ಮಲೆನಾಡಿನ ಪರಿಸರವನ್ನು ತಮ್ಮಗ್ರಂಥಗಳಲ್ಲಿ ಸುಂದರವಾಗಿ ದಾಖಲಿಸಿದ್ದಾರೆ ಕುವೆಂಪು: ದೇವೇಂದ್ರ ನಾಯಕ್

KannadaprabhaNewsNetwork |  
Published : Nov 24, 2025, 02:30 AM IST
ನರಸಿಂಹರಾಜಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಅಗ್ನಿ ಶಾಮಕ ಠಾಣೆಯಲ್ಲಿ ನಡೆದ ನಾಡಗೀತೆಗೆ 100  ವರ್ಷ ತುಂಬಿದ ಸಂಭ್ರಮ ಕಾರ್ಯಕ್ರಮವನ್ನು ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತಶೆಟ್ಟಿ ಉದ್ಘಾಟಿಸಿದರು. | Kannada Prabha

ಸಾರಾಂಶ

ನರಸಿಂಹರಾಜಪುರನಾಡ ಗೀತೆ ಬರೆದ ಮೇರು ಕವಿ ಕುವೆಂಪು ಅವರು ತಮ್ಮ ಗ್ರಂಥಗಳಲ್ಲಿ ಮಲೆನಾಡಿನ ಪಶ್ಚಿಮ ಘಟ್ಟಗಳ ಚಿತ್ರಣವನ್ನು ಸುಂದರವಾಗಿ ದಾಖಲಿಸಿದ್ದಾರೆ ಎಂದು ಅಗ್ನಿಶಾಮಕ ಠಾಣಾಧಿಕಾರಿ ದೇವೇಂದ್ರ ನಾಯಕ್ ತಿಳಿಸಿದರು.

- ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಕನ್ನಡ ನಾಡಗೀತೆಗೆ 100 ವರ್ಷ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

.22. ನಾಡ ಗೀತೆ ಬರೆದ ಮೇರು ಕವಿ ಕುವೆಂಪು ಅವರು ತಮ್ಮ ಗ್ರಂಥಗಳಲ್ಲಿ ಮಲೆನಾಡಿನ ಪಶ್ಚಿಮ ಘಟ್ಟಗಳ ಚಿತ್ರಣವನ್ನು ಸುಂದರವಾಗಿ ದಾಖಲಿಸಿದ್ದಾರೆ ಎಂದು ಅಗ್ನಿಶಾಮಕ ಠಾಣಾಧಿಕಾರಿ ದೇವೇಂದ್ರ ನಾಯಕ್ ತಿಳಿಸಿದರು.

ಶನಿವಾರ ಜೈಲ್ ರಸ್ತೆಯಲ್ಲಿರುವ ಅಗ್ನಿ ಶಾಮಕ ಠಾಣೆ ಆವರಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಏರ್ಪಡಿಸಿದ್ದ ಕನ್ನಡ ನಾಡಗೀತೆಗೆ 100 ವರ್ಷದ ಸಂಭ್ರಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನಮ್ಮ ಮಾತೃ ಭಾಷೆ ಕನ್ನಡವನ್ನು ಪ್ರತಿಯೊಬ್ಬರೂ ಪ್ರೀತಿಸಬೇಕು. ಕುವೆಂಪು ಅವರು ಪಕ್ಕದ ಕೊಪ್ಪ ತಾಲೂಕಿನಲ್ಲಿ ಹುಟ್ಟಿದ್ದರೂ ಎಂಬುದು ನಮಗೆ ಹೆಮ್ಮೆಯಾಗುತ್ತದೆ. ಪ್ರತಿಯೊಬ್ಬರೂ ಕುವೆಂಪು ಹಾಗೂ ಇತರ ಸಾಹಿತಿಗಳ ಬರೆದ ಗ್ರಂಥ ಓದಬೇಕು ಎಂದು ಸಲಹೆ ನೀಡಿದರು.

