ಸಮಾಜಮುಖಿ ಸೇವೆಯು ತ್ರಿಚಕ್ರ ಸಾರಥಿಗಳ ಧ್ಯೇಯವಾಗಲಿ: ರಾಜೇಶ್ ಎನ್.ಎಸ್

KannadaprabhaNewsNetwork |  
Published : Apr 03, 2026, 02:45 AM IST
ನಿವೃತ್ತ ಮುಖ್ಯ ಗುರು ಪುಂಗವ ಗೌಡ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು  | Kannada Prabha

ಸಾರಾಂಶ

ಸುಬ್ರಹ್ಮಣ್ಯದ ಕುಕ್ಕೆಶ್ರೀ ಅಟೋ ಚಾಲಕ ಮಾಲಕರ ಸಂಘದ 2026-27ನೇ ಸಾಲಿನ ಅಧ್ಯಕ್ಷ ಭುವನೇಶ್ ಅಗೋಳಿಕಜೆ ಮತ್ತು ತಂಡದ ಪದಗ್ರಹಣ ಸಮಾರಂಭ

ಸುಬ್ರಹ್ಮಣ್ಯ: ಜನ ಹಿತ ಕಾರ್ಯ ತ್ರಿಚಕ್ರ ಸಾರಥಿಗಳ ಧ್ಯೇಯವಾಗಬೇಕು ಎಂದು ನಿಕಟಪೂರ್ವ ಗ್ರಾ.ಪಂ ಉಪಾಧ್ಯಕ್ಷ ರಾಜೇಶ್ ಎನ್.ಎಸ್ ಹೇಳಿದರು.

ಸುಬ್ರಹ್ಮಣ್ಯದ ಕುಕ್ಕೆಶ್ರೀ ಅಟೋ ಚಾಲಕ ಮಾಲಕರ ಸಂಘದ 2026-27ನೇ ಸಾಲಿನ ಅಧ್ಯಕ್ಷ ಭುವನೇಶ್ ಅಗೋಳಿಕಜೆ ಮತ್ತು ತಂಡದ ಪದಗ್ರಹಣ ಸಮಾರಂಭವನ್ನು ಬುಧವಾರ ಉದ್ಘಾಟಿಸಿ ಮಾತನಾಡಿದರು.

ಪದಪ್ರಧಾನ: ನೂತನ ಅಧ್ಯಕ್ಷ ಭುವನೇಶ್ ಅಗರಿಕಜೆ ಅವರಿಗೆ ಸ್ಥಾಪಕಾಧ್ಯಕ್ಷ ಉಮೇಶ್ ಕೆ.ಎನ್, ನಿರ್ಗಮನ ಸಂಘಟನಾ ಕಾರ್ಯದರ್ಶಿ ಯಶೋಧರ ಕಂದಡ್ಕ, ನಿರ್ಗಮನ ಕಾರ್ಯದರ್ಶಿ ರಮಾಕಾಂತ ನಾಯಕ್ ಅಧಿಕಾರ ಹಸ್ತಾಂತರಿಸಿದರು. ನೂತನ ಕಾರ್ಯದರ್ಶಿ ವಿಘ್ನೇಶ್ ದೇವರಗದ್ದೆ, ಕೋಶಾಧಿಕಾರಿ ಗಣೇಶ್ ಆಗೋಳಿಕಜೆ, ಉಪಾಧ್ಯಕ್ಷ ಶರತ್ ದೇವರಗದ್ದೆ, ಜತೆ ಕಾರ್ಯದರ್ಶಿ ಸದಾನಂದ ದೇವರಗದ್ದೆ, ಸಂಘಟನಾ ಕಾರ್ಯದರ್ಶಿ ಕುಮಾರ್ ನಾಯ್ಕ್ ನೂಚಿಲ, ನಿರ್ದೇಶಕರಾದ ಪ್ರಶಾಂತ್ ಮುಜೂರು, ದಿನೇಶ್ ಗಾಂಗೇಯ, ಮಹೇಶ್ ಗುಡ್ಡೆಮನೆ, ಉಷಾ ಕುಮಾರ್ ಕುಲ್ಕುಂದ, ತೇಜಕುಮಾರ್ ಆಗೋಳಿಕಜೆ, ಮಹೇಶ್‌ಚಂದ್ರ ನೂಚಿಲ ಪದಪ್ರಧಾನ ಮಾಡಿದರು.

ಸನ್ಮಾನ: ಸಮಾರಂಭದಲ್ಲಿ ಹಿರಿಯ ಅಟೋ ಮಾಲಕ ಮತ್ತು ನಿವೃತ್ತ ಮುಖ್ಯಗುರು ಪುಂಗವ ಗೌಡ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸ್ಥಾಪಕಾಧ್ಯಕ್ಷ ಉಮೇಶ್ ಕೆ.ಎನ್ ಸಭಾಧ್ಯಕ್ಷತೆ ವಹಿಸಿದ್ದರು. ಸುಬ್ರಹ್ಮಣ್ಯ ಪ್ರೆಸ್ ಕ್ಲಬ್ ಅಧ್ಯಕ್ಷ ರತ್ನಾಕರ ಸುಬ್ರಹ್ಮಣ್ಯ, ಗ್ರಾ.ಪಂ ಮಾಜಿ ಉಪಾಧ್ಯಕ್ಷ ದಿನೇಶ್ ಬಿ.ಎನ್, ರವಿ ಕಕ್ಕೆಪದವು ಸಮಾಜ ಸೇವಾ ಟ್ರಸ್ಟ್ ಅಧ್ಯಕ್ಷ ಡಾ.ರವಿ ಕಕ್ಕೆಪದವು, ಸುಬ್ರಹ್ಮಣ್ಯ- ಐನೆಕಿದು ಸಹಕಾರಿ ಸಂಘದ ಅಧ್ಯಕ್ಷ ಎಚ್.ಎಲ್.ವೆಂಕಟೇಶ್, ಕುಕ್ಕೆಶ್ರೀ ಅಟೋ ಸಂಘದ ಸ್ಥಾಪಕಾಧ್ಯಕ್ಷ ಕೇಶವ ಅರಂಪಾಡಿ ಮುಖ್ಯ ಅತಿಥಿಗಳಾಗಿದ್ದರು. ನಿಯೋಜಿತ ಅಧ್ಯಕ್ಷ ಭುವನೇಶ್ ಅಗೋಳಿಕಜೆ, ಕಾರ್ಯದರ್ಶಿ ವಿಘ್ನೇಶ್ ದೇವರಗದ್ದೆ, ನಿರ್ಗಮನ ಸಂಘಟನಾ ಕಾರ್ಯದರ್ಶಿ ಯಶೋಧರ ಕಂದಡ್ಕ, ನಿರ್ಗಮನ ಕಾರ್ಯದರ್ಶಿ ರಮಾಕಾಂತ್ ನಾಯಕ್ ವೇದಿಕೆಯಲ್ಲಿದ್ದರು.

ರಾಜ್ಯ ವಾಲಿಬಾಲ್ ತೀರ್ಪುಗಾರ ದೀಪಕ್ ನಂಬಿಯಾರ್ ನಿರೂಪಿಸಿದರು. ಕಾರ್ಯದರ್ಶಿ ವಿಘ್ನೇಶ್ ದೇವರಗದ್ದೆ ಸ್ವಾಗತಿಸಿದರು. ಸಂಘಟನಾ ಕಾರ್ಯದರ್ಶಿ ಕುಮಾರ ನಾಯ್ಕ್ ನೂಚಿಲ ವಂದಿಸಿದರು. ಸದಸ್ಯ ಚಂದ್ರಶೇಖರ ಮಾನಾಡು ಪ್ರಾರ್ಥನೆ ಹಾಡಿದರು. ಕಾರ್ಯಕ್ರಮದಲ್ಲಿ ಸಂಘದ ಸದಸ್ಯರು ಹಾಗೂ ಗಣ್ಯರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮೇ 8 ರಂದು ರಾಜ್ಯಮಟ್ಟದ ರೈತ ಜಾಗೃತಿ ಸಮಾವೇಶ
ಪ್ರಧಾನಿ ಬಗ್ಗೆ ಮಾತನಾಡಲು ಕಾಂಗ್ರೆಸ್ಸಿನವರಿಗೆ ನೈತಿಕತೆ ಇಲ್ಲ: ಯತ್ನಾಳ