ಕುಟ್ರುಪಾಡಿ: ಐರ್ಲೆಂಡ್‌ನಲ್ಲಿ ಮೃತಪಟ್ಟ ಸಾಂಜೋ ಸುನಿಲ್ ಅಂತ್ಯಸಂಸ್ಕಾರ

KannadaprabhaNewsNetwork |  
Published : Mar 10, 2026, 03:45 AM IST
ಐಲೆಂಡ್‌ನಲ್ಲಿ ಪೆ.೧೯ ರಂದು ಮೃತಪಟ್ಟಿರುವ ಕಡಬ ತಾಲೂಕು ಕುಟ್ರುಪ್ಪಾಡಿ ಗ್ರಾಮದ ವಿಮಲಗಿರಿ ಇವಾಸಿ ಸುನಿಲ್ ಅವರು ಪುತ್ರ ಸಾಂಜೋ ಸುನಿಲ್ (೩೧)  | Kannada Prabha

ಸಾರಾಂಶ

ಐರ್ಲೆಂಡ್‌ನಲ್ಲಿ ಫೆ. ೧೯ರಂದು ಮೃತಪಟ್ಟ ಕಡಬ ತಾಲೂಕು ಕುಟ್ರುಪ್ಪಾಡಿ ಗ್ರಾಮದ ವಿಮಲಗಿರಿ ನಿವಾಸಿ ಸುನಿಲ್ ಅವರ ಪುತ್ರ ಸಾಂಜೋ ಸುನಿಲ್ (೩೧) ಅವರ ಪಾರ್ಥಿವ ಶರೀರ ಶನಿವಾರ ಸಂಜೆ ಅವರ ಮನೆಗೆ ತಲುಪಿದ್ದು, ಭಾನುವಾರ ವಿಮಲಗಿರಿ ಸೈಂಟ್ ಮೇರಿಸ್ ಮಲಂಕರ ಕ್ಯಾಥೊಲಿಕ್ ಚರ್ಚನ ಸ್ಮಶಾನದಲ್ಲಿ ಅಂತ್ಯಸಂಸ್ಕಾರ ನಡೆಯಿತು.

ಉಪ್ಪಿನಂಗಡಿ: ಐರ್ಲೆಂಡ್‌ನಲ್ಲಿ ಫೆ. ೧೯ರಂದು ಮೃತಪಟ್ಟ ಕಡಬ ತಾಲೂಕು ಕುಟ್ರುಪ್ಪಾಡಿ ಗ್ರಾಮದ ವಿಮಲಗಿರಿ ನಿವಾಸಿ ಸುನಿಲ್ ಅವರ ಪುತ್ರ ಸಾಂಜೋ ಸುನಿಲ್ (೩೧) ಅವರ ಪಾರ್ಥಿವ ಶರೀರ ಶನಿವಾರ ಸಂಜೆ ಅವರ ಮನೆಗೆ ತಲುಪಿದ್ದು, ಭಾನುವಾರ ವಿಮಲಗಿರಿ ಸೈಂಟ್ ಮೇರಿಸ್ ಮಲಂಕರ ಕ್ಯಾಥೊಲಿಕ್ ಚರ್ಚನ ಸ್ಮಶಾನದಲ್ಲಿ ಅಂತ್ಯಸಂಸ್ಕಾರ ನಡೆಯಿತು.

ಪಾರ್ಥಿವ ಶರೀರವು ವಿಮಾನ ಮೂಲಕ ಶನಿವಾರ ಮುಂಜಾನೆ ಬೆಂಗಳೂರು ತಲುಪಿದ್ದು, ಬಳಿಕ ಕುಟುಂಬಸ್ಥರು ಬೆಂಗಳೂರಿನಿಂದ ರಸ್ತೆ ಮಾರ್ಗ ಮೂಲಕ ಅಂಬ್ಯುಲೆನ್ಸ್ ನಲ್ಲಿ ತಂದಿದ್ದಾರೆ. ಐರ್ಲೆಂಡ್‌ನ ಡಬ್ಲಿನ್ ನಗರದ ಫಿಂಗಲಾಸ್ ಪ್ರದೇಶಲ್ಲಿರುವ ಮಲಂಕರ ಕ್ಯಾಥೊಲಿಕ್ ಚಾಪೆಲ್‌ನಲ್ಲಿ ಸಾಂಜೋ ಸುನಿಲ್ ಅಂತಿಮ ದರ್ಶನಕ್ಕೆ ಮಾ. ೪ರಂದು ವ್ಯವಸ್ಥೆ ಮಾಡಲಾಗಿತ್ತು. ಅಲ್ಲಿ ನೆಲೆಸಿರುವ ಭಾರತೀಯ ಸಮುದಾಯದವರು ಅಂತಿಮ ನಮನ ಸಲ್ಲಿಸಿದ್ದರು. ಸಾಂಜೋ ಸುನಿಲ್ ಐರ್ಲೆಂಡ್‌ನ ಡಬ್ಲಿನ್ ನಗರದ ಫಿಂಗ್ಲಾಸ್‌ನ ಚಾರ್ಲ್ಸ್‌ಟೌನ್ ಪ್ರದೇಶದಲ್ಲಿ ವಾಸವಾಗಿದ್ದರು.

ಸಾಂಜೋ ಸುನಿಲ್ ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದು, ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಐರಿಶ್ ಪೊಲೀಸರು ಪ್ರಾಥಮಿಕ ತನಿಖೆ ನಡೆಸಿ ಆತ್ಮಹತ್ಯೆ ಇರಬಹುದು ಎಂದು ಶಂಕಿಸಿದ್ದರು. ವರ್ಷದ ಹಿಂದೆಯಷ್ಟೆ ಸಾಂಜೋ ಸುನಿಲ್ ಅವರ ಮದುವೆಯಾಗಿತ್ತು. ಪತ್ನಿ ಲಿಷ್ಮಾ ಫಿಲಿಫ್ ಐರ್ಲೆಂಡ್ ನಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದಾರೆ. ಇಸ್ರೆಲ್ ನಲ್ಲಿ ಉದ್ಯೋಗದಲ್ಲಿದ್ದ ಸ್ಯಾಂಜೋ ಬದುವೆ ಬಳಿಕ ಅಲ್ಲಿನ ಕೆಲಸ ಬಿಟ್ಟು ಐರ್ಲೆಂಡ್‌ನಲ್ಲಿ ಕೆಲಸ ಮಾಡುವುದಾಗಿ ತಿಂಗಳ ಹಿಂದೆಯಷ್ಟೆ ಅಲ್ಲಿಗೆ ತೆರಳಿದ್ದರು ಎಂದು ತಿಳಿದುಬಂದಿದೆ. ಮೃತರು ಪತ್ನಿ, ತಂದೆ, ತಾಯಿ ಮತ್ತು ಇಬ್ಬರು ಸಹೋದರರನ್ನು ಅಗಲಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಾಟಿ ವೈದ್ಯೆ ಸಾಧನೆ: ಕಬ್ಬಿನಾಲೆ ಹಿರಿ ಜೀವದ ಕಾರ್ಯ ರಾಜ್ಯಕ್ಕೇ ಮಾದರಿ
ಗಲ್ಫ್‌ ಕನ್ನಡಿಗರ ರಕ್ಷಣೆಗೆ ಸಂಸದ ಕೋಟ ಮನವಿ