ಮುದ್ದಂಡ ಕಪ್: ಕೊಂಡ್ಯೋಳಂಡ, ನಾಪಂಡ, ಕೇಲೇಟಿರ ತಂಡಕ್ಕೆ ಜಯ

KannadaprabhaNewsNetwork |  
Published : Apr 13, 2025, 02:09 AM IST
ಚಿತ್ರ : 12ಎಂಡಿಕೆ2 : ಶನಿವಾರ ನಡೆದ ಪಂದ್ಯ.  | Kannada Prabha

ಸಾರಾಂಶ

ಮುದ್ದಂಡ ಹಾಕಿ ಕಪ್‌ನ ಶನಿವಾರ ನಡೆದ ಪಂದ್ಯದಲ್ಲಿ ಕೊಂಡ್ಯೋಳಂಡ, ನಾಪಂಡ, ಕೇಲೇಟಿರ ತಂಡಗಳು ಜಯ ಸಾಧಿಸಿವೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ನಗರದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಮುದ್ದಂಡ ಹಾಕಿ ಕಪ್ ನ ಶನಿವಾರ ನಡೆದ ಪಂದ್ಯದಲ್ಲಿ ಕೊಂಡ್ಯೋಳಂಡ, ನಾಪಂಡ, ಕೇಲೇಟಿರ ತಂಡಗಳು ಜಯ ಸಾಧಿಸಿವೆ.

ಮೂಕೋಂಡ ಮತ್ತು ಕುಂಡ್ಯೋಳಂಡ ಪಂದ್ಯಗಳ ನಡುವಿನ ಪಂದ್ಯದಲ್ಲಿ 2-0 ಗೋಲುಗಳ ಅಂತರದಲ್ಲಿ ಕೊಂಡ್ಯೋಳಂಡ ತಂಡ ಜಯ ಸಾಧಿಸಿತು.

ಆದೇಂಗಡ ಮತ್ತು ನಾಪಂಡ ನಡುವಿನ ಪಂದ್ಯದಲ್ಲಿ 3-0 ಗೋಲುಗಳ ಅಂತರದಲ್ಲಿ ನಾಪಂಡ ಗೆಲುವು ದಾಖಲಿಸಿತು.

ಕೇಲೇಟಿರ ಮತ್ತು ಕುಪ್ಪಂಡ (ನಾಂಗಾಲ) ನಡುವಿನ ಪಂದ್ಯದಲ್ಲಿ 3-2 ಗೋಲುಗಳ ಅಂತರದಲ್ಲಿ ಕೇಲೇಟಿರ ತಂಡ ಜಯ ಸಾಧಿಸಿತು.

ಮಾರ್ಚಂಡ ಮತ್ತು ಕೋಳೇರ ನಡುವಿನ ಪಂದ್ಯದಲ್ಲಿ 2-0 ಗೋಲುಗಳ ಅಂತರದಲ್ಲಿ ಕೋಳೇರ ತಂಡ ಜಯ ಸಾಧಿಸಿತು.

ಶಾಂತೆಯಂಡ ಮತ್ತು ಅಪ್ಪಚೆಟ್ಟೋಳಂಡ ತಂಡಗಳ ನಡುವಿನ ಪಂದ್ಯದಲ್ಲಿ 2-0 ಗೋಲುಗಳ ಅಂತರದಲ್ಲಿ ಶಾಂತೆಯಂಡ ಗೆಲುವು ಸಾಧಿಸಿತು.

ಮನೆಯಪಂಡ ಮತ್ತು ಚೆಕ್ಕೇರ ನಡುವಿನ ಪಂದ್ಯದಲ್ಲಿ 4-0 ಗೋಲುಗಳ ಅಂತರದಲ್ಲಿ ಚೆಕ್ಕೇರ ತಂಡ ಜಯ ಸಾಧಿಸಿತು.

ಮಾಳೇಟಿರ (ಕೆದಮುಳ್ಳೂರು) ಮತ್ತು ಮತ್ರಂಡ ನಡುವಿನ ಪಂದ್ಯದಲ್ಲಿ ನಿಗದಿತ ಅವಧಿಯಲ್ಲಿ ತಲಾ 2 ಗೋಲು ಬಾರಿಸಿ ಎರಡೂ ತಂಡಗಳು ಸಮಬಲ ಸಾಧಿಸಿದ ಹಿನ್ನೆಲೆ ನಡೆದ ಟೈ ಬ್ರೇಕರ್‌ನಲ್ಲಿ 4-3 ಗೋಲುಗಳ ಅಂತರದಲ್ಲಿ ಮತ್ರಂಡ ತಂಡ ಜಯ ಸಾಧಿಸಿತು.

ಚೋಡುಮಾಡ ಮತ್ತು ಅನ್ನಾಡಿಯಂಡ ನಡುವಿನ ಪಂದ್ಯದಲ್ಲಿ ನಿಗದಿತ ಅವಧಿಯಲ್ಲಿ ತಲಾ 1 ಗೋಲು ಬಾರಿಸುವ ಮೂಲಕ ಸಮಬಲ ಪ್ರದರ್ಶಿಸಿದ ಹಿನ್ನೆಲೆ ನಡೆದ ಟೈ ಬ್ರೇಕರ್‌ನಲ್ಲಿ 3-2 ಗೋಲುಗಳ ಅಂತರದಲ್ಲಿ ಅನ್ನಾಡಿಯಂಡ ಗೆಲುವು ದಾಖಲಿಸಿತು. ಪರದಂಡ ಪರ ಅಯ್ಯಪ್ಪ 2 ಹಾಗೂ ಪೂವಣ್ಣ 1 ಗೋಲು ದಾಖಲಿಸಿದರು. ಮುಂಡ್ಯೋಳಂಡ ಪರ ಮನು ಮೊಣ್ಣಪ್ಪ 1 ಗೋಲು ದಾಖಲಿಸಿದರು.

ಪಾಡೆಯಂಡ ಮತ್ತು ಮೈಂದಪಂಡ ನಡುವಿನ ಪಂದ್ಯದಲ್ಲಿ 3-1 ಗೋಲುಗಳ ಅಂತರದಲ್ಲಿ ಪಾಡೆಯಂಡ ಜಯ ಸಾಧಿಸಿತು. ಪಾಡೆಯಂಡ ಪರ ಮದನ್ ಮಂದಣ್ಣ 2 ಹಾಗೂ ಮಿಥುನ್ ಮುತ್ತಪ್ಪ 1 ಗೋಲು ದಾಖಲಿಸಿದರು. ಮೈಂದಪಂಡ ಪರ ಡೆನ್ಸಿ ಚಿಣ್ಣಪ್ಪ 1 ಗೋಲು ಬಾರಿಸಿದರು. ಮೈಂದಪಂಡ ಡೆನ್ನಿ ದೇವಯ್ಯ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.

ಮಲ್ಲಮಾಡ ಮತ್ತು ಐನಂಡ ನಡುವಿನ ಪಂದ್ಯದಲ್ಲಿ ಐನಂಡ 2-0 ಗೋಲುಗಳ ಅಂತರದಲ್ಲಿ ಗೆಲುವು ದಾಖಲಿಸಿತು. ಐನಂಡ ಪರ ರಂಜನ್ ಹಾಗೂ ಆಕಾಶ್ ಪೂವಣ್ಣ ತಲಾ 1 ಗೋಲು ಬಾರಿಸಿದರು. ಮಲ್ಲಮಾಡ ಕರುಂಬಯ್ಯ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