ತಾಲೂಕು ಕಸಾಪ ಅಧ್ಯಕ್ಷ ಎಚ್‌.ಎಸ್.ಪೂರ್ಣೇಶ್ ಬದುಕು ಅಂದು ಮತ್ತು ಇಂದು ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿ, ಕುವೆಂಪು ಬರೆದ ನಾಡಗೀತೆಗೆ 100 ವರ್ಷ ತುಂಬಿದ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ತಾಲೂಕು ಕ.ಸಾ.ಪ ದಿಂದ ಶಾಲೆಗಳಲ್ಲಿ ಸಾಮೂಹಿಕ ನಾಡಗೀತೆ ಸ್ಪರ್ಧೆ ಏರ್ಪಡಿಸಲಾಗುವುದು. ಕನ್ನಡ ಭಾಷೆಗಳಲ್ಲಿ ಬೇರೆ ಭಾಷೆ ಪದಗಳು ಸಹ ಸೇರಿ ಕೊಂಡಿದೆ. ಸಾದ್ಯವಾದಷ್ಟು ಕನ್ನಡದಲ್ಲೇ ಮಾತನಾಡೋಣ. ದೇಶದಲ್ಲಿ ಯೋಧರು,ವೈದ್ಯರು, ಪೊಲೀಸರು, ಅಗ್ನಿ ಶಾಮಕದಳದವರು ಹಾಗೂ ರೈತರ ಸೇವೆ ಅನನ್ಯವಾದುದು. ಅಗ್ನಿ ಶಾಮಕದಳದಲ್ಲಿ ಸಾಹಿತಿಗಳಿದ್ದಾರೆ. ಅವರನ್ನು ಕ.ಸಾ.ಪ ದಿಂದ ಪ್ರೋತ್ಸಾಹಿಸಲಾಗುವುದು ಎಂದರು.

ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತಶೆಟ್ಟಿ ಉದ್ಘಾಟಿಸಿ ಮಾತನಾಡಿ, ನವಂಬರ್ ತಿಂಗಳು ಕನ್ನಡಿಗರಿಗೆ ಹಬ್ಬವಿದ್ದಂತೆ. ಕನ್ನಡ ಎಂದರೆ ಅಸ್ಮಿತೆ,ನಮ್ಮ ಸಂಸ್ಕೃತಿಯಾಗಿದೆ. ಕನ್ನಡ ಭಾಷೆ ಕಲಿತವರಿಗೆ ಜೀವನ ಕಟ್ಟಲು ಸುಲಭ ವಾಗುತ್ತದೆ.ಆದರೆ, ಇಂಗ್ಲೀಷ್ ಕೇವಲ ಅಂಕಗಳಿಸಿಕೊಡುತ್ತದೆ. ಕನ್ನಡ ಮಾದ್ಯಮದಲ್ಲಿ ಓದಿದ ಅನೇಕರು ಇಂದು ದೊಡ್ಡ ಹುದ್ದೆಯಲ್ಲಿದ್ದಾರೆ ಎಂದರು.

ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಮಹಿಳಾ ಘಟಕದ ಅಧ್ಯಕ್ಷೆ ಭಾಗ್ಯ ನಂಜುಂಡಸ್ವಾಮಿ ಮಾತನಾಡಿ,1924 ರಲ್ಲಿ ಕುವೆಂಪು ಅವರ ನಾಡಗೀತೆ ರಚನೆ ಮಾಡಿದ್ದರು.2004 ರಲ್ಲಿ ರಾಜ್ಯ ಸರ್ಕಾರ ಅದನ್ನು ನಾಡಗೀತೆಯಾಗಿ ಅನುಮೋದನೆ ನೀಡಿದೆ.ಅದೇ ರೀತೆ ರವೀಂದ್ರ ನಾಥ ಠ್ಯಾಗೂರ್ ಬರೆದ ಒಂದೇ ಮಾತರಂ ಗೀತೆಗೆ 150 ವರ್ಷ ತುಂಬಿದೆ ಎಂದರು.

ಉಪನ್ಯಾಸಕ ಅಬ್ಲುಲ್ ವಹಾಬ್ ಪ್ರಾಸ್ತಾವಿಕವಾಗಿ ಮಾತನಾಡಿ, ರಾಜ್ಯದ ವಿವಿಧ ಕಡೆ ವಿವಿಧ ರೀತಿಯಲ್ಲಿ ಕನ್ನಡ ಭಾಷೆ ಮಾತನಾಡುತ್ತಾರೆ. ನಿಜವಾದ ಕನ್ನಡ ಎಂಬುದಿಲ್ಲ. ಎಲ್ಲವೂ ಕನ್ನಡ ಭಾಷೆಯೇ ಆಗಿದೆ. ತಮಿಳು ನಾಡಿನಲ್ಲಿ ತಮಿಳು ಭಾಷೆ ಯಲ್ಲಿ ಸೇರಿದ್ದ ವಿವಿಧ ಭಾಷೆ ತೆಗೆಯಲು ರಾಜ್ಯ ಸರ್ಕಾರ ಹಲವಾರು ಕಾರ್ಯಕ್ರಮ ಜಾರಿಗೆ ತಂದಿದೆ. ಅದೇ ರೀತಿಯಲ್ಲಿ ಕರ್ನಾಟದಲ್ಲೂ ಕನ್ನಡ ಭಾಷೆ ಜೊತೆ ಸೇರಿರುವ ಇತರ ಭಾಷೆಯ ಪದ ತೆಗೆಯಬೇಕು ಎಂದು ಒತ್ತಾಯಿಸಿದರು.

ಅತಿಥಿಗಳಾಗಿ ನಾಗಲಾಪುರ ಗ್ರಾಪಂ ಅಧ್ಯಕ್ಷೆ ರೀನಾ ಬೆನ್ನಿ,ಗ್ರಾಮ ಪಂಚಾಯಿತಿ ಸದಸ್ಯ ಕೆ.ಗಂಗಾಧರ್, ಕರ್ನಾಟಕ ರಕ್ಷಣಾ ವೇದಿಕೆ ಮಹಿಳಾ ಘಟಕದ ಅಧ್ಯಕ್ಷೆ ಪ್ರೇಮಶ್ರೀನಿವಾಸ್, ಜೇಸಿ ನಿಯೋಜಿತ ಅಧ್ಯಕ್ಷ ಆದರ್ಶ ಬಿ ಗೌಡ ಇದ್ದರು. ಭಾನುಮತಿ ಪ್ರಾರ್ಥಿಸಿದರು. ಅಗ್ನಿ ಶಾಮಕದಳ ನವೀನ್ ಸ್ವಾಗತಿಸಿದರು.

ಇದೇ ಸಂದರ್ಭದಲ್ಲಿ ಪ್ರಾಚ್ಯ ಪ್ರಜ್ಞೆ ಕಾರ್ಯಕ್ರಮದಲ್ಲಿ ಜಿಲ್ಲಾ ಮಟ್ಟದಲ್ಲಿ ಭಾಷಣ ಸ್ಪರ್ಧೆ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ವಿದ್ಯಾರ್ಥಿನಿ ಇ.ಪಿ. ದ್ರವ್ಯ, ಪ್ರಜಾಪ್ರಭುತ್ವ ಅಂಗದ ದಿನ ಕಾರ್ಯಕ್ರಮದಲ್ಲಿ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಬಿ.ಟಿ.ಪ್ರತೀಕ್ಷಾ ಅವರನ್ನು ಸನ್ಮಾನಿಸಲಾಯಿತು.ಪ್ರಶಾಂತಶೆಟ್ಟಿ,ರೀನಾ ಬೆನ್ನಿ, ಆದರ್ಶ ಬಿ ಗೌಡ ಅವರನ್ನು ಗೌರವಿಸಲಾಯಿತು.

PREV

Recommended Stories

ಕನ್ನಡ ಪತ್ರಿಕೆಗಳ ಸಂಗ್ರಹಕಾರ ‘ಪೇಪರ್ ಬ್ಯಾಂಕ್ ಶಿವಕುಮಾರ್’
ಮುಂದುವರಿದ ಉಪವಾಸ ಸತ್ಯಾಗ್ರಹ: ರೈತನ ಅರೋಗ್ಯದಲ್ಲಿ ಏರುಪೇರು