ನಿರ್ವಹಣೆ ಕೊರತೆ: ಅವ್ಯವಸ್ಥೆಯ ತಾಣವಾದ ಪಾರ್ಕ್‌

KannadaprabhaNewsNetwork |  
Published : Nov 14, 2024, 12:49 AM IST
೧೩ಕೆಎಲ್‌ಆರ್-೨ಕೋಲಾರದ ಟೇಕಲ್ ರಸ್ತೆಯಲ್ಲಿರುವ ಅಂಬೇಡ್ಕರ್ ಪಾರ್ಕಿನಲ್ಲಿ ಸಮರ್ಪಕ ನಿರ್ವಹಣೆಯಿಲ್ಲ ಹಾಳಾಗಿರುವ ಮಕ್ಕಳ ಆಟೋಟ ಪರಿಕರಗಳ ಚಿತ್ರ. | Kannada Prabha

ಸಾರಾಂಶ

ಜಿಲ್ಲೆಯಲ್ಲಿ ಕೋಲಾರ, ಮುಳಬಾಗಿಲು, ಕೆಜಿಎಫ್ ನಗರಸಭೆ, ಮಾಲೂರು ಶ್ರೀನಿವಾಸಪುರ, ಬಂಗಾರಪೇಟೆ ಪುರಸಭೆ ಹಾಗೂ ಕುರಗಲ್, ವೇಮಗಲ್ ಪಟ್ಟಣ ಪಂಚಾಯಿತಿಗಳು ಇವೆ, ಜಿಲ್ಲಾ ಕೇಂದ್ರ ಕೋಲಾರ ಸೇರಿದಂತೆ ತಾಲೂಕು ಕೇಂದ್ರಗಳಲ್ಲಿರುವ ಉದ್ಯಾನವನಗಳು ಉಪಯೋಗಕ್ಕೆ ಯೋಗ್ಯವಲ್ಲದಂತಾಗಿವೆ.

ಕನ್ನಡಪ್ರಭ ವಾರ್ತೆ ಕೋಲಾರಜಿಲ್ಲೆಯ ನಗರ, ಪುರಸಭೆ ಹಾಗೂ ಪಟ್ಟಣ ಭಾಗದಲ್ಲಿರುವ ಉದ್ಯಾವನಗಳು ಸ್ಥಳೀಯ ಸಂಸ್ಥೆಗಳಿಂದ ನಿರ್ವಹಣೆಯಿಲ್ಲದೆ ಸೋರಗುತ್ತಿವೆ. ಅಳವಡಿಸಲಾಗಿರುವ ಆಟೋಪಕರಣಗಳು ಹಾಳಾಗಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಮೌನಕ್ಕೆ ಶರಣಾಗಿದ್ದಾರೆ.

ವಯಸ್ಕರು, ವೃದ್ಧರು ವಾಯುವಿಹಾರ ಮಾಡಲು ಹಾಗೂ ಮಕ್ಕಳಿಗಾಗಿ ನಗರ, ಪುರಸಭೆ ಸೇರಿದಂತೆ ಗ್ರಾಮಗಳಲ್ಲಿರುವ ಉದ್ಯಾನವಗಳು ಅವ್ಯವಸ್ಥೆಗಳ ಕೂಪಗಳಾಗಿ ರೂಪುಗೊಂಡಿವೆ. ವಿವಿಧ ಯೋಜನೆಗಳ ಅನುದಾನದಡಿಯಲ್ಲಿ ಅಳವಡಿಸಲಾಗಿರುವ ಆಟೋಪಕರಣಗಳು ಹಾನಿಯಾಗಿದ್ದು, ಮಕ್ಕಳು ಆಟವಾಡಲು ಯೋಗ್ಯವಲ್ಲದ ರೀತಿಯಲ್ಲಿವೆ. ಸ್ಥಳೀಯ ಸಂಸ್ಥೆಗಳ ರ್ನಿಲಕ್ಷಕ್ಕೆ ಉದ್ಯಾನವನಗಳು ಒಳಗಾಗಿವೆ.ಹೆಸರಿಗಷ್ಟೇ ಪಾರ್ಕ್‌:

ಜಿಲ್ಲೆಯಲ್ಲಿ ಕೋಲಾರ, ಮುಳಬಾಗಿಲು, ಕೆಜಿಎಫ್ ನಗರಸಭೆ, ಮಾಲೂರು, ಶ್ರೀನಿವಾಸಪುರ, ಬಂಗಾರಪೇಟೆ ಪುರಸಭೆ ಹಾಗೂ ಕುರಗಲ್, ವೇಮಗಲ್ ಪಟ್ಟಣ ಪಂಚಾಯಿತಿಗಳು ಇವೆ, ಜಿಲ್ಲಾ ಕೇಂದ್ರ ಕೋಲಾರ ಸೇರಿದಂತೆ ತಾಲೂಕು ಕೇಂದ್ರಗಳಲ್ಲಿರುವ ಉದ್ಯಾನವನಗಳು ಉಪಯೋಗಕ್ಕೆ ಯೋಗ್ಯವಲ್ಲದಂತಾಗಿವೆ. ಇದರ ಪರಿಣಾಮ ಜನತೆ ಪಾರ್ಕ್‌ಗಳಿಗೆ ಹೋಗಲು ಹೆದರುವಂತ ಪರಿಸ್ಥಿತಿ ಎದುರಾಗಿದೆ. ಉದ್ಯಾನವನಗಳ ನಿರ್ವಹಣೆಗಾಗಿ ಸ್ಥಳೀಯ ಸಂಸ್ಥೆಗಳಿಂದ ಪ್ರತ್ಯೇಕ ಗಾರ್ಡನ್ ಸಿಬ್ಬಂದಿ, ಭದ್ರತಾ ಸಿಬ್ಬಂದಿಯನ್ನು ಸ್ಥಳೀಯ ಸಂಸ್ಥೆಗಳಿಂದಲೇ ನೇಮಕ ಮಾಡಲಾಗಿರುತ್ತದೆ. ಆದರೆ ಸರಿಯಾದ ಸಮಯಕ್ಕೆ ಸಬಂಳ ಆಗದ ಕಾರಣದಿಂದ ಸಿಬ್ಬಂದಿ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಇನ್ನು ಪೌರ ಕಾರ್ಮಿಕರು ವಾರಕ್ಕೆ ಒಂದೆರಡು ದಿನ ಸ್ವಚ್ಛತೆ ಮಾಡುತ್ತಾರೆ ಹೊರತು ನಿರ್ವಹಣೆ ಮಾಡುವವರು ಇಲ್ಲವಾಗಿದೆ.

ಪಾರ್ಕ್‌ನಲ್ಲಿ ಸ್ವಚ್ಛತೆ ಮರೀಚಿಕೆ

ಪಾರ್ಕ್‌ಗಳಲ್ಲಿ ಅಂತೂ ಸ್ವಚ್ಛತೆ ಮರಿಚೀಕೆಯಾಗಿದೆ. ಸುತ್ತಮುತ್ತಲಿನ ನಿವಾಸಿಗಳು ಪಾರ್ಕ್‌ಗಳ ಸಮೀಪದಲ್ಲಿ ಕಸದ ರಾಶಿ ಹಾಕುತ್ತಾರೆ. ಅದನ್ನು ನಾಯಿಗಳು ತಂದು ಪಾರ್ಕ್‌ನಲ್ಲಿ ಹಾಕಿ ಅಸ್ವಚ್ಛತೆ ಉಂಟು ಮಾಡುತ್ತಿವೆ. ನಗರ ಸ್ವಚ್ಛ ಮಾಡು ಪೌರಕಾರ್ಮಿಕರು ಉದ್ಯಾನವನಗಳನ್ನು ಸ್ವಚ್ಛ ಮಾಡಲು ಮುಂದಾಗುತ್ತಿಲ್ಲ. ಇದರಿಂದಾಗಿ ಪಾರ್ಕ್‌ಗಳ ಅಂದ ಕೆಡಲು ಪ್ರಮುಖ ಕಾರಣವಾಗಿದೆ. ಗಣ್ಯರ ಹೆಸರಿಗೆ ಕಳಂಕ

ನಗರ, ಪಟ್ಟಣಗಳಲ್ಲಿರುವ ಉದ್ಯಾನವನಗಳಿಗೆ ಸಮಾಜದ ಸುಧಾರಣೆಗಾಗಿ ಶ್ರಮಿಸಿರುವ ಗಣ್ಯರ, ಸ್ವಾತಂತ್ರ ಹೋರಾಟಗಾರರ ಹೆಸರುಗಳನ್ನು ನಾಮಕಾರಣ ಮಾಡಲಾಗಿದೆ. ಪುತ್ಥಳಿಗಳನ್ನು ಸಹ ನಿರ್ಮಾಣ ಮಾಡಲಾಗಿದೆ. ಅವರ ಹೆಸರುಗಳಿಗೆ ಧಕ್ಕೆ ಉಂಟು ಮಾಡುವ ರೀತಿ ನಿರ್ವಹಣೆ ಮಾಡಲಾಗುತ್ತಿದೆ.ಸುಭಾಷ್ ಚಂದ್ರಬೋಸ್, ಕುವೆಂಪು, ರಾಜ್‌ಕುಮಾರ್, ಸರ್ವಜ್ಞ, ಡಾ.ಬಿ.ಆರ್.ಅಂಬೇಡ್ಕರ್ ಹೀಗೆ ಹಲವಾರು ಗಣ್ಯರ ಪುತ್ಥಳಿಗಳನ್ನು ನಿರ್ಮಾಣ ಮಾಡಲಾಗಿದೆ. ವರ್ಷಕ್ಕೊಮ್ಮೆ ಬರುವ ಗಣ್ಯರ ಜಯಂತಿಯ ದಿನ ಸಹ ಸ್ವಚ್ಛಗೊಳಿಸುತ್ತಿಲ್ಲ. ಅವರ ಹೆಸರುಗಳಿಗೆ ಮಸಿ ಬಳಿಯುವಂತಹ ಕೆಲಸ ಸ್ಥಳೀಯ ಸಂಸ್ಥೆಗಳು ಮಾಡುತ್ತಿವೆ ಎಂಬ ಆರೋಪ ಕೇಳಿ ಬಂದಿದೆ.ಉದ್ಯಾನಗಳಲ್ಲಿರುವಂತಹ ನೀರಿನ ಕಾರಂಜಿಗಳಿಗೆ ನೀರು ಬಿಟ್ಟು ವರ್ಷಗಳೆ ಕಳೆದಿದ್ದು, ಉದ್ಯಾನವನದಲ್ಲಿರುವಂತಹ ಪ್ರಮುಖರ ಪ್ರತಿಮೆಗಳು, ಗೋಪುರ ಹಾಗೂ ಮಂಟಪಗಳು ಶಿಥಿಲಾವಸ್ಥೆ ತಲುಪಿ ಅಪಾಯದ ಸೂಚನೆ ನೀಡುತ್ತಿವೆ.ಡೆಂಘೀ, ಮಲೇರಿಯಾ ಭೀತಿ

