ಕೊಂಗಾಡಿಯಪ್ಪ ಚಿಂತನೆಗಳು ಯುವಪೀಳಿಗೆಗೆ ದಾರಿದೀಪ: ಧೀರಜ್‌

KannadaprabhaNewsNetwork |  
Published : Feb 23, 2024, 01:52 AM IST
ದೊಡ್ಡಬಳ್ಳಾಪುರದ ಪುರಪಿತೃ ಲೋಕಸೇವಾನಿರತ ಡಿ.ಕೊಂಗಾಡಿಯಪ್ಪ ಅವರ ೧೬೪ನೇ ಜನ್ಮದಿನಾಚರಣೆ ಕಾರ್‍ಯಕ್ರಮ ದೇವಾಂಗ ಮಂಡಲಿ ನೇತೃತ್ವದಲ್ಲಿ ನಡೆಯಿತು. | Kannada Prabha

ಸಾರಾಂಶ

ದೊಡ್ಡಬಳ್ಳಾಪುರ: ಇಲ್ಲಿನ ಮಾರುಕಟ್ಟೆ ಚೌಕದಲ್ಲಿರುವ ಲೋಕಸೇವಾನಿರತ ಡಿ.ಕೊಂಗಾಡಿಯಪ್ಪ ಅವರ ಪುತ್ಥಳಿ ಮುಂಭಾಗ ದೇವಾಂಗ ಮಂಡಲಿ ನೇತೃತ್ವದಲ್ಲಿ ಡಿ.ಕೊಂಗಾಡಿಯಪ್ಪ ಅವರ 164ನೇ ಜನ್ಮದಿನಾಚರಣೆ ಕಾರ್‍ಯಕ್ರಮ ಆಯೋಜಿಸಲಾಗಿತ್ತು.

ದೊಡ್ಡಬಳ್ಳಾಪುರ: ಇಲ್ಲಿನ ಮಾರುಕಟ್ಟೆ ಚೌಕದಲ್ಲಿರುವ ಲೋಕಸೇವಾನಿರತ ಡಿ.ಕೊಂಗಾಡಿಯಪ್ಪ ಅವರ ಪುತ್ಥಳಿ ಮುಂಭಾಗ ದೇವಾಂಗ ಮಂಡಲಿ ನೇತೃತ್ವದಲ್ಲಿ ಡಿ.ಕೊಂಗಾಡಿಯಪ್ಪ ಅವರ 164ನೇ ಜನ್ಮದಿನಾಚರಣೆ ಕಾರ್‍ಯಕ್ರಮ ಆಯೋಜಿಸಲಾಗಿತ್ತು.

ಶಾಸಕ ಧೀರಜ್ ಮುನಿರಾಜ್ ಮಾತನಾಡಿ, ದೊಡ್ಡಬಳ್ಳಾಪುರದ ಇಂದಿನ ಪ್ರಗತಿ ಅವರ ದೂರದೃಷ್ಟಿಯ ಫಲ. ಈ ನಗರವನ್ನು ಕೈಗಾರಿಕಾ ಕೇಂದ್ರವಾಗಿ ಅಭಿವೃದ್ಧಿ ಮಾಡುವ ಚಿಂತನೆ ಬಿತ್ತಿದ ಪುಣ್ಯಪುರುಷರು. ಅವರ ನಿಸ್ವಾರ್ಥ ಚಿಂತನೆಗಳು ನಮ್ಮ ಯುವಪೀಳಿಗೆಯ ಮಾರ್ಗದರ್ಶಿ ಸೂತ್ರಗಳಾಗಬೇಕು ಎಂದರು.

ದೇವಾಂಗ ಮಂಡಲಿ ಅಧ್ಯಕ್ಷ ಎಂ.ಜಿ.ಶ್ರೀನಿವಾಸ್ ಮಾತನಾಡಿ, ಒಬ್ಬ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಊರಿನ ಅಭಿವೃದ್ಧಿಯ ಕನಸು ಕಂಡ ಅವರ ಜೀವನಗಾಥೆಯೇ ರೋಚಕ. ಅವರ ಪುತ್ಥಳಿಯನ್ನು ನಗರಸಭೆ ನೂತನ ಕಟ್ಟಡದ ಮುಂಭಾಗ ಸ್ಥಾಪಿಸುವ ಚಿಂತನೆಗೆ ಪುಷ್ಠಿ ದೊರೆಯಬೇಕು. ಈ ಹಂತದಲ್ಲಿ ಶಾಸಕರು ಸೇರಿದಂತೆ ಆಡಳಿತಶಾಹಿಯ ಒತ್ತಾಸೆ ಅಗತ್ಯವಿದೆ ಎಂದರು.

ದೇವಾಂಗ ಮಂಡಲಿ ಉಪಾಧ್ಯಕ್ಷರಾದ ಬಿ.ಜಿ.ಅಮರನಾಥ್, ಗೋಪಾಲ್, ಗೌ.ಕಾರ್‍ಯದರ್ಶಿ ಪ್ರೊ.ಎಂ.ಜಿ.ಅಮರನಾಥ್, ಸಹಕಾರ್‍ಯದರ್ಶಿ ಯೋಗ ನಟರಾಜ್, ಖಜಾಂಚಿ ಅಖಿಲೇಶ್, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ವಿ.ಎಸ್.ರವಿಕುಮಾರ್, ದೇವಾಂಗ ಮಂಡಲಿಯ ಪದಾಧಿಕಾರಿಗಳು, ನಗರಸಭೆ ಪ್ರತಿನಿಧಿಗಳು ಪಾಲ್ಗೊಂಡರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

5-6 ತಿಂಗಳಿಂದ ನೀರು ಪೋಲು: ಕ್ರಮಕೈಗೊಳ್ಳದ ಅಧಿಕಾರಿಗಳು
ತಮ್ಮ ಮೇಲಿನ ಆರೋಪ ಸುಳ್ಳು, ಆಧಾರ ರಹಿತ : ಮುನೀಶ್‌ ಮೌದ್ಗಿಲ್‌