ಮಾಲೂರು ರಾಜಕಾರಣಕ್ಕೆ ಕೋಮುಲ್‌ಮೇಲೆ ಆರೋಪ ಸಲ್ಲ: ಕಲ್ಲೂರು ಮಂಜು

KannadaprabhaNewsNetwork |  
Published : May 07, 2026, 01:30 AM IST
01 | Kannada Prabha

ಸಾರಾಂಶ

ಮಾಜಿ ಶಾಸಕ ಮಂಜುನಾಥಗೌಡ ಅವರು ತಮ್ಮ ಹಾಗೂ ಹಾಲಿ ಶಾಸಕ, ಕೋಮುಲ್ ಅಧ್ಯಕ್ಷ ನಂಜೇಗೌಡ ಅವರ ನಡುವಿನ ರಾಜಕೀಯ ದ್ವೇಷಕ್ಕಾಗಿ ಪದೇ ಪದೇ ಕೋಮುಲ್ ಹೆಸರು ಬಳಸಿ ಅಕ್ರಮ ನಡೆಯುತ್ತಿದೆ ಎಂದು ಆರೋಪಿಸುವುದು ಸೂಕ್ತ ಅಲ್ಲ.

ಕನ್ನಡಪ್ರಭ ವಾರ್ತೆ, ಶ್ರೀನಿವಾಸಪುರ

ಮಾಲೂರು ರಾಜಕಾರಣಕ್ಕಾಗಿ ಕೋಲಾರ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ (ಕೋಮುಲ್)ದ ಆಡಳಿತ ಮಂಡಳಿ ಮೇಲೆ ಅಕ್ರಮ ನಡೆದಿದೆ ಎಂದು ಆರೋಪ ಮಾಡುವುದು ಸೂಕ್ತ ಅಲ್ಲ ಎಂದು ಕೋಮುಲ್ ನಿರ್ದೇಶಕ ಕಲ್ಲೂರು ಮಂಜು ಹೇಳಿದ್ದಾರೆ.

ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಮಾಜಿ ಶಾಸಕ ಮಂಜುನಾಥಗೌಡ ಅವರು ತಮ್ಮ ಹಾಗೂ ಹಾಲಿ ಶಾಸಕ, ಕೋಮುಲ್ ಅಧ್ಯಕ್ಷ ನಂಜೇಗೌಡ ಅವರ ನಡುವಿನ ರಾಜಕೀಯ ದ್ವೇಷಕ್ಕಾಗಿ ಪದೇ ಪದೇ ಕೋಮುಲ್ ಹೆಸರು ಬಳಸಿ ಅಕ್ರಮ ನಡೆಯುತ್ತಿದೆ ಎಂದು ಆರೋಪಿಸುವುದು ಸೂಕ್ತ ಅಲ್ಲ. ಇದರಿಂದ ಒಕ್ಕೂಟದ ಹಿತಾಸಕ್ತಿಗೆ ಧಕ್ಕೆಯಾಗುತ್ತದೆ. ನಿಮ್ಮ ರಾಜಕೀಯ ಆರೋಪ- ಪ್ರತ್ಯಾರೋಪ ಮಾಲೂರಿಗೆ ಸೀಮಿತವಾಗಿರಲಿ ಎಂದು ಮಂಜುನಾಥಗೌಡರಿಗೆ ತಿರುಗೇಟು ನೀಡಿದ್ದಾರೆ.ಸಾಮಾಜಿಕ ಕಾರ್ಯಕರ್ತ ಗೂಳಿಗಾನಹಳ್ಳಿ ನಾಗರಾಜ್ ಹಾಗೂ ವಕೀಲ ವೆಂಕಟಾಚಲಪತಿ ಮಾಡಿರುವ ಕೋಮೂಲ್ ಮೇಲಿನ ಆರೋಪದಲ್ಲಿ ಯಾವುದೆ ಉರುಳಿಲ್ಲ. ನೇಮಕಾತಿ ವಿಚಾರವಾಗಿ ಇಡಿ ತನಿಖೆಯಾಗಿದೆ. ಲೋಕಾಯುಕ್ತದಲ್ಲಿ ಪ್ರಕರಣ ದಾಖಲಾಗಿ ವಿಚಾರಣೆ ನಡೆಯುತ್ತಿದೆ. ಈಗಾಗಲೇ ಹನ್ನೆರಡು ವರ್ಷಗಳ ಹಣದ ವಹಿವಾಟಿನ ಆಡಿಟ್ ಬಹಿರಂಗ ಮಾಡಲಾಗಿದೆ. ಎಲ್ಲಾ ಪಾರದರ್ಶಕವಾಗಿದೆ. ಚಿಂತಾಮಣಿ ಐಸ್ ಕ್ರೀಮ್ ತಯಾರಿಕಾ ಘಟಕಕ್ಕೆ ಕೋಚಿಮೂಲ್ ಇಬ್ಭಾಗ ಆಗುವ ಮೊದಲು ನಡೆದಿರುವುದು ಈಗ ಇಲ್ಲದ ಆರೋಪ ಮಾಡುವುದು ಸರಿಯಲ್ಲ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಫಲಿತಾಂಶ ರದ್ದು ಪಡಿಸಿ ಪ್ರಜಾಪ್ರಭುತ್ವ ಎತ್ತಿ ಹಿಡಿಯಲಿ: ಎಂ.ಆರ್.ರವಿಶಂಕರ್ ಆಗ್ರಹ
ವೀರ ಯೋಧರ ತ್ಯಾಗ, ಬಲಿದಾನಕ್ಕೆ ಬೆಲೆ ಕಟ್ಟಲಾಗದು