ಪಾರ್ಕ್‌ಗಳಿಗೆ ಪ್ರತಿದಿನ ಮಕ್ಕಳು, ವೃದ್ಧರು ಆಗಮಿಸುತ್ತಾರೆ, ಸ್ವಚ್ಛತೆ ಮರೀಚಿಕೆಯಾಗಿರುವುದರಿಂದ ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗಿದೆ. ಇತ್ತೀಚಿನ ದಿನಗಳಲ್ಲಿ ಸ್ವಲ್ಪ ಪ್ರಮಾಣದಲ್ಲಿ ಮಳೆಯಾಗಿದ್ದು ಹುಲ್ಲು ಚಿಗುರು ಬಂದಿದೆ, ಅಸ್ವಚ್ಚತೆಯಿರುವುದರಿಂದ ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಇದರಿಂದಾಗಿ ಡೆಂಘಿ, ಮಲೇರಿಯಾ ಜ್ವರ ಹಡರುವ ಆತಂಕ ಎದುರಾಗಿದೆ.

ಉದ್ಯಾನಗಳಲ್ಲಿ ಮಕ್ಕಳಿಗಾಗಿ ಅಟೀಪಕರಣ ಹಾಗೂ ವಾಯುವಿಹಾರಕ್ಕೆ ಬರುವವರಿಗಾಗಿ ಮಲ್ಟೀಜಿಮ್ ಸಮಾಗ್ರಿಗಳನ್ನು ಅಳಡಿಸಲಾಗಿದೆ. ಆರಂಭದಲ್ಲಿ ಕಳಪೆ ಸಾಮಾಗ್ರಿಗಳನ್ನು ಅಳಡಿಸಿರುವುದರಿಂದ ಕೆಲವೇ ದಿನಗಳಲ್ಲಿ ಹಾಳಾದವು. ಆದರೆ ಅಧಿಕಾರಿಗಳನ್ನು ಅವುಗಳನ್ನು ದುರಸ್ಥಿಪಡಿಸುವ ಕೆಲಸಕ್ಕೆ ಮುಂದಾಗಿಲ್ಲ. ಕೋಟ್...........ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳಿಗೆ ಉದ್ಯಾನವನಗಳ ಬಗ್ಗೆ ಕಾಳಜಿಯಿಲ್ಲದಂತೆ ಕಾಣುತ್ತಿದೆ. ಮಳೆ ಗಾಲ ಶುರುವಾಗಿದ್ದು ಸಮರ್ಪಕವಾಗಿ ನಿರ್ವಹಣೆ ಮಾಡಿದರೆ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಬಹುದು. ಪಾರ್ಕ್‌ಗೆ ಬರುವ ಸಾರ್ವಜನಿಕರಿಗೆ ಕುಡಿಯುವ ನೀರು, ಶೌಚಾ ವ್ಯವಸ್ಥೆ ಮಾಡಬೇಕು.- ಹಾಬಿ ರಮೇಶ್, ಹಿರಿಯ ಕ್ರೀಡಾಪಟು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೈಲ್ವೆ ಪರೀಕ್ಷೆಯಲ್ಲಿ ಮತ್ತೆ ಕನ್ನಡಕ್ಕೆ ಕೊಕ್
ಓಡಿ ಹೋದ ಹೇಡಿ ಎನಿಸಿಕೊಳ್ಳುವುದಿಲ್ಲ. ಅಲ್ಲೇ ರಾಜಕೀಯ ಅಸ್ತಿತ್ವ ಕಂಡುಕೊಳ್ಳುತ್ತೇನೆ : ನಿಖಿಲ್‌