-ಪದವಿ ಪೂರ್ವ ಕಾಲೇಜು ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಎನ್. ಮರಿಸ್ವಾಮಿ----
ಕನ್ನಡಪ್ರಭ ವಾರ್ತೆ ಮೂಗೂರುಪ್ರತಿಯೊಬ್ಬ ವಿದ್ಯಾರ್ಥಿ ತನ್ನದೇ ಆದ ಗುರಿಯನ್ನು ಇಟ್ಟುಕೊಂಡಾಗ ಮಾತ್ರ ಆತ ತನ್ನ ಜೀವನದಲ್ಲಿ ಏನ್ನಾದರೂ ಸಾದಿಸುತ್ತಾನೇ ಎಂದು ಜಿಲ್ಲೆ ಪದವಿ ಪೂರ್ವ ಕಾಲೇಜು ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಎನ್. ಮರಿಸ್ವಾಮಿ ರವರು ಹೇಳಿದರು
ಮೂಗೂರಿನ ಕೆಪಿಎಸ್ ಶಾಲೆಯ ಕಾಲೇಜು ವಿಭಾಗದ ಆವರಣದಲ್ಲಿ 2023 -24 ನೇ ಸಾಲಿನ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ಸಮಾರೋಪ ಸಮಾರಂಭ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಾಗಿ ಬೀಳ್ಕೊಡುಗೆ ಸಮಾರಂಭವನ್ನು ಅವರು ಉದ್ಘಾಟಿಸಿ ಮಾತನಾಡಿದರು.ಶಿಕ್ಷಣ ಇಲ್ಲದಿದ್ದರೆ ಏನು ಸಾಧಿಸುವುದಕ್ಕೆ ಆಗುವುದಿಲ್ಲ, ಕಾಲೇಜಿಗೆ ಬಂದು ವಿದ್ಯಾರ್ಥಿಗಳು ಟೈಂ ಪಾಸ್ ಮಾಡಿಕೊಂಡು ಹೋಗಬಾರದು, ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯಾರ್ಥಿಗಳು ಫಲಿತಾಂಶ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಬೇಕು, ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣವೇ ಜೀವನ ಓದುವ ಕಡೆ ಗಮನ ಹರಿಸಿ ಎಂದರು.
ಮೈಸೂರು ಜಿಲ್ಲೆ ಪ್ರಾಂಶುಪಾಲರ ಸಂಘದ ಅಧ್ಯಕ್ಷ, ಕವಲಂದೆ ಕಾಲೇಜು ಪ್ರಾಂಶುಪಾಲ ಡಾ. ಸಿದ್ದರಾಜು ಮಾತನಾಡಿದರು.ಕಾಲೇಜು ವತಿಯಿಂದ ವರ್ಷದ ಉತ್ತಮ ವಿದ್ಯಾರ್ಥಿಗಳಿಗೆ ಎಲ್ಲ ವಿಭಾಗದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಲಾಯಿತು. ಕ್ರೀಡೆಯಲ್ಲಿ ಭಾಗವಹಿಸಿದ ವಿಜೇತ ವಿದ್ಯಾರ್ಥಿಗಳಿಗೆ ಕಾಲೇಜು ವತಿಯಿಂದ ಪ್ರಶಸ್ತಿಗಳನ್ನು ನೀಡಲಾಯಿತು.
ಪ್ರಾಂಶುಪಾಲ ಬಿ. ಮಹೇಶ, ಸಿಬಿಸಿ ಅಧ್ಯಕ್ಷ ಎಂ.ಎಂ. ಶಿವಕುಮಾರ, ನರಸೀಪುರ ಕಾಲೇಜು ಪ್ರಾಂಶುಪಾಲ ಮೋಹನ್ ಕುಮಾರ್, ಉಪ ಪ್ರಾಂಶುಪಾಲ ಪುಟ್ಟಸ್ವಾಮಿ, ಉಪನ್ಯಾಸಕ ಮಂಗಳಮೂರ್ತಿ, ಕೆಪಿಎಸ್ ಶಾಲೆಯ ಉಪಾಧ್ಯಕ್ಷ ಎಂ.ಎನ್. ಸೋಮಣ್ಣ, ಸಿಬಿಸಿ ಸದಸ್ಯರಾದ ಎಂ.ಬಿ. ಪರಶಿವಮೂರ್ತಿ, ದೀಪ, ಶಿವಾನಿ, ಉಪನ್ಯಾಸಕರಾದ ರಾಜೇಶ, ನಾಗಸ್ವಾಮಿ, ಪುಟ್ಟ ಅರಸು, ಮಾದಪ್ಪ, ಲಕ್ಷ್ಮೀ ಮಂಜಳ ಲತಾ, ಧನಸೆಲ್ವ ಇದ್ದರು.