ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಪಟ್ಟಣದ ಡಿವೈಎಸ್ಪಿ ಕಚೇರಿಗೆ ಆಗಮಿಸಿದ ಚಂದನ್ , ಬಿ.ಎಸ್. ಅನಿಲ್ ಪತ್ನಿ ರಕ್ಷಿತಾ ಅವರು ತಾಲೂಕಿನ ಬೆಳಗೊಳ ಗ್ರಾಮದಲ್ಲಿ ವಾಸವಾಗಿರುವ ನನ್ನ ಪತಿ ಬಿ.ಎಸ್. ಅನಿಲ್ ಅವರು ಫೆ.5 ರಂದು ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಹಾಡುಹಗಲೇ ಆದಿಶೇಷ ಎಂಬ ವ್ಯಕ್ತಿ ಮಚ್ಚಿನಿಂದ ಹಲ್ಲೆ ಮಾಡಿ ಕೊಲೆಗೆ ಯತ್ನಿಸಿದ್ದಾನೆ.
ನನ್ನ ಗಂಡನ ಸಮಯ ಪ್ರಜ್ಞೆಯಿಂದ ಎಡಗೈ ಕೊಟ್ಟಿದ್ದರಿಂದ ತಲೆ ಅಥವಾ ಕುತ್ತಿಗೆ ಭಾಗಕ್ಕೆ ಬೀಳುತ್ತಿದ್ದ ಏಟು ಎಡಗೈನ ಮುಂಗೈಗೆ ಬಿದ್ದು, ಮುಂಗೈ ಮುರಿದಿದೆ. ಆ ವೇಳೆ ಕೆಆರ್ಎಸ್ ಪೊಲೀಸ್ ಠಾಣೆಗೆ ವಿಷಯ ತಿಳಿಸಿದ್ದರಿಂದ ಸ್ಥಳಕ್ಕೆ ಆಗಮಿಸಿದ ಪೊಲೀಸರು ಸ್ಥಳದಲ್ಲೇ ಇದ್ದ ಆರೋಪಿ ಆದಿಶೇಷನನ್ನು ವಶಕ್ಕೆ ಪಡೆದಿದ್ದಾರೆ.ನಂತರ ಆತನನ್ನು ಪೊಲೀಸರೇ ಬಿಟ್ಟು ಕಳುಹಿಸಿ ಕೃತ್ಯಕ್ಕೆ ಬಳಸಿದ್ದ ಮಚ್ಚಿನ ಸಹಿತ ತಲೆ ಮರೆಸಿಕೊಂಡಿದ್ದಾನೆ ಎಂದು ನ್ಯಾಯಾಲಯಕ್ಕೆ ಸಲ್ಲಿಸಿರುವ ವರದಿಯಲ್ಲಿ ಸುಳ್ಳು ಹೇಳಿಕೆ ನೀಡಿದ್ದಾರೆ. ಆದರೆ, ಘಟನಾ ಸ್ಥಳದಿಂದಲೇ ಆರೋಪಿ ಆದಿಶೇಷನನ್ನು ಪೊಲೀಸರು ವಶಕ್ಕೆ ಪಡೆದು ಎಳೆದ್ಯೊಯ್ಯುತ್ತಿರುವ ದೃಷ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಹಾಗಾಗಿ ಕೆಆರ್ಎಸ್ ಪೊಲೀಸ್ ಅಧಿಕಾರಿಗಳ ವಿರುದ್ಧ ಸಮಗ್ರ ತನಿಖೆ ನಡೆಸಿ ಕ್ರಮ ಜರುಗಿಸಬೇಕು ಜೊತೆಗೆ ನಮ್ಮ ಕುಟುಂಬಕ್ಕೆ ಪ್ರಾಣ ಭಯವಿದ್ದು, ರಕ್ಷಣೆ ನೀಡುವಂತೆ ಡಿವೈಎಸ್ಪಿ ಯು.ಡಿ ಕೃಷ್ಣಕುಮಾರ್ ಅವರ ಬಳಿ ರಕ್ಷಿle ಮನವಿ ಮಾಡಿದರು.--------------
9ಕೆಎಂಎನ್ ಡಿ21,22ಶ್ರೀರಂಗಪಟ್ಟಣದ ಡಿವೈಎಸ್ಪಿ ಕಚೇರಿಗೆ ಹಿಂದೂ ಜಾಗರಣಾ ವೇದಿಕೆ ಜಿಲ್ಲಾ ಸಂಚಾಲಕ ಚಂದನ್ ಜೊತೆಗೆ ಹಲ್ಲೆಗೊಳಗಾಗಿದ್ದ ಬಿ.ಎಸ್ ಅನಿಲ್ ಪತ್ನಿ ರಕ್ಷಿತಾ ಭೇಟಿ ನೀಡಿ ಕೆಆರ್ಎಸ್ ಠಾಣಾ ಅಧಿಕಾರಿಗಳ ವಿರುದ್ಧ ದೂರು ಸಲ್ಲಿಸಿದರು.
----------------ಘಟನಾ ಸ್ಥಳದಿಂದಲೇ ಆರೋಪಿ ಆದಿಶೇಷನನ್ನು ಪೊಲೀಸರು ವಶಕ್ಕೆ ಪಡೆದು ಎಳೆದ್ಯೊಯ್ಯುತ್ತಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿರುವುದು.