ಕನ್ನಡಪ್ರಭ ವಾರ್ತೆ ಮಂಡ್ಯ
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾ ಮಂದಿರದಲ್ಲಿ ಮಧ್ಯಾಹ್ನ 3 ಗಂಟೆಗೆ ಸಭಾ ಕಾರ್ಯಯಕ್ರಮವನ್ನು ಕೆಎಎಸ್ ಅಧಿಕಾರಿ ಯೋಗಾನಂದ ಉದ್ಘಾಟಿಸುವರು. ಶಾಸಕ ಪಿ.ರವಿಕುಮಾರ್ ಅಧ್ಯಕ್ಷತೆ ವಹಿಸುವರು. ತಿಮ್ಮದಾಸ್ ಗ್ರೂಪ್ ಮಾಲೀಕರಾದ ಸಿ.ಟಿ.ಶಂಕರ್ ವಿಶೇಷ ಆಹ್ವಾನಿತರಾಗಿ ಭಾಗವಹಿಸುವರು ಎಂದರು.
ಜಂಟಿ ಕೃಷಿ ನಿರ್ದೇಶಕ ವಿ.ಎಸ್.ಅಶೋಕ್ ಅವರಿಗೆ ರೈತ ಮಿತ್ರ, ಮಮತ ನಸಿಂಗ್ ಹೋಂ ಮಾಲೀಕ ಡಾ.ಎಚ್.ಸಿ.ಆನಂದ್ ಅವರಿಗೆ ವೈದ್ಯ ರತ್ನ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಅಂಕೇಗೌಡರಿಗೆ ಪುಸ್ತಕ ರತ್ನ ಹಾಗೂ ಜನಪದ ಗಾಯಕ ಮತ್ತು ಕೀರ್ತನಕಾರ ಶಿವಾರ ಉಮೇಶ್ ಅವರಿಗೆ ಕಲಾ ರತ್ನ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದರು.ಇದೇ ವೇಳೆ ಜಿಪಂ ಮಾಜಿ ಅಧ್ಯಕ್ಷ ತಗ್ಗಹಳ್ಳಿ ವೆಂಕಟೇಶ್, ಕ.ರಾ.ಸ.ನೌ.ಸಂಘದ ಉಪಾಧ್ಯಕ್ಷ ಶಂಭುಗೌಡ, ಕೆಎಸ್ಒಯು ಸಹಾಯಕ ಕುಲಸಚಿವ ಸಿ.ಕೆ.ಪುಟ್ಟಸ್ವಾಮಿ, ಖಾದಿ ಗ್ರಾಮೋದ್ಯೋಗಿ ಮಂಡಳಿ ಜಿಲ್ಲಾ ಅಭಿವೃದ್ಧಿ ಅಧಿಕಾರಿ ಸುಧಾಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ವಿ. ನಂದೀಶ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಮನುಜಶ್ರೀ, ಸಾಯಿ ಎಲೆಕ್ಟ್ರಾನಿಕ್ ಮಾಲೀಕ ಡಿ.ಪಿ.ಸ್ವಾಮಿ, ಬಿಜೆಪಿ ಮುಖಂಡ ವಸಂತ್ ಕುಮಾರ್, ರಂಗಭೂಮಿ ನಿರ್ದೇಶಕ ಅಂಕರಾಜು ಅವರು ಅಭಿನಂದಿತರನ್ನು ಅಭಿನಂದಿಸುವರು. ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ. ಜಯಪ್ರಕಾಶ್ ಗೌಡ ಅಭಿನಂದನಾ ನುಡಿಗಳಾಡುವರು. ಜಿಪಂ ಮಾಜಿ ಸದಸ್ಯ ಎನ್.ಶಿವಣ್ಣ ಚಂದಗಾಲು ಅಭಿನಂದಿತರನ್ನು ಕುರಿತು ಮಾತನಾಡುವರು ಎಂದು ವಿವರಿಸಿದರು.
ನಾಟಕ ಪ್ರದರ್ಶನ ಸಂಬಂಧ ಮೇ 21 ರಂದು ಸಾತನೂರು, ಕಾರಸವಾಡಿ, ಕೆರಗೋಡು, ಹೊಡಾಘಟ್ಟ, ಕೀಲಾರ ಹಾಗೂ ಹೊಸಹಳ್ಳಿ ಸೇರಿದಂತೆ ಇತರ ಗ್ರಾಮಗಳಲ್ಲಿ ಪ್ರಚಾರ ಹಮ್ಮಿಕೊಳ್ಳಲಾಗಿದೆ. ಕಲಾ ಪ್ರೋತ್ಸಕರು ಹೆಚ್ಚಿನ ಸಂಖ್ಯೆಯಲ್ಲಿ ನಾಟಕ ಪ್ರದರ್ಶನ ವೀಕ್ಷಿಸಿ ನಾಟಕ ಯಶಸ್ವಿಗೆ ಸಹಕರಿಸಬೇಕೆಂದು ಮನವಿ ಮಾಡಿದರು.
ಮೇ 22 ರಿಂದ ವಿನೂತನ ನಾಟಕೋತ್ಸವ: ಚ.ನಾರಾಯಣಸ್ವಾಮಿ
ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಂಗಭೂಮಿ ಕೇವಲ ಮನರಂಜನೆ ಮಾಧ್ಯಮವಲ್ಲ. ಅದು ಸಮಾಜದ ಕನ್ನಡಿಯಾಗಿದೆ. ಸಮಾಜಮುಖಿಯಾಗಿ ನಾವುಗಳು ಬದುಕಬೇಕಾದರೆ ಪ್ರಜ್ಞಾವಂತಿಕೆ ಅಗತ್ಯ ಎಂದರು.ಜೀವನಕ್ಕೆ ಉತ್ತಮ ಸಂದೇಶ ನೀಡುವ ನಮ್ಮ ಗಮ್ಯ ರಂಗಭೂಮಿ ಕಲಾಯಜ್ಞವನ್ನು ಕಳೆದ 8 ವರ್ಷಗಳಿಂದ ನಿರಂತರವಾಗಿ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಪ್ರದರ್ಶಿಸುತ್ತಾ ಬಂದಿದ್ದೇವೆ. ನಾಟಕ ನೋಡಲು ಉಚಿತ ಪ್ರವೇಶವಿದ್ದು, ಮೇ 22ರ ಶುಕ್ರವಾರ ಪಟ್ಟಣದ ಶಿಕ್ಷಕರ ಭವನದಲ್ಲಿ ಪ್ರತಿದಿನ ಸಂಜೆ 7 ಗಂಟೆಗೆ ಪ್ರದರ್ಶನವಿದೆ ಎಂದರು.