ಕಿನ್ನಿಗೋಳಿ ಶ್ರೀರಾಮ ನಾಮ ಜಪ ಅಭಿಯಾನ

KannadaprabhaNewsNetwork |  
Published : May 26, 2025, 11:51 PM ISTUpdated : May 26, 2025, 11:52 PM IST
ಕಿನ್ನಿಗೋಳಿ ಶ್ರೀ ರಾಮ ನಾಮ ಜಪ ಅಭಿಯಾನ  | Kannada Prabha

ಸಾರಾಂಶ

ಕಿನ್ನಿಗೋಳಿ ಶ್ರೀ ರಾಮ ಮಂದಿರದಲ್ಲಿ ನಡೆಯುತ್ತಿರುವ ಶ್ರೀ ರಾಮ ನಾಮ ಜಪ ಅಭಿಯಾನದಲ್ಲಿ ಭಾಗವಹಿಸಿ ಶ್ರೀ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶ ಶ್ರೀ ವಿದ್ಯಾಧೀಶ ತೀರ್ಥ ಶ್ರೀ ಪಾದಂಗಳವರು ಅನುಗ್ರಹ ಸಂದೇಶ ನೀಡಿದರು.

ಕನ್ನಡಪ್ರಭವಾರ್ತೆ ಮೂಲ್ಕಿ

ರಾಮ ನಾಮ ಜಪ ಲೋಕದ ಹಿತಕ್ಕೆ ಲೋಕ ಕಲ್ಯಾಣದ ಸಂಕಲ್ಪದಿಂದ ನಡೆಯುತ್ತಿದ್ದು ರಾಮನಾಮ ಜಪದಿಂದ ಕಷ್ಟಗಳು ದೂರವಾಗಿ ಜೀವನದಲ್ಲಿ ಸುಖಶಾಂತಿ ನೆಮ್ಮದಿ ಸಾಧ್ಯ ಎಂದು ಶ್ರೀ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶ ಶ್ರೀ ವಿದ್ಯಾಧೀಶ ತೀರ್ಥ ಶ್ರೀ ಪಾದಂಗಳವರು ಹೇಳಿದ್ದಾರೆ.

ಕಿನ್ನಿಗೋಳಿ ಶ್ರೀ ರಾಮ ಮಂದಿರದಲ್ಲಿ ನಡೆಯುತ್ತಿರುವ ಶ್ರೀ ರಾಮ ನಾಮ ಜಪ ಅಭಿಯಾನದಲ್ಲಿ ಭಾಗವಹಿಸಿ ಅನುಗ್ರಹ ಸಂದೇಶ ನೀಡಿ ಮಾತನಾಡಿದ ಅವರು, ರಾಮ ಮಂದಿರದಲ್ಲಿ ನಿರಂತರ ಭಜನೆ, ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿರುವುದು ನಮ್ಮ ಸಮಾಜದ ಘನತೆ ಹೆಚ್ಚಿಸಿದ್ದು ಇತರರಿಗೆ ಮಾದರಿಯಾಗಿದೆ ಎಂದು ಹೇಳಿದರು.

ಕಿನ್ನಿಗೋಳಿ ಶ್ರೀ ರಾಮ ಮಂದಿರದ ಅಧ್ಯಕ್ಷ ರಾಜೇಶ್ ನಾಯಕ್, ಸಮಿತಿ ಉಪಾಧ್ಯಕ್ಷ ಅದಿತ್ಯ ಎಂ. ಕಾಮತ್, ಕಾರ್ಯದರ್ಶಿ ರಾಧಾಕೃಷ್ಣ ನಾಯಕ್, ಕೋಶಾಧಿಕಾರಿ ಮಂಜುನಾಥ ಮಲ್ಯ, ರಾಘವೇಂದ್ರ ಪ್ರಭು, ನಾಮದೇವ ಕಾಮತ್, ಗಣೇಶ್ ಪ್ರಸಾದ್ ಕಾಮತ್, ಗುರುದತ್ತರಾವ್, ರಾಜೇಶ್ ಕಾಮತ್ , ಸಚ್ಚಿದಾನಂದ ಭಟ್, ರಘುವೀರ ಕಾಮತ್, ಅನಂತ ಕಾಮತ್ ಭಾಸ್ಕರ ಶೆಣೈ, ಮಾತೃ ಮಂಡಳಿಯ ಭಾರತೀ ಶೆಣೈ, ವಿಜಯಾ ಪ್ರಭು, ರಾಧಾ ಶೆಣೈ, ವಾರಿಜಾ ಕಾಮತ್, ಸಂಧ್ಯಾ ಮಲ್ಯ, ಸೀಮಾ ಭಟ್, ರಘುವೀರ ಕಾಮತ್, ಸಂಧ್ಯಾ ಮಲ್ಯ, ನಂದಿತಾ ರಾವ್ ಮತ್ತಿತರರಿದ್ದರು.

ಮಂದಿರದ ಅಧ್ಯಕ್ಷ ರಾಜೇಶ್ ನಾಯಕ್ ಸ್ವಾಗತಿಸಿದರು. ವೇ. ಮೂ. ಗಿರೀಶ್ ಭಟ್ ಪ್ರಸ್ತಾವನೆಗೈದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''