ ಬಸ್ ನಿಲ್ದಾಣದಲ್ಲಿ ಆಪರೇಷನ್ ಅಭ್ಯಾಸ್ ಅಂಗವಾಗಿ ಶುಕ್ರವಾರ ನಾಗರೀಕ ರಕ್ಷಣಾ ಕಾರ್ಯಾಚಾರಣೆಯ ಸಂಬಂಧ ಸಾರ್ವಜನಿಕರು ಆಪತ್ಕಾಲದಲ್ಲಿ ಹೇಗೆ ನಡೆದುಕೊಳ್ಳಬೇಕು ಎಂಬ ಬಗ್ಗೆ ಭೌತಿಕ ಪ್ರಾತ್ಯಕ್ಷಿಕೆಯ ಮೂಲಕ ಸರ್ಮರ್ಥವಾಗಿ ಪೊಲೀಸ್ ಇಲಾಖೆ ಅರಿವು ಮೂಡಿಸಲಾಯಿತು.

ಅಣಕು ಪ್ರದರ್ಶನಕ್ಕೆ ಚಾಲನೆ

ಆಪರೇಷನ್ ಅಭ್ಯಾಸ್ ನಾಗರಿಕರ ರಕ್ಷಣಾ ಕಾರ್ಯಾಚರಣೆಯ ಅಣಕು ಪ್ರದರ್ಶನಕ್ಕೆ ಕೆಜಿಎಫ್ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕೆ.ಎಂ.ಶಾಂತರಾಜು, ತಹಸಿಲ್ದಾರ್ ನಾಗವೇಣಿ, ನಗರಸಭೆ ಪೌರಾಯುಕ್ತ ಪವನ್‌ಕುಮಾರ್ ಚಾಲನೆ ನೀಡಿದರು.ಜನ ನಿಬಿಡ ಪ್ರದೇಶಗಳಲ್ಲಿ ನಡೆಯುವ ಭಯೋತ್ಪಾದಕ ಚಟುವಟಿಕೆ, ಅಗ್ನಿಅವಘಡ, ಬಾಂಬ್ ಸ್ಟೋಟ, ಕಟ್ಟಡ ದುರಂತ ಇತರ ಅಹಿತಕರ ಘಟನೆಗಳಿಂದ ಸಾರ್ವಜನಿಕರು ಭಯ ಭೀತರಾಗದೆ ಅರಿವು ಮೂಡಿಸುವ ಸಲುವಾಗಿ ಜಿಲ್ಲಾಡಳಿತ ಸಹಕಾರದೊಂದಿಗೆ ಗೃಹರಕ್ಷದಳ, ಪೋಲೀಸ್ ಇಲಾಖೆ, ಅಗ್ನಿ ಶಾಮಕ ದಳ, ಆರೋಗ್ಯ ಇಲಾಖೆ, ತಾಲೂಕು ಸ್ಕೌಟ್ಸ್ ಅಂಡ್ ಗೈಡ್ಸ್ ಹಾಗೂ ವಿವಿಧ ಇಲಾಖೆಗಳ ಸಂಯುಕ್ತಾಶ್ರದಲ್ಲಿ ಕೆಜಿಎಫ್‌ನ ನಗರಸಭೆ ಬಸ್ ನಿಲ್ದಾಣದಲ್ಲಿ ಅಣುಕ ಪ್ರದರ್ಶನ ನಡೆಸಲಾಯಿತು.

ಒತ್ತೆಯಾಳು ಅಣಕು ಪ್ರದರ್ಶನ

ಮೊದಲಿಗೆ ಭಯೋತ್ಪಾದಕರು ಕಟ್ಟಡವನ್ನು ಸುತ್ತುವರೆದು ಸಾರ್ವಜನಿರಕನ್ನು ಒತ್ತೆಯಾಗಿಸಿಕೊಂಡು, ಬಾಂಬ್ ಸ್ಟೋಟಿಸಿ ಅದರಿಂದ ಬೆಂಕಿ ಹೊತ್ತಿಕೊಂಡ ಸಂದರ್ಭದಲ್ಲಿ ಸಂಭವಿಸುವ ಘಟನಾ ವಳಿಗಳನ್ನು ಸೃಷ್ಟಿಸಿ ಸಾರ್ವಜನಿಕರಿಗೆ ಅಣುಕು ಪ್ರದರ್ಶನ ನಡೆಸಿ ಸಾರ್ವಜನಿಕರಿಗೆ ಅರಿವು ಮೂಡಿಸಿ ರಕ್ಷಣಾ ಕಾರ್ಯಗಳನ್ನು ಪ್ರದರ್ಶಿಸಲಾಯಿತು. ಬಾಂಬ್ ಸ್ಟೋಟದ ವೇಳೆ ಸಂಭವಿಸುವ ಘಟನೆಯನ್ನು ಸಹ ಪ್ರದರ್ಶಿಸಿಲಾಗಿತ್ತು ಇದರಿಂದ ಸ್ಥಳದಲ್ಲಿ ನೆರೆದಿದ್ದ ಸಾರ್ವಜನಿಕರು ಭಯೋತ್ಪಾದಕ ದಾಳಿಯನ್ನು ಕಣ್ಣಾರೆ ಕಂಡು ಸಾರ್ವಜನಿಕರು ರೋಮಾಂಚನ ಹಾಗೂ ಕುತೂಹಲದಿಂದ ವೀಕ್ಷಿಸಿದರು. ರಕ್ಷಣಾ ಸಿಬ್ಬಂದಿಯ ಚಾಕಚಕ್ಯತೆಗೆ ಸ್ಥಳದಲ್ಲಿದ್ದವರು ಬೆರಗಾದರು.

ಬಸ್‌ ಪ್ರಯಾಣಿಕರ ಒತ್ತ

ಆತಂಕವಾದಿಗಳು ಬಸ್ ಅನ್ನು ಹಾಗೂ ಪ್ರಯಾಣಿಕರನ್ನು ಒತ್ತೆಯಿರಿಸಿಕೊಂಡ ಸಂದರ್ಭದಲ್ಲಿ ನಡೆಯುವ ಘಟನಾವಳಿ ಗಳನ್ನು ರೋಚಕವಾಗಿ ಪ್ರದರ್ಶಿಸಲಾಯಿತು. ವಾಸಸ್ಥಳಗಳ ಮೇಲೆ ಡ್ರೋನ್ ದಾಳಿಯಾದಾಗಿನ ಸಂದರ್ಭಗಳನ್ನು ಸೃಷ್ಟಿಸಿ ರಕ್ಷಣಾ ಕಾರ್ಯಚರಣೆಯ ಅಣುಕು ಪ್ರದರ್ಶನ ನಡೆಸಿದರು.ಅಣುಕು ಪ್ರದರ್ಶನದಲ್ಲಿ ಪೋಲೀಸ್ ಕಮಾಂಡೋಪಡೆ, ಎನ್.ಸಿ.ಸಿ, ಅಗ್ನಿಶಾಮಕ ದಳ, ಶ್ವಾನ ದಳ, ಬಾಂಬ್ ನಿಷ್ಕ್ರಿಯ ದಳ, ಗೃಹರಕ್ಷಣ ದಳ ಆರೋಗ್ಯ ಇಲಾಖೆ ಸಿಬ್ಬಂದಿಗಳು ಅಣುಕು ಕಾರ್ಯನಿರ್ವಹಿಸಿದರು